ಅಪರಿಚಿತ ವ್ಯಕ್ತಿ ಸಾವು
ಪಟ್ಟಣದ ಹಳೇ ವಿಠ್ಠಲ ದೇವಸ್ಥಾನದ ಬಳಿ ಇರುವ ಬಸ್ ನಿಲ್ದಾಣದಲ್ಲಿಶನಿವಾರ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ...
Vijaya Karnataka 29 Sep 2019, 5:00 am
ಎಂ.ಕೆ.ಹುಬ್ಬಳ್ಳಿ: ಪಟ್ಟಣದ ಹಳೇ ವಿಠ್ಠಲ ದೇವಸ್ಥಾನದ ಬಳಿ ಇರುವ ಬಸ್ ನಿಲ್ದಾಣದಲ್ಲಿಶನಿವಾರ ಅಪರಿಚಿತ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಈತ ನಡುಗುತ್ತ ಮಲಗಿದ್ದನ್ನು ಗಮನಿಸಿದ ಸ್ಥಳೀಯರು, ಆ್ಯಂಬುಲನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಬೇಕು ಅನ್ನುವಷ್ಟರಲ್ಲಿಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ. ಈತ 5 ಅಡಿ ಎತ್ತರವಿದ್ದು, ಬಿಳಿ ಅಂಗಿ, ಜೀನ್ಸ್ ಪ್ಯಾಟ್ ಧರಿಸಿದ್ದು, ಶವವನ್ನು ಕಿತ್ತೂರು ಶವಾಗಾರದಲ್ಲಿಇರಿಸಲಾಗಿದೆ. ಈ ವ್ಯಕ್ತಿ ಕಾಯಿಲೆಯಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಕಿತ್ತೂರು ಪಿಎಸ್ಐ ಸಂಜಯ ತಿಪ್ಪರೆಡ್ಡಿ, ಎಎಸ್ಐ ಎಂ.ಎಫ್.ಗಿರಿಯಾಲ, ಎಸ್.ಎಸ್.ಕಾಜಗಾರ, ಶಿವಾನಂದ, ವಿ.ಎಫ್.ಪಾಟೀಲ ಭೇಟಿ ನೀಡಿದರು. ಕಿತ್ತೂರು ಠಾಣೆಯಲ್ಲಿಪ್ರಕರಣ ದಾಖಲಾಗಿದೆ.