ಬೆಳಗಾವಿ: ಸಾಲಬಾಧೆ ತಾಳದೆ ರೈತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದ ನಿವಾಸಿ ಶೋಭಾ ಯಲ್ಲಪ್ಪ ಭಜಂತ್ರಿ (34) ಆತ್ಮಹತ್ಯೆ ಮಾಡಿಕೊಂಡವರು. ಸಹಕಾರಿ ಸಂಘ, ಸೊಸೈಟಿ, ಬ್ಯಾಂಕ್ಗಳಲ್ಲಿ ಇವರು 1.20 ಲಕ್ಷ ರೂ. ಸಾಲ ಹೊಂದಿದ್ದರು. ಮಳೆ ಕೈಕೊಟ್ಟು ಬೆಳೆ ಬಾರದ್ದರಿಂದ ಆದಾಯವಿಲ್ಲದೆ ಅವರಿಗೆ ಸಾಲ ತೀರಿಸಲಾಗಲಿಲ್ಲ. ಈ ಕಾರಣಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಲಬಾಧೆ: ರೈತ ಮಹಿಳೆ ಆತ್ಮಹತ್ಯೆ
ಸಾಲಬಾಧೆ ತಾಳದೆ ರೈತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದ ನಿವಾಸಿ ಶೋಭಾ ಯಲ್ಲಪ್ಪ ಭಜಂತ್ರಿ (34) ಆತ್ಮಹತ್ಯೆ ಮಾಡಿಕೊಂಡವರು...
Vijaya Karnataka 10 Feb 2019, 5:00 am