ಆ್ಯಪ್ನಗರ

ಸಾಲ ಬಾಧೆ: ರೈತ ಆತ್ಮಹತ್ಯೆ

ಬೈಲಹೊಂಗಲ: ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದ ರೈತರೊಬ್ಬರು ಸಾಲದ ಬಾಧೆ ...

Vijaya Karnataka 29 Jul 2019, 5:00 am
ಬೈಲಹೊಂಗಲ: ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದ ರೈತರೊಬ್ಬರು ಸಾಲದ ಬಾಧೆ ತಾಳದೇ ನೇಣಿಗೆ ಶರಣಾಗಿದ್ದಾರೆ.
Vijaya Karnataka Web debt impact farmer commits suicide
ಸಾಲ ಬಾಧೆ: ರೈತ ಆತ್ಮಹತ್ಯೆ


ಮಲ್ಲಪ್ಪ ಬಸವಣ್ಣೆಪ್ಪ ಮಿಂಡೋಳ್ಳಿ (45) ಮೃತ ರೈತ. ಹಿರೇಬಾಡಿಯಲ್ಲಿರುವ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ 3 ಲಕ್ಷ ರೂ., ಹಿರೇಬಾಗೇವಾಡಿ ಪಿಕೆಪಿಎಸ್‌ನಲ್ಲಿ 50 ಸಾವಿರ ರೂ. ಸೇರಿದಂತೆ ಕೈಗಡ ಸಾಲ ಮಾಡಿದ್ದರು. ಸರಿಯಾದ ಸಮಯಕ್ಕೆ ಮಳೆಯಾಗದ್ದರಿಂದ ಬೆಳೆಗಳು ಒಣಗಿ ಹೋಗಿದ್ದವು. ಇದರಿಂದ ಮಾನಸಿಕವಾಗಿ ನೊಂದು, ಸಾಲ ತೀರಿಸಲಾಗದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ರೈತನ ಕುಟುಂಬಕ್ಕೆ ಪರಿಹಾರ ಧನ ನೀಡಬೇಕೆಂದು ಗದ್ದಿಕರವಿನಕೊಪ್ಪ ಗ್ರಾಮಸ್ಥರು ಸರಕಾರವನ್ನು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ