ಆ್ಯಪ್ನಗರ

ಚರ್ಚೆ ನಂತರ ರಾಜಕೀಯ ನಡೆ ನಿರ್ಧಾರ

ತಾಲೂಕಿನಲ್ಲಿರುವ ಸರ್ವಾಧಿಕಾರಿ ಮನೋಭಾವನೆಯ ವಿರುದ್ಧ ...

Vijaya Karnataka 13 Oct 2019, 5:00 am
ಗೋಕಾಕ: ತಾಲೂಕಿನಲ್ಲಿರುವ ಸರ್ವಾಧಿಕಾರಿ ಮನೋಭಾವನೆಯ ವಿರುದ್ಧ ತಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳುವ ಮೂಲಕ ತಾವು ಮುಂಬರುವ ಉಪಚುನಾವಣೆಯಲ್ಲಿಸ್ಪರ್ಧಿಸುವ ಸಾಧ್ಯತೆಯನ್ನು ಪರೋಕ್ಷವಾಗಿ ಹೇಳಿದ್ದಾರೆ.
Vijaya Karnataka Web decision after political debate
ಚರ್ಚೆ ನಂತರ ರಾಜಕೀಯ ನಡೆ ನಿರ್ಧಾರ


''ಮುಂಬರುವ ಗೋಕಾಕ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಅ. 16ರಿಂದ ಗೋಕಾಕ ಕ್ಷೇತ್ರದ ಪ್ರತಿ ಗ್ರಾಮಗಳಿಗೆ ಸಮಾನ ಮನಸ್ಕ ಮುಖಂಡರೊಂದಿಗೆ ಭೇಟಿ ನೀಡಿ ಮತದಾರರ ಅನಿಸಿಕೆ ಮತ್ತು ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು. ನನ್ನ ಮುಂದಿನ ರಾಜಕೀಯ ನಡೆ ಅವರ ಅಭಿಪ್ರಾಯಕ್ಕೆ ಪೂರಕವಾಗಿ ಇರುತ್ತದೆಯೇ ಹೊರತು ಯಾವುದೇ ಒತ್ತಡ ಅಥವಾ ಅಧಿಕಾರದ ಆಮಿಷಕ್ಕೆ ಒಳಗಾಗಿರುವುದಿಲ್ಲ.

ಗೋಕಾಕ ತಾಲೂಕಿನಲ್ಲಿಇತ್ತೀಚಿನ ದಿನಗಳಲ್ಲಿಭ್ರಷ್ಟಾಚಾರದ ಬಗ್ಗೆ ಬಹುದೊಡ್ಡ ಚರ್ಚೆ ನಡೆಯುತ್ತಿದೆ. ಇಲ್ಲಿಸುಮಾರು 20 ವರ್ಷಗಳಿಂದ ನಿರಂತರ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಭಾಗದ ಸರ್ವಾಧಿಕಾರಿ ಮನೋಭಾವನೆಯ ರಾಜಕೀಯ ಶಕ್ತಿಗಳೇ ಇದರ ಹಿಂದಿನ ಸೂತ್ರಧಾರರಾಗಿರುವುದು ಸ್ಪಷ್ಟವಾಗಿದೆ. ಈ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಕೂಡಲೇ ಉನ್ನತ ಮಟ್ಟದ ತನಿಖೆಯಾಗಬೇಕಾಗಿದೆ'', ಎಂದು ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ