ಆ್ಯಪ್ನಗರ

ಪರಿಹಾರ ನೀಡಲು ವಿಳಂಬ, ಸಾರಿಗೆ ಸಂಸ್ಥೆ ಬಸ್‌ ಜಪ್ತಿ

ಬೆಳಗಾವಿ: ಅಪಘಾತ ಪ್ರಕರಣಗಳಲ್ಲಿ ಪರಿಹಾರ ನೀಡಲು ...

Vijaya Karnataka 22 Feb 2020, 5:00 am
ಬೆಳಗಾವಿ: ಅಪಘಾತ ಪ್ರಕರಣಗಳಲ್ಲಿಪರಿಹಾರ ನೀಡಲು ವಿಳಂಬ ಮಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೂರು ಬಸ್‌ಗಳನ್ನು ಜಿಲ್ಲಾನ್ಯಾಯಾಲಯ ಜಪ್ತಿ ಮಾಡಿದ್ದು, ಭಾಗಶಃ ಪರಿಹಾರ ಪಾವತಿಸಿದ ಬಳಿಕ ಎರಡು ಬಸ್‌ಗಳನ್ನು ಇಲಾಖೆಯ ಸುಪರ್ದಿಗೆ ಮರಳಿ ನೀಡಲಾಗಿದೆ.
Vijaya Karnataka Web delay in compensation bus foreclosure
ಪರಿಹಾರ ನೀಡಲು ವಿಳಂಬ, ಸಾರಿಗೆ ಸಂಸ್ಥೆ ಬಸ್‌ ಜಪ್ತಿ


ಪ್ರತ್ಯೇಕ ಮೂರು ಪ್ರಕರಣಗಳಲ್ಲಿಪರಿಹಾರ ನೀಡುವಂತೆ 2ನೇ ಹೆಚ್ಚುವರಿ ಜಿಲ್ಲಾನ್ಯಾಯಾಲಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಆದೇಶಿಸಿತ್ತು. ಆದರೆ, ಪರಿಹಾರವನ್ನು ಸಂಸ್ಥೆ ನೀಡರಲಿಲ್ಲ. ಆದ್ದರಿಂದ ಮೂರು ಬಸ್‌ಗಳನ್ನು ನ್ಯಾಯಾಲಯ ಜಪ್ತಿ ಮಾಡಿಕೊಂಡಿತ್ತು. ಇದಾದ ಬಳಿಕ ಬುಧವಾರ ಸಾರಿಗೆ ಸಂಸ್ಥೆ ಒಂದು ಪ್ರಕರಣದ 7 ಲಕ್ಷ ರೂ. ಹಾಗೂ ಮತ್ತೊಂದು ಪ್ರಕರಣದ 1.50 ಲಕ್ಷ ರೂ. ಪರಿಹಾರ ನೀಡಿ ಎರಡು ಬಸ್‌ಗಳನ್ನು ನ್ಯಾಯಾಲಯದಿಂದ ಬಿಡುಗಡೆ ಮಾಡಿಕೊಂಡಿದೆ. ಪೂರ್ಣ ಪ್ರಮಾಣದ ಪರಿಹಾರ ನೀಡದೇ ಇರುವುದರಿಂದ ಇನ್ನೊಂದು ಬಸ್‌ನ್ನು ನ್ಯಾಯಾಲಯ ತನ್ನ ಸುಪರ್ದಿಯಲ್ಲೇ ಇಟ್ಟುಕೊಂಡಿದೆ.

ಅಪಘಾತ ಪ್ರಕರಣಕ್ಕೆ ಪರಿಹಾರವಾಗಿ ಬೈಲಹೊಂಗಲ ತಾಲೂಕಿನ ಹೊಳಿಹೊಸುರು ಗ್ರಾಮದ ಮಹಾಂತೇಶ ಮೇಳವಂಕಿ ಅವರಿಗೆ 2.63 ಲಕ್ಷ ರೂ. ಹಾಗೂ ವಾರ್ಷಿಕ ಶೇ.9ರ ಬಡ್ಡಿ ದರದಂತೆ ಪರಿಹಾರ ನೀಡುವಂತೆ ಸಾರಿಗೆ ಸಂಸ್ಥೆಗೆ ನ್ಯಾಯಾಲಯ ಆದೇಶಿತ್ತು. ಅದೇ ರೀತಿ ಬೈಲಹೊಂಗಲ ತಾಲೂಕಿನ ಇಂದಿರಾ ನಗರದ ಸುಶೀಲವ್ವ ಡೊಂಬರ ಅವರು ಪರಿಹಾರ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿನ್ಯಾಯಾಲಯದ 7.85 ಲಕ್ಷ ರೂಪಾಯಿಯನ್ನು ವಾರ್ಷಿಕ ಶೇ.9ರ ಬಡ್ಡಿ ದರದಲ್ಲಿಪರಿಹಾರ ನೀಡಲು ಆದೇಶಿಸಿದೆ.

ಇನ್ನೊಂದು ಪ್ರಕರಣದಲ್ಲಿಧಾರವಾಡ ತಾಲೂಕಿನ ತಡಕೋಡ ಗ್ರಾಮದ ರೇಣುಕಾ ಪರದೇಶಿ ಸೇರಿ ನಾಲ್ವರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ8 ಲಕ್ಷ ರೂ. ಪರಿಹಾರ ನೀಡುವಂತೆ ಸಾರಿಗೆ ಸಂಸ್ಥೆಗೆ ಕೋರ್ಟ್‌ ಆದೇಶಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ