ಆ್ಯಪ್ನಗರ

ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಆಗ್ರಹ

ಕುಡಚಿ : ರೈತರೊಂದಿಗೆ ಸರಿಯಾಗಿ ಸ್ಪಂದಿಸದ ನಿಲಜಿ ಗ್ರಾಮದ ಬಸವೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಹಾಗೂ ಕಾರ್ಯದರ್ಶಿಯ ಮೇಲೆ ಕ್ರಮ ...

Vijaya Karnataka 24 Oct 2018, 5:00 am
ಕುಡಚಿ : ರೈತರೊಂದಿಗೆ ಸರಿಯಾಗಿ ಸ್ಪಂದಿಸದ ನಿಲಜಿ ಗ್ರಾಮದ ಬಸವೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಹಾಗೂ ಕಾರ್ಯದರ್ಶಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಂಗಳವಾರ ಕರ್ನಾಟಕ ರಕ್ಷ ಣಾ ವೇದಿಕೆ ಪದಾಧಿಕಾರಿಗಳು ಕುಡಚಿ ಶಾಖೆಯ ಬಿಡಿಸಿಸಿ ಬ್ಯಾಂಕ್‌ ಅಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web BEL-23 KUDACHI 1


ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಮಾಡಲಾಗಿರುವ ರೈತರ ಸಾಲಮನ್ನಾ ಮಾಹಿತಿ ಇಲ್ಲಿವರೆಗೂ ರೈತರಿಗೆ ನೀಡಿಲ್ಲ. ಇರುವ ಸಾಲದಲ್ಲಿ ಎಷ್ಟು ಮನ್ನಾ ಆಗಿರುವ ಸಾಲದ ಕುರಿತು ಮಾಹಿತಿ ಇಲ್ಲದೆ ರೈತರು ಗೊಂದಲದಲ್ಲಿ ಸಿಲುಕಿದ್ದಾರೆ. ಹೀಗಾಗಿ ಸಾಲಮನ್ನಾ ಯೋಜನೆಯ ಲಾಭ ಎಷ್ಟು ಜನ ರೈತರು ಪಡೆದುಕೊಂಡಿದ್ದಾರೆ. ಕೃಷಿ ಪತ್ತಿನ ಸಂಘದ ವಾರ್ಷಿಕ ವ್ಯವಹಾರ ಸೇರಿದಂತೆ ಇನ್ನಿತರ ಮಾಹಿತಿ ಏಳು ದಿನದಲ್ಲಿ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ವೇಳೆ ಕರವೇ ಮುಖಂಡರಾದ ಅಮೀನ ವಾಟೆ, ಬೀರಪ್ಪ ನರಟ್ಟಿ, ಅನಿಲ ಅಂಭಿ, ಮಂಜು ಭೀರಣಗಿ, ಪ್ರದೀಪ ಪಾಟೀಲ, ರಾಜು ಲೋಕೂರೆ, ನಿಂಗಪ್ಪ ಬಿರಡಿ, ಮಹಾದೇವ ಪಾಟೀಲ, ಗ್ರಾಮಸ್ಥರಾದ ಚಿದಾನಂದ ಧುಮಾಳೆ, ಗಜಾನನ ಲೋಕೂರೆ, ಲಕ್ಷ ್ಮಣ ಗೊಡ್ಡಾಳೆ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ