ಆ್ಯಪ್ನಗರ

ಪಾಲಿಕೆ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹ

ಬೆಳಗಾವಿ: ಖರ್ಚು ಕಡಿಮೆ ಮಾಡಿ ಆದಾಯ ಹೆಚ್ಚಿಗೆ ಸಂಗ್ರಹವಾಗುವಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಪಾಲಿಕೆಯ ಹಿರಿಯ ಸದಸ್ಯರು ನೂತನ ಆಯುಕ್ತ ಇಬ್ರಾಹಿಮ್‌ ...

Vijaya Karnataka 22 Feb 2019, 5:00 am
ಬೆಳಗಾವಿ : ಖರ್ಚು ಕಡಿಮೆ ಮಾಡಿ ಆದಾಯ ಹೆಚ್ಚಿಗೆ ಸಂಗ್ರಹವಾಗುವಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಪಾಲಿಕೆಯ ಹಿರಿಯ ಸದಸ್ಯರು ನೂತನ ಆಯುಕ್ತ ಇಬ್ರಾಹಿಮ್‌ ಮೈಗೂರ ಅವರಿಗೆ ಸಲಹೆ ಮಾಡಿದ್ದಾರೆ.
Vijaya Karnataka Web BLG-2102-2-52-21RAJU-4


ಆಯುಕ್ತರ ಕಚೇರಿಯಲ್ಲಿ ಗುರುವಾರ ಔಪಚಾರಿಕ ಸಭೆ ನಡೆಸಿದ ಸದಸ್ಯರು ಕಂದಾಯ ವಿಭಾಗದವರು ಆಸ್ತಿ ತೆರಿಗೆ ಮತ್ತು ಬಾಕಿ ವಸೂಲಿ ಮಾಡುವಲ್ಲಿ ಕಾಳಜಿ ತೋರುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಕೆಲಸಗಳಿಗೂ ತೊಂದರೆಯಾಗುತ್ತಿದೆ. ಬರೀ ಖರ್ಚು ಹೆಚ್ಚಾದರೆ ಸಂಪನ್ಮೂಲ ಹೊಂದಿಸುವುದು ಕಷ್ಟವಾಗುತ್ತದೆ. ಕಾರಣ ಈ ಬಗ್ಗೆ ಗಮನಹರಿಸಬೇಕು ಮತ್ತು ಪ್ರಸಕ್ತ ಬಜೆಟ್‌ನಿಂದಲೇ ಇದು ಅನುಷ್ಠಾನಕ್ಕೆ ಬರಬೇಕು ಎಂದು ತಿಳಿಸಿದು. ಆಯುಕ್ತರು ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು.

ಮಾಜಿ ಮಹಾಪೌರರಾದ ಕಿರಣ ಸಾಯಿನಾಕ, ಸರಿತಾ ಪಾಟೀಲ, ಹಿರಿಯ ಸದಸ್ಯ ರಮೇಶ ಸೊಂಟಕ್ಕಿ, ಅಜ್ಜಪ್ಪ ಬಡಿಗೇರ, ಅನುಶ್ರೀ ದೇಶಪಾಂಡೆ, ಮಾಯಾ ಕಡಲೋಲ್ಕರ್‌ ಹಾಗೂ ಉಪಆಯುಕ್ತ ಕಂದಾಯ ಬಿ.ಐ. ಜಗದೀಶ್‌, ಮುಖ್ಯಲೆಕ್ಕಾಧಿಕಾರಿ ರಾಮಪ್ಪ ಹಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ