ಆ್ಯಪ್ನಗರ

ಡಿ ಗ್ರುಪ್‌ ಬಡಾವಣೆಗೆ ಸಮರ್ಪಕ ನೀರು ಪೂರೈಸಿ

ಬೆಳಗಾವಿ: ಸ್ಥಳೀಯ ಸಹ್ಯಾದ್ರಿ ನಗರದಲ್ಲಿನ 'ಡಿ' ಗ್ರುಪ್‌ ನೌಕರರ ಬಡಾವಣೆಯಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ರಾಜ್ಯ ...

Vijaya Karnataka 12 Jun 2019, 5:00 am
ಬೆಳಗಾವಿ : ಸ್ಥಳೀಯ ಸಹ್ಯಾದ್ರಿ ನಗರದಲ್ಲಿನ 'ಡಿ' ಗ್ರುಪ್‌ ನೌಕರರ ಬಡಾವಣೆಯಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ರಾಜ್ಯ 'ಡಿ' ಗ್ರುಪ್‌ ನೌಕರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web BEL-11 LBS 2


46 ಕುಟುಂಬಗಳು ವಾಸಿಸುವ ಈ ಬಡಾವಣೆಯಲ್ಲಿ ಜಲಮಂಡಳಿಯಿಂದ 12 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಇಷ್ಟು ದಿನಗಳವರೆಗೆ ನೀರು ಸಂಗ್ರಹಿಸಿ ಕುಡಿಯುವ ಸ್ಥಿತಿ ಬಡಾವಣೆಯ ಜನರದ್ದಾಗಿದೆ. ಬಡಾವಣೆಯಲ್ಲಿ ನೀರಿನ ಸಮಸ್ಯೆ ನಿರಂತರವಾಗಿದ್ದು, ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಮನವಿಯಲ್ಲಿ ದೂರಿದ್ದಾರೆ.

ನೇರವಾಗಿ ನೀರು ಪೂರೈಸಿ :
ಸಹ್ಯಾದ್ರಿ ನಗರದ ಪೊಲೀಸ್‌ ಬಡಾವಣೆ ಹಾಗೂ ಸಾರಥಿ ನಗರದ ಬಡಾವಣೆಯಲ್ಲಿ ನೀರು ಸಂಗ್ರಹಿಸಿ ಅಲ್ಲಿಂದ ಪೈಪಲೈನ್‌ ಮೂಲಕ ಡಿ ಗ್ರುಪ್‌ ಬಡಾವಣೆಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ನಮ್ಮ ಬಡಾವಣೆಗೆ ಕಡಿಮೆ ಪ್ರಮಾಣದ ನೀರು ಪೂರೈಕೆಯಾಗುತ್ತಿದ್ದು, ಇದನ್ನು ತಪ್ಪಿಸಲು ಡಿ ಗ್ರುಪ್‌ ಬಡಾವಣೆಗೆ ನೇರವಾಗಿ ನೀರು ಪೂರೈಕೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ವೇಳೆ ಎಂ.ಬಿ. ಮೇತ್ರಿ, ಆರ್‌.ವಿ. ಸುಳಕಡೆ, ತುಕಾರಾಮ ಧಾಮಣೆಕರ, ಸಂಜು ಜಾಂಗಳೆ, ಬಸವರಾಜ ರಾಯವ್ವಾಗೋಳ, ಶಂಕರ ಕಲಕಾಮಕರ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ