ಆ್ಯಪ್ನಗರ

ತಹಸೀಲ್ದಾರರ ವರ್ಗಾವಣೆ ರದ್ದತಿಗೆ ಮನವಿ

ನಿಪ್ಪಾಣಿ: ನಿಪ್ಪಾಣಿ ತಹಸೀಲ್ದಾರ ಮಹಾದೇವ ಬಣಸಿ ಅವರ ವರ್ಗಾವಣೆ ರದ್ದುಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷ ಣಾ ವೇದಿಕೆ ತಾಲೂಕು ಘಟಕದ ವತಿಯಿಂದ ಚಿಕ್ಕೋಡಿ ...

Vijaya Karnataka 17 Jul 2019, 5:00 am
ನಿಪ್ಪಾಣಿ : ನಿಪ್ಪಾಣಿ ತಹಸೀಲ್ದಾರ ಮಹಾದೇವ ಬಣಸಿ ಅವರ ವರ್ಗಾವಣೆ ರದ್ದುಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷ ಣಾ ವೇದಿಕೆ ತಾಲೂಕು ಘಟಕದ ವತಿಯಿಂದ ಚಿಕ್ಕೋಡಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web BEL-16NPN1


ಘಟಕದ ಅಧ್ಯಕ್ಷ ಕಪೀಲ್‌ ಕಮತೆ ಮಾತನಾಡಿ, ''ತಹಸೀಲ್ದಾರ ಬಣಸಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ. ಲೋಕಸಭೆ ಚುನಾವಣೆ ಮುಂಚೆ ತಾಲೂಕಿಗೆ ಬಂದಿದ್ದು, ಕೆಲವೇ ತಿಂಗಳುಗಳಲ್ಲಿ ಗಡಿಭಾಗ ನಿಪ್ಪಾಣಿ ತಾಲೂಕಿನ ಹಿಂದುಳಿದ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸರಕಾರದ ಎಲ್ಲ ಯೋಜನೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ನೂತನ ತಾಲೂಕಿಗೆ ಇಂತಹ ಅನುಭವಿ ಅಧಿಕಾರಿಯ ಅಗತ್ಯವಿದೆ'', ಎಂದರು.

ಕರವೇ ಚಿಕ್ಕೋಡಿ ಘಟಕದ ಅಧ್ಯಕ್ಷ ನಾಗೇಶ ಮಾಳಿ, ಅವಿನಾಶ ಠೊಂಬರೆ, ಜಯವಂತ ಪಾಟೀಲ, ಸೂರಜ ಶಿಂಧೆ, ವಿಠ್ಠಲ ಬಾಣಸೆ, ಅಪ್ಪಾಸಾಹೇಬ ಸಪ್ತಸಾಗರ, ಬೀರಣ್ಣಾ ಢವಣೆ, ಹಾಲಪ್ಪ ಬೋರಗುಂಡೆ, ಸಿದ್ದು ವಾಸ್ಕರ, ಸಚೀನ ಅನುಸೆ, ಅಮೋಲ ಮಾನೆ, ಬಾಜೀರಾವ ಶಿಂಧೆ, ಕುಲದೀಪ ಚವ್ಹಾಣ, ಸೌರಭ ಪಾಟೀಲ, ಸಂದೀಪ ವಡ್ಡರ ಮತ್ತಿತರರು ಉಪಸ್ಥಿತರಿದ್ದರು.

ಇದೊಂದು ರಾಜಕೀಯ ಪ್ರೇರಿತ ವರ್ಗಾವಣೆ. ತಕ್ಷಣ ವರ್ಗಾವಣೆ ರದ್ದುಪಡಿಸದಿದ್ದರೆ ಜನರ ಜತೆ ಸೇರಿ ಉಗ್ರ ಹೋರಾಟ ಹಾಗೂ ಧರಣಿ ಸತ್ಯಾಗ್ರಹ ನಡೆಸಲಾಗುವುದು.
- ಕಪೀಲ್‌ ಕಮತೆ, ಕರವೇ ಅಧ್ಯಕ್ಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ