ಆ್ಯಪ್ನಗರ

ಜೆಡಿಎಸ್‌ ಜಿಲ್ಲಾಧ್ಯಕ್ಷ ರ ಬದಲಾವಣೆಗೆ ಆಗ್ರಹ

ಬೆಳಗಾವಿ: ಜಿಲ್ಲಾ ಜಾತ್ಯತೀತ ಜನತಾದಳದ ಅಧ್ಯಕ್ಷ ಸ್ಥಾನದಿಂದ ಶಂಕರ ಮಾಡಲಗಿ ಅವರನ್ನು ಬದಲಾಯಿಸಿ ಬೇರೆಯವರನ್ನು ನೇಮಕ ಮಾಡಬೇಕೆಂದು ಜೆಡಿಎಸ್‌ ಕಾರ್ಯಕರ್ತರು ಮತ್ತು ಇತರೆ ಪದಾಧಿಕಾರಿಗಳು ...

Vijaya Karnataka 17 Aug 2019, 5:00 am
ಬೆಳಗಾವಿ: ಜಿಲ್ಲಾ ಜಾತ್ಯತೀತ ಜನತಾದಳದ ಅಧ್ಯಕ್ಷ ಸ್ಥಾನದಿಂದ ಶಂಕರ ಮಾಡಲಗಿ ಅವರನ್ನು ಬದಲಾಯಿಸಿ ಬೇರೆಯವರನ್ನು ನೇಮಕ ಮಾಡಬೇಕೆಂದು ಜೆಡಿಎಸ್‌ ಕಾರ್ಯಕರ್ತರು ಮತ್ತು ಇತರೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಶಂಕರ ಮಾಡಲಗಿ ತಾವೊಬ್ಬರೇ ಪಕ್ಷವೆಂಬಂತೆ ಓಡಾಡುತ್ತಿದ್ದಾರೆ. ವೈಯಕ್ತಿಕ ಲಾಭವನ್ನಷ್ಟೇ ನೋಡುತ್ತಿದ್ದಾರೆ. ಕಾರ್ಯಕರ್ತ ಮತ್ತು ಇತರೆ ಪದಾಧಿಕಾರಿಗಳಿಗೆ ಗೌರವ ನೀಡುತ್ತಿಲ್ಲ. ಪಕ್ಷದ ಹಿರಿಯರು ಜಿಲ್ಲೆಗೆ ಬಂದಾಗ ಮಾಹಿತಿಯನ್ನು ಪದಾಧಿಕಾರಿಗಳಿಗೆ ಕೊಡುವುದಿಲ್ಲ. ನೆರೆ ಸಂತ್ರಸ್ತರನ್ನು ಭೇಟಿ ಮಾಡಲು ನಿಖಿಲ್‌ ಕುಮಾರಸ್ವಾಮಿ, ಎನ್‌.ಎಚ್‌. ಕೋನರಡ್ಡಿಅವರು ಬಂದಾಗಲೂ ಹೀಗೆ ಆಗಿದೆ. ಅವರು ತಂದಿದ್ದ ಪರಿಹಾರ ಸಾಮಗ್ರಿಗಳಲ್ಲಿ ಕೆಲವಷ್ಟನ್ನು ಕೆಲವೊಂದು ಕಡೆಗೆ ವಿತರಣೆ ಮಾಡಲಾಗಿದೆ. ಉಳಿದದ್ದು ಏನಾಯಿತೆಂದು ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜೆಡಿಎಸ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ಸೈಯ್ಯದ ಮನ್ಸೂರ, ಜಿಲ್ಲಾ ವಕ್ತಾರ ಗಿರೀಶ್‌ ಗೋಕಾಕ, ಜಿಲ್ಲಾ ಎಸ್‌ಸಿ, ಎಸ್ಟಿ ಘಟಕದ ಅಧ್ಯಕ್ಷ ಶಿವಾನಂದ ಸಂಜೀವಗೋಳ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧರ್ಮರಾಜ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಂತೋಷ ಉಪಾಧ್ಯ, ರಾಜ್ಯ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ತಾಹೀರಖಾನ್‌ ಪಠಾಣ, ಸವದತ್ತಿ ತಾಲೂಕಾ ಕಾರ್ಯದರ್ಶಿ ರೇಣಕೆಗೌಡ, ಅಷ್ಪಕ ಮಡಕಿ, ಮುರಗೇಶ ಹಿರೇಮಠ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Vijaya Karnataka Web BLG-1608-2-52-16RAJU-8

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ