ಆ್ಯಪ್ನಗರ

ಕಲುಷಿತಗೊಂಡ ಮಲಪ್ರಭಾ ನದಿ ನೀರು ಶುಚಿತ್ವಕ್ಕೆ ಆಗ್ರಹ

ಬೈಲಹೊಂಗಲ: ತಾಲೂಕಿನ ನಯಾನಗರ ಗ್ರಾಮದ ...

Vijaya Karnataka 27 Dec 2019, 5:00 am
ಬೈಲಹೊಂಗಲ: ತಾಲೂಕಿನ ನಯಾನಗರ ಗ್ರಾಮದ ಬಳಿ ಮಲಪ್ರಭಾ ನದಿ ನೀರು ಕಲುಷಿತಗೊಂಡು ದುರ್ನಾತ ಹರಡಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
Vijaya Karnataka Web 26HTP2_53
ನಯಾನಗರ ಗ್ರಾಮದ ಬಳಿ ಮಲಪ್ರಭಾ ನದಿ ನೀರು ಕಲುಷಿತಗೊಂಡಿರುವುದು.


ನದಿಯಲ್ಲಿಪಾಚಿ ಬೆಳೆದಿದೆ. ಕಲುಷಿತ ನೀರು ಸರಿಯಾಗಿ ಶುದ್ಧೀಕರಣವಾಗದೇ ಮನೆಯ ನಲ್ಲಿಗಳಲ್ಲಿಬರುತ್ತಿದೆ. ಅದನ್ನು ಕುಡಿದ ಜನರ ಆರೋಗ್ಯ ಏರುಪೇರಾಗಿ ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನದಿ ಮೇಲಿನ ಸೇತುವೆ ಮುಖಾಂತರ ಪ್ರಯಾಣಿಸುವವರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ.

15 ದಿನಗಳ ಹಿಂದೆಯೇ ನದಿ ನೀರು ಕಲುಷಿತಗೊಂಡಿರುವ ಬಗ್ಗೆ ಸಾರ್ವಜನಿಕರು ಪುರಸಭೆ ಮುಖ್ಯಾಧಿಕಾರಿಗೆ, ಪರಿಸರ ಅಭಿಯಂತರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದನ್ನು ಕಂಡೂ ಕಾಣದಂತಿರುವ ಈ ಅಧಿಕಾರಿಗಳಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ನಾಗರಿಕರಾದ ಸೋಮನಾಥ ಸೊಪ್ಪಿಮಠ, ನಾರಾಯಣ ನಲವಡೆ, ಮಂಜುನಾಥ ಜ್ಯೋತಿ, ಪ್ರಶಾಂತ ಪತ್ರಿಮಠ ಮಾತನಾಡಿ, ಅಧಿಕಾರಿಗಳು ಎಚ್ಚೆತ್ತುಕೊಂಡು ಕಲುಷಿತಗೊಂಡಿರುವ ನದಿ ನೀರು ಶುಚಿತ್ವಕ್ಕೆ ಮುಂದಾಗಬೇಕು. ಇಲ್ಲವಾದರೆ ಮುಂದಾಗುವ ದುರಂತಗಳಿಗೆ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆಂದು ಎಚ್ಚರಿಸಿದ್ದಾರೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ ಪ್ರತಿಕ್ರಿಯಿಸಿ, ನದಿ ನೀರನ್ನು ಜಾಕ್‌ವೆಲ್‌ ಮೂಲಕ ವಾಟರ್‌ ಟ್ಯಾಂಕ್‌ಗೆ ಬಿಟ್ಟು ಶುದ್ಧೀಕರಣ ಮಾಡಿ ಜನರಿಗೆ ಕುಡಿಯಲು ಬಿಡಲಾಗುತ್ತದೆ. ನದಿ ದಡದಲ್ಲಿನೀರು ಕಲುಷಿತಗೊಂಡಿದೆ. ಸ್ಥಳ ಪರಿಶೀಲಿಸಿ ಯಾವುದೇ ತೊಂದರೆ ಆಗದ ರೀತಿಯಲ್ಲಿ ನೀರು ಪೂರೈಕೆ ಮಾಡಲಾಗುವುದು ಎಂದು ಪತ್ರಿಕೆಗೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ