ಆ್ಯಪ್ನಗರ

ಗಾಂಧೀಜಿ ನಿಂದಿಸಿದ ಸಂಸದ ಅನಂತಕುಮಾರ್‌ ವಜಾಕ್ಕೆ ಆಗ್ರಹ

ರಾಯಬಾಗ: ಮಹಾತ್ಮ ಗಾಂಧೀಜಿಯವರ ಹೋರಾಟ ಕುರಿತು ಅವಹೇಳನಕಾರಿ ...

Vijaya Karnataka 11 Feb 2020, 5:00 am
ರಾಯಬಾಗ: ಮಹಾತ್ಮ ಗಾಂಧೀಜಿಯವರ ಹೋರಾಟ ಕುರಿತು ಅವಹೇಳನಕಾರಿ ಮತ್ತು ಬೇಜವಾಬ್ದಾರಿ ಹೇಳಿಕೆ ನೀಡಿದ ಸಂಸದ ಅನಂತಕುಮಾರ ಹೆಗಡೆಯವರನ್ನು ಸಂಸದ ಸ್ಥಾನದಿಂದ ಉಚ್ಛಾಟಿಸಬೇಕೆಂದು ಆಗ್ರಹಿಸಿ ರಾಯಬಾಗ ಮತ್ತು ಕುಡಚಿ ಬ್ಲಾಕ್‌ ಕಾಂಗ್ರೆಸ್‌ ಕಮಿಟಿಯಿಂದ ಗ್ರೇಡ್‌-2 ತಹಶೀಲ್ದಾರ್‌ ಪರಮಾನಂದ ಮಂಗಸೂಳೆ ಮೂಲಕ ರಾಷ್ಟ್ರಪತಿ ರಮಾನಾಥ ಕೋವಿಂದ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
Vijaya Karnataka Web 10RAIBAG3PHOTO_53


ರಾಯಬಾಗ ಬ್ಲಾಕ್‌ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ಈರಗೌಡ ಪಾಟೀಲ ಮಾತನಾಡಿ, ಸಂಸದ ಅನಂತಕುಮಾರ ಹೆಗಡೆ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ಗಾಂಧೀಜಿಯವರ ಹೆಸರನ್ನು ಉಲ್ಲೇಖಿಸದೇ ಅವರಿಗೆ ಹೋಲಿಕೆಯಾಗುವಂತೆ ದುರದ್ದೇಶಪೂರ್ವಕವಾಗಿ ಅವಮಾನಕರ ರೀತಿಯಲ್ಲಿದೇಶ ವಿರೋಧಿ ಹೇಳಿಕೆ ನೀಡಿರುವುದು ಖಂಡನೀಯ ಎಂದರು.

ಇಂಥ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಸಂಸದ ಅನಂತಕುಮಾರ ಹೆಗಡೆ ಅವರನ್ನು ಸಂಸದ ಸ್ಥಾನದಿಂದ ಉಚ್ಛಾಟಿಸಬೇಕೆಂದು ರಾಷ್ಟ್ರಪತಿಗಳನ್ನು ಒತ್ತಾಯಿಸಿದರು.

ಕುಡಚಿ ಬ್ಲಾಕ್‌ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ರೇವಣ್ಣ ಸರವ, ತಾಪಂ ಸದಸ್ಯರಾದ ನಾಮದೇವ ಕಾಂಬಳೆ, ಬಸವರಾಜ ಕಿಚಡೆ, ಯುವ ಧುರೀಣ ಮಹಾವೀರ ಮೋಹಿತೆ, ಧೂಳಗೌಡ ಪಾಟೀಲ, ರಾಜು ಶಿರಗಾಂವೆ, ಮಾರುತಿ ನಾಯಿಕ, ಹಾಜಿ ಮುಲ್ಲಾ, ಅರ್ಜುನ ಬಂಡಗರ, ಅಪ್ಪಾಸಾಬ ಕುಲಗುಡೆ, ನಾನಾಸಾಬ ಸೋನಾರ, ಶ್ರವಣ ಕಾಂಬಳೆ, ಬಿ.ಎನ್‌.ಬಂಡಗರ, ಕುಂತಿನಾಥ ಮಗದುಮ್ಮ, ರಸೂಲ್‌ ಮೊಮಿನ್‌, ರಮೇಶ ಬೆಳಗಲಿ ಸೇರಿದಂತೆ ರಾಯಬಾಗ ಮತ್ತು ಕುಡಚಿ ಬ್ಲಾಕ್‌ ಕಾಂಗ್ರೆಸ್‌ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ