ಆ್ಯಪ್ನಗರ

ಚಚಡಿ ಏತನೀರಾವರಿ, ಬಳ್ಳಾರಿ ನಾಲಾ ಯೋಜನೆ ಅನುಷ್ಠಾನಕ್ಕೆ ಆಗ್ರಹ

ನೇಸರಗಿ: ಚಚಡಿ ಏತ ನೀರಾವರಿ ಹಾಗೂ ಬಳ್ಳಾರಿ ನಾಲಾ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ವನ್ನೂರ, ಸುನಕುಂಪಿ, ಮಾಸ್ತಮರಡಿ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ...

Vijaya Karnataka 24 Mar 2019, 5:00 am
ನೇಸರಗಿ : ಚಚಡಿ ಏತ ನೀರಾವರಿ ಹಾಗೂ ಬಳ್ಳಾರಿ ನಾಲಾ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ವನ್ನೂರ, ಸುನಕುಂಪಿ, ಮಾಸ್ತಮರಡಿ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲಾಧಿಕಾರಿ, ನೀರಾವರಿ ಇಲಾಖೆ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಿದರು.
Vijaya Karnataka Web BEL-23NSG1


2005ರಲ್ಲಿ ಚಚಡಿ ಏತನೀರಾವರಿ ಕಾರ್ಯ ಆರಂಭವಾಗಿ ಇಲ್ಲಿಯವರೆಗೆ ಕಾರ್ಯಗತವಾಗಿಲ್ಲ. ಬಳ್ಳಾರಿ ನಾಲಾ ಯೋಜನೆ ಕಾರ್ಯವೂ ಸ್ಥಗಿತಗೊಂಡಿದ್ದರಿಂದ ಸ್ಥಳೀಯರು ನೀರಾವರಿಯಿಂದ ವಂಚಿತರಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸೇರಿಸಿ:
ನಮ್ಮ ಗ್ರಾಮಗಳು ಕಿತ್ತೂರ ಮತಕ್ಷೇತ್ರ, ಕಾರವಾರ ಲೋಕಸಭಾ ಕ್ಷೇತ್ರಕ್ಕೆ ಸೇರಿರುವುದರಿಂದ ಕಿತ್ತೂರ, ಕಾರವಾರ ದೂರದ ಪ್ರದೇಶಕ್ಕೆ ಹೋಗಿ ಮತಕ್ಷೇತ್ರದ ಅಭಿವೃದ್ಧಿ ಕಾರ್ಯ ಮಾಡಿಕೊಳ್ಳಲು ತೊಂದರೆಯಾಗಿದೆ. ಹೀಗಾಗಿ ಮೊದಲಿದ್ದ ಹಾಗೆ ಬೈಲಹೊಂಗಲಕ್ಕೆ ವಿಧಾನಸಭಾ ಕ್ಷೇತ್ರ, ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ನಮ್ಮ ಗ್ರಾಮಗಳನ್ನು ಸೇರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ವೇಳೆ ಶೇಖರ ಕೊಮನ್ನವರ, ಪಿ.ಎಂ. ದೇಸಾಯಿ, ಎಚ್‌.ಡಿ. ಕಿಲ್ಲೇದಾರ, ಗ್ರಾಪಂ ಉಪಾಧ್ಯಕ್ಷ ಎಸ್‌.ವಿ. ಸೂರನ್ನವರ, ಸತ್ಯನಾಯ್ಕ ನಾಯ್ಕರ, ಎಸ್‌.ವಿ. ಹಿರೇಮಠ, ಹಣಮಂತ ದೊಡ್ಡನ್ನವರ, ಈರಪ್ಪ ಬಡಿಗೇರ, ಸೋಮಶೇಖರ ತಿರಕನ್ನವರ, ಭೀಮಶಿ ಸೋಮನಟ್ಟಿ, ಇನ್ನಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ