ಆ್ಯಪ್ನಗರ

ವಕಿಲರ ಹಿತರಕ್ಷಣೆ ಕಾಯ್ದೆ ರಾಷ್ಟ್ರ ಮಟ್ಟದಲ್ಲಿ ಜಾರಿಗೆ ಆಗ್ರಹ

ರಾಯಬಾಗ: ವಕೀಲರ ರಕ್ಷ ಣೆ ಕಾಯ್ದೆಯನ್ನು ರಾಷ್ಟ್ರ ಮಟ್ಟದಲ್ಲಿ ಜಾರಿಗೆ ತರಲು ಕೇಂದ್ರ ಸರಕಾರವನ್ನು ಒತ್ತಾಯಿಸಿ ಭಾರತೀಯ ವಕೀಲರ ಪರಿಷತ್‌ ಕರೆ ನೀಡಿರುವ ರಾಷ್ಟ್ರ ...

Vijaya Karnataka 16 Feb 2019, 5:00 am
ರಾಯಬಾಗ : ವಕೀಲರ ರಕ್ಷ ಣೆ ಕಾಯ್ದೆಯನ್ನು ರಾಷ್ಟ್ರ ಮಟ್ಟದಲ್ಲಿ ಜಾರಿಗೆ ತರಲು ಕೇಂದ್ರ ಸರಕಾರವನ್ನು ಒತ್ತಾಯಿಸಿ ಭಾರತೀಯ ವಕೀಲರ ಪರಿಷತ್‌ ಕರೆ ನೀಡಿರುವ ರಾಷ್ಟ್ರ ವ್ಯಾಪ್ತಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಸ್ಥಳೀಯ ವಕೀಲರ ಸಂಘದ ಸದಸ್ಯರು ಕೋರ್ಟ್‌ ಕಲಾಪಗಳಿಂದ ಹೊರಗುಳಿದು ತಹಸೀಲ್ದಾರ್‌ ಮೂಲಕ ರಾಜ್ಯಪಾಲರು ಹಾಗೂ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.
Vijaya Karnataka Web BEL-15RAIBAG1PHOTO


ಬೆಳಗ್ಗೆ ಪಟ್ಟಣದ ನ್ಯಾಯವಾದಿಗಳ ಸಭೆ ಕರೆದು ಸರ್ವಾನುಮತದ ನಿರ್ಣಯ ಕೈಗೊಂಡು ಕೋರ್ಟ್‌ ಕಲಾಪಗಳಿಂದ ಹೊರಗುಳಿದರು. ಭಾರತೀಯ ವಕೀಲರ ಪರಿಷತ್ತು ಕರೆ ನೀಡಿರುವ ರಾಷ್ಟ್ರ ವ್ಯಾಪ್ತಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಠರಾವು ಪಾಸು ಮಾಡಿ ಮನವಿ ಸಲ್ಲಿಸಲಾಯಿತು.

ರಾಜ್ಯ ಮತ್ತು ಕೇಂದ್ರ ಸರಕಾರಗಳು ಮಂಡಿಸಿರುವ ಬಜೆಟ್‌ಗಳಲ್ಲಿ ವಕೀಲರ ಸಮುದಾಯವನ್ನು ಕಡೆಗಣಿಸಿವೆ. ಇನ್ನಾದರೂ ಎಚ್ಚೆತ್ತುಕೊಂಡು ವಕೀಲರ ರಕ್ಷ ಣೆಗೆ ಕಾಯ್ದೆ ಜಾರಿಗೆ ಮಾಡಬೇಕು. ಮತ್ತು ವಕೀಲರ ಹಿತ ಕಾಪಾಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ವಕೀಲರ ಸಂಘದ ಅಧ್ಯಕ್ಷ ಪಿ.ಆರ್‌. ಗುಡೋಡಗಿ, ಬಿ.ಆರ್‌. ಪಡಲಾಳೆ, ಎಸ್‌.ಬಿ. ಪಾಟೀಲ, ಎ.ಎಂ. ಗೆಜ್ಜೆ, ಸಿ.ಟಿ. ಖೋತ, ರವಿ ಪಾಟೀಲ, ಆರ್‌.ಎಸ್‌. ಹೊಳೆಪ್ಪಗೋಳ ಸೇರಿದಂತೆ ಅನೇಕ ವಕೀಲರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ