ಆ್ಯಪ್ನಗರ

ಕಳಸಾ - ಬಂಡೂರಿ ಯೋಜನೆ ಕಾಮಗಾರಿ ಆರಂಭಕ್ಕೆ ಆಗ್ರಹ

ಮುನವಳ್ಳಿ : ಕಳಸಾ - ಬಂಡೂರಿ ಯೋಜನೆಯ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು 450 ಮೀ...

Vijaya Karnataka 19 Nov 2018, 5:00 am
ಮುನವಳ್ಳಿ : ಕಳಸಾ - ಬಂಡೂರಿ ಯೋಜನೆಯ ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು. 450 ಮೀ. ಕಾಮಗಾರಿ ಕೈಗೊಂಡರೆ ಸುಲಭವಾಗಿ 6 ಹಳ್ಳಗಳು ಮಲಪ್ರಭಾ ನದಿಯನ್ನು ಸೇರುತ್ತವೆ ಎಂದು ಕಳಸಾ ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಹೇಳಿದರು.
Vijaya Karnataka Web demand for kalsa bunduri project to begin work
ಕಳಸಾ - ಬಂಡೂರಿ ಯೋಜನೆ ಕಾಮಗಾರಿ ಆರಂಭಕ್ಕೆ ಆಗ್ರಹ


ಭಾನುವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲಪ್ರಭಾ ನದಿಗೆ ಅಣೆಕಟ್ಟು ಕಟ್ಟುವಾಗಲೇ ಕೇಂದ್ರ ಸರಕಾರ ಹಾಗೂ ಪರಿಸರ ಇಲಾಖೆ ಸೇರಿದಂತೆ ಎಲ್ಲ ಕಾನೂನು ಕ್ರಮಗಳನ್ನು ಕೈಕೊಂಡೇ ನಿರ್ಮಿಸಲಾಗಿದೆ. ಹತ್ತಾರು ವರ್ಷಗಳಾದರೂ ಅಣೆಕಟ್ಟು ತುಂಬುತ್ತಿಲ್ಲ, ನದಿ ನೀರಿನ ಹರಿವು ಹೆಚ್ಚಿಸಲು, ಹಲವಾರು ಹಳ್ಳಗಳನ್ನು ಕೂಡಿಸಲು ಸೂಕ್ತ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರು ವಿಭಿನ್ನ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.

ನಿಂಗನಗೌಡ ಮಲಗೌಡ್ರ, ಅಂಬರೀಷ ಯಲಿಗಾರ, ಶಿವಾನಂದ ಮೇಟಿ ಮಾತನಾಡಿ, ಮುಖ್ಯಮಂತ್ರಿ ಅವರಿಗೆ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಕಾಳಜಿ ಇದ್ದರೆ ಕೂಡಲೇ ಕಾಮಗಾರಿಯನ್ನು ಆರಂಭಿಸಬೇಕೆಂದು ಒತ್ತಾಯಿಸಿದರು. ಅರುಣಗೌಡ ಪಾಟೀಲ, ಪ್ರಕಾಶ ಕಾಮಣ್ಣವರ, ರಾಮಣ್ಣ ದೂದಾಳಿ ಹಾಗೂ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ