ಆ್ಯಪ್ನಗರ

ಎಂ.ಕೆ.ಹುಬ್ಬಳ್ಳಿ - ಬೈಲಹೊಂಗಲ ರಸ್ತೆ ದುರಸ್ತಿಗೆ ಆಗ್ರಹ

ಎಂ.ಕೆ.ಹುಬ್ಬಳ್ಳಿ : ಕಳೆದ ವಾರ ಎಡೆಬಿಡದೆ ಸುರಿದ ...

Vijaya Karnataka 16 Jul 2019, 5:00 am
ಎಂ.ಕೆ.ಹುಬ್ಬಳ್ಳಿ : ಕಳೆದ ವಾರ ಎಡೆಬಿಡದೆ ಸುರಿದ ಮಳೆಯಿಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದ ಅನೇಕ ರಸ್ತೆಗಳು ಹಾಳಾಗಿದ್ದು ಇವುಗಳನ್ನು ಶೀಘ್ರ ದುರಸ್ತಿ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Vijaya Karnataka Web BEL-15MKH1(1)


ಪಟ್ಟಣದಿಂದ ಬೈಲಹೊಂಗಲ, ಕಾದರವಳ್ಳಿ ಕ್ರಾಸ್‌ದಿಂದ ತುರಮರಿ, ಗಿರಿಯಾಲದಿಂದ ಬೆಣಚನಮರಡಿ, ಚಿಕ್ಕಬಾಗೇವಾಡಿಯಿಂದ ಇಲ್ಲಿಗೆ ಬರುವ ಅನೇಕ ರಸ್ತೆಗಳಲ್ಲಿ ತಗ್ಗುಗಳು ನಿರ್ಮಾಣವಾಗಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ರಸ್ತೆ ಕಾಮಗಾರಿ ಮಾಡಿದ ಅನೇಕ ರಸ್ತೆಗಳು ಸಹ ಹಾಳಾಗಿವೆ. ವಾಹನ ಸವಾರರು ವೇಗವಾಗಿ ಬಂದರೆ ಅನಾಹುತ ಗ್ಯಾರಂಟಿ. ಅವಘಡಗಳು ಸಂಭವಿಸುವ ಮೊದಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ