ಆ್ಯಪ್ನಗರ

ಹಣಕ್ಕಾಗಿ ಬೇಡಿಕೆ: ಮತ್ತೊಬ್ಬನ ಬಂಧನ

ಬೆಳಗಾವಿ: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿ ...

Vijaya Karnataka 24 Oct 2019, 5:00 am
ಬೆಳಗಾವಿ: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿ ಹಾಗೂ ಪತ್ರಕರ್ತರೆಂದು ಹೇಳಿ ಸರಕಾರಿ ಅಧಿಕಾರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರಿಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
Vijaya Karnataka Web demand for money another one arrested
ಹಣಕ್ಕಾಗಿ ಬೇಡಿಕೆ: ಮತ್ತೊಬ್ಬನ ಬಂಧನ


ಇಲ್ಲಿನ ವೀರಭದ್ರ ನಗರದ ಜಾಕೀರ ಹುಸೇನ್‌ ಮನಿಯಾರ್‌ (45) ಬಂಧಿತ ವ್ಯಕ್ತಿ. ಅ.19 ರಂದು ನಗರದ ಪ್ರಾದೇಶಿಕ ಸಾರಿಗೆ ಅಧೀಕ್ಷಕ ಶರಣಪ್ಪ ಹುಗ್ಗಿ ಅವರಿಗೆ ಕರೆ ಮಾಡಿ, ನಿಮ್ಮ ವಿರುದ್ಧ ಭ್ರಷ್ಟಾಚಾರದ ದೂರು ಬಂದಿದೆ. ಅದನ್ನು ಪ್ರಕರಣ ದಾಖಲಿಸದೆ ಬಗೆಹರಿಸಲು ಹಣ ನೀಡಬೇಕು. ಇಲ್ಲಿದಿದ್ದರೆ ಪ್ರಕರಣ ದಾಖಲಿಸಿ ಮಾಧ್ಯಮದಲ್ಲಿಪ್ರಸಾರ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದ ಆರೋಪದಲ್ಲಿಇಬ್ಬರ ಮೇಲೆ ನಗರದ ಮಾರ್ಕೆಟ್‌ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಟಿಳಕವಾಡಿಯ ಶಾಂತಿ ನಗರದ ನಿವಾಸಿ ಅತುಲ್‌ ವಿಶ್ವಾಸ ಕದಂ (36) ಎಂಬಾತನನ್ನು ಬಂಧಿಸಿದ್ದರು. ಈ ವೇಳೆ ತಲೆಮರಿಸಿಕೊಂಡಿದ್ದ ಜಾಕೀರ ಮನಿಯಾರ್‌ನನ್ನು ಪೊಲೀಸರು ಬುಧವಾರ ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ