ಹುಕ್ಕೇರಿ: ಸ್ಥಳೀಯ ಸವಿತಾ ಸಮಾಜದವರ ಕ್ಷೌರಿಕ ವೃತ್ತಿಗೆ ಕುತ್ತು ತರುತ್ತಿರುವ ಹೊರರಾಜ್ಯದ ಉದ್ಯಮಿಗಳನ್ನು ನಿಗ್ರಹಿಸಬೇಕು ಎಂದು ಆಗ್ರಹಿಸಿ ತಾಲೂಕು ಸವಿತಾ ಸಮಾಜ ಸಂಘಟನೆಯಿಂದ ಪ್ರತಿಭಟನೆ ನಡೆಸಿ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಪ್ರಮುಖ ರಸ್ತೆಯ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಗ್ರೇಡ್-2 ತಹಸೀಲ್ದಾರ್ ಕಿರಣ ಬೆಳವಿ ಅವರಿಗೆ ಮನವಿ ಸಲ್ಲಿಸಿದರು.
ಎರಡು ವರ್ಷಗಳ ಹಿಂದೆ ಹೊರರಾಜ್ಯದಿಂದ ಪಟ್ಟಣಕ್ಕೆ ಬಂದು ಕ್ಷೌರಿಕ ವೃತ್ತಿಯನ್ನು ಉದ್ಯಮವಾಗಿ ಬೆಳೆಸುತ್ತಿದ್ದಾರೆ. ಇವರ ಕುಮ್ಮಕ್ಕಿನಿಂದ ಮತ್ತಷ್ಟು ಜನ ಇಲ್ಲಿಆಗಮಿಸಿ ಸಮಾಜದ ಬಡವರ ಉಪಜೀವನಕ್ಕೆ ಆಧಾರವಾದ ವೃತ್ತಿಯನ್ನು ಕಸಿದುಕೊಳ್ಳುತ್ತಿದ್ದಾರೆ. ಜತೆಗೆ ಸಮಾಜ-ಸಮಾಜಗಳ ನಡುವೆ ವೈಷಮ್ಯ ಭಾವವನ್ನೂ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯರಿಗೆ ಪರಿಚಯವೇ ಇಲ್ಲದ ಹೊರರಾಜ್ಯದವರು ಸಮಾಜದ್ರೋಹಿ ಕಾರ್ಯ ಕೈಗೊಂಡಲ್ಲಿಅದು ಸ್ಥಳೀಯ ಸವಿತಾ ಸಮಾಜಕ್ಕೆ ಕಳಂಕ ತರಬಹುದು. ಹೀಗಾಗಿ ಇಂತವರ ಉದ್ಯಮ ಬೆಳೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಕಿರಣ ಬೆಳವಿ ಅವರು, ಅಹವಾಲನ್ನು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಕಳುಹಿಸಿ ಕೊಡುವುದಾಗಿ ಭರವಸೆ ನೀಡಿದರು.
ಆವಜೀಕರ ಆಶ್ರಮದ ಅಭಿನವ ಮಂಜುನಾಥ ಪೂಜ್ಯರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸವಿತಾ ಸಮಾಜದ ಅನಂದ ಕುರ್ಲಿ, ಮೋಹನ ಹುಲ್ಲೋಳಿ, ಜ್ಯೋತಿಬಾ ಮಾನೆ, ಬಸವರಾಜ ಹಡಪದ, ವಿನೋದ ಯರನಾಳ ಹಾಗೂ ಅಸಂಘಟಿತ ಕಾರ್ಮಿಕ ಸಂಘಟನೆ ಅಧ್ಯಕ್ಷ ಭೀಮಶಿ ಗೋರಕನಾಥ, ಶಿವಾಜಿ ಘಾಟಗೆ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.
ಪಟ್ಟಣದ ಪ್ರಮುಖ ರಸ್ತೆಯ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಗ್ರೇಡ್-2 ತಹಸೀಲ್ದಾರ್ ಕಿರಣ ಬೆಳವಿ ಅವರಿಗೆ ಮನವಿ ಸಲ್ಲಿಸಿದರು.
ಎರಡು ವರ್ಷಗಳ ಹಿಂದೆ ಹೊರರಾಜ್ಯದಿಂದ ಪಟ್ಟಣಕ್ಕೆ ಬಂದು ಕ್ಷೌರಿಕ ವೃತ್ತಿಯನ್ನು ಉದ್ಯಮವಾಗಿ ಬೆಳೆಸುತ್ತಿದ್ದಾರೆ. ಇವರ ಕುಮ್ಮಕ್ಕಿನಿಂದ ಮತ್ತಷ್ಟು ಜನ ಇಲ್ಲಿಆಗಮಿಸಿ ಸಮಾಜದ ಬಡವರ ಉಪಜೀವನಕ್ಕೆ ಆಧಾರವಾದ ವೃತ್ತಿಯನ್ನು ಕಸಿದುಕೊಳ್ಳುತ್ತಿದ್ದಾರೆ. ಜತೆಗೆ ಸಮಾಜ-ಸಮಾಜಗಳ ನಡುವೆ ವೈಷಮ್ಯ ಭಾವವನ್ನೂ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯರಿಗೆ ಪರಿಚಯವೇ ಇಲ್ಲದ ಹೊರರಾಜ್ಯದವರು ಸಮಾಜದ್ರೋಹಿ ಕಾರ್ಯ ಕೈಗೊಂಡಲ್ಲಿಅದು ಸ್ಥಳೀಯ ಸವಿತಾ ಸಮಾಜಕ್ಕೆ ಕಳಂಕ ತರಬಹುದು. ಹೀಗಾಗಿ ಇಂತವರ ಉದ್ಯಮ ಬೆಳೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿಒತ್ತಾಯಿಸಲಾಗಿದೆ.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಕಿರಣ ಬೆಳವಿ ಅವರು, ಅಹವಾಲನ್ನು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಕಳುಹಿಸಿ ಕೊಡುವುದಾಗಿ ಭರವಸೆ ನೀಡಿದರು.
ಆವಜೀಕರ ಆಶ್ರಮದ ಅಭಿನವ ಮಂಜುನಾಥ ಪೂಜ್ಯರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸವಿತಾ ಸಮಾಜದ ಅನಂದ ಕುರ್ಲಿ, ಮೋಹನ ಹುಲ್ಲೋಳಿ, ಜ್ಯೋತಿಬಾ ಮಾನೆ, ಬಸವರಾಜ ಹಡಪದ, ವಿನೋದ ಯರನಾಳ ಹಾಗೂ ಅಸಂಘಟಿತ ಕಾರ್ಮಿಕ ಸಂಘಟನೆ ಅಧ್ಯಕ್ಷ ಭೀಮಶಿ ಗೋರಕನಾಥ, ಶಿವಾಜಿ ಘಾಟಗೆ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.