ಆ್ಯಪ್ನಗರ

ಕೋಟೆ ಕೆರೆ ಪ್ರವೇಶ ಶುಲ್ಕ ರದ್ದತಿಗೆ ಆಗ್ರಹ

ಬೆಳಗಾವಿ : ನಗರದ ಕೋಟೆ ಕೆರೆ ಪ್ರವೇಶಕ್ಕೆ ವಿಧಿಸಿರುವ ಶುಲ್ಕ ರದ್ದುಪಡಿಸುವಂತೆ ಒತ್ತಾಯಿಸಿ ಗುರುವಾರ ಕೋಟೆ ಕೆರೆ ಹಿತರಕ್ಷಣಾ ವೇದಿಕೆ ಸದಸ್ಯರು ...

Vijaya Karnataka 31 May 2019, 5:00 am
ಬೆಳಗಾವಿ : ನಗರದ ಕೋಟೆ ಕೆರೆ ಪ್ರವೇಶಕ್ಕೆ ವಿಧಿಸಿರುವ ಶುಲ್ಕ ರದ್ದುಪಡಿಸುವಂತೆ ಒತ್ತಾಯಿಸಿ ಗುರುವಾರ ಕೋಟೆ ಕೆರೆ ಹಿತರಕ್ಷಣಾ ವೇದಿಕೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
Vijaya Karnataka Web BEL-30 LBS 1


ನಗರದ ಸೌಂದರ್ಯ ಹೆಚ್ಚಿಸಿರುವ ಕೋಟೆ ಕೆರೆಯನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತ ಏಕಾಏಕಿ ಕೆರೆಯ ಪ್ರವೇಶಕ್ಕೆ ಶುಲ್ಕ ವಿಧಿಸಿದೆ. ಇದು ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ. ಆದರೆ ಜಿಲ್ಲಾಡಳಿತ ಇಲ್ಲಿವರೆಗೆ ಪ್ರವೇಶ ಶುಲ್ಕದ ನಿರ್ಧಾರ ಕೈಬಿಟ್ಟಿಲ್ಲ. ಕೂಡಲೇ ಪ್ರವೇಶ ಶುಲ್ಕ ರದ್ದುಪಡಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.

ಪ್ರತಿದಿನ ನೂರಾರು ಜನರು ಬೆಳಗ್ಗೆ ಇಲ್ಲಿಗೆ ವಾಯು ವಿಹಾರಕ್ಕಾಗಿ ಬರುತ್ತಾರೆ. ಪ್ರವೇಶ ಶುಲ್ಕ ವಿಧಿಸಿರುವುದರಿಂದ ಜನರಿಗೆ ತೊಂದರೆಯಾಗುತ್ತದೆ. ಜತೆಗೆ ಯಾವುದೇ ಸೌಲಭ್ಯವಿಲ್ಲದೇ ಕೆರೆ ಪ್ರವೇಶ ಶುಲ್ಕ ವಿಧಿಸಿರುವುದು ಸರಿಯಾದ ನಿರ್ಧಾರವಲ್ಲ. ಆದ್ದರಿಂದ ಜಿಲ್ಲಾಡಳಿತ ಪ್ರವೇಶ ಶುಲ್ಕವನ್ನು ರದ್ದಪಡಿಸಬೇಕು. ಕೋಟೆ ಕೆರೆಯನ್ನು ಜಿಲ್ಲಾಡಳಿತ ಮಾದರಿ ಕೆರೆಯಾಗಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು. ಎಂ.ಕೆ. ಕುಂದರಗಿ, ಮಹ್ಮದ್‌ ರಂಗಾರಿ, ವಿಠ್ಠಲ ಗಾಣಿಗೇರ, ಶಿವಲೀಲಾ ಹಿರೇಮಠ, ರಾಜು ಬೋರಪ್ಪ, ಎಂ.ಆರ್‌.ಮಂಜು ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ