ಆ್ಯಪ್ನಗರ

ನೀರು ಪೋಲುಗೊಳಿಸಿದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಕರವೇ ಆಗ್ರಹ

ಗೋಕಾಕ : ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರದ ನೀರು ಸಂಗ್ರಹಣಾ ಟ್ಯಾಂಕ್‌ಗಳು ಓವರ್‌ಫೊ್ಲೕ ಆಗಿ ನೀರು ಗಟಾರು ಪಾಲಾಗುತ್ತಿರುವುದನ್ನು ಖಂಡಿಸಿ ಕರ್ನಾಟಕ ...

Vijaya Karnataka 27 May 2018, 5:00 am
ಗೋಕಾಕ : ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರದ ನೀರು ಸಂಗ್ರಹಣಾ ಟ್ಯಾಂಕ್‌ಗಳು ಓವರ್‌ಫೊ್ಲೕ ಆಗಿ ನೀರು ಗಟಾರು ಪಾಲಾಗುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷ ಣಾ ವೇದಿಕೆ ಕಾರ್ಯಕರ್ತರು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Vijaya Karnataka Web demand for the staff be brought into action
ನೀರು ಪೋಲುಗೊಳಿಸಿದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಕರವೇ ಆಗ್ರಹ


ಶನಿವಾರ ಮಧ್ಯಾಹ್ನ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಕರವೇ ಕಾರ್ಯಕರ್ತರು ನಗರ ಸಭೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕರ್ತವ್ಯಲೋಪವೆಸಗಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಾರ್ಡ ನಂ. 22 ರ ಪಾಯಸಾಗರ ಶಾಲೆಯ ಹಿಂದಿನ ಬೃಹತ್‌ ನೀರಿನ ಟ್ಯಾಂಕ್‌ ಓವರ್‌ಫೊ್ಲೕಆಗಿ ಶನಿವಾರ ಬೆಳಗ್ಗೆ 3 ಗಂಟೆಯಿಂದ 5.30 ರವರೆಗೆ ನೀರು ಗಟಾರು ಪಾಲಾಗಿ ಅಂಬೇಡ್ಕರ ನಗರದ ರಸ್ತೆಗಳನ್ನು ಹಾಳು ಮಾಡಿದೆ. ಇದಕ್ಕೆ ಕಾರಣರಾದ ಜೈನ ಕಂಪನಿಯ 24*7 ನೀರಿನ ನಿರ್ವಹಣೆ ನೋಡಿಕೊಳ್ಳುತ್ತಿರುವ ಸಿಬ್ಬಂದಿಯನ್ನು ಈ ಜವಾಬ್ದಾರಿಯಿಂದ ಬದಲಾಯಿಸಿ ಪೋಲಾದ ನೀರಿನ ಪ್ರಮಾಣದಷ್ಟು ದಂಡವನ್ನು ತುಂಬಿಸುವಂತೆ ಎಇಇ ವಿ.ಎಸ್‌. ತಡಸಲೂರ ರವರ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಬಿಗಿಪಟ್ಟು ಹಿಡಿದರು.

ಇದಕ್ಕೆ ಮಣಿದ ಎಇಇ ನೀರು ಸರಬರಾಜು ಮಾಡುವ ಸಿಬ್ಬಂದಿಯನ್ನು ತಮ್ಮ ಕಚೇರಿಗೆ ಕರೆಸಿ ತರಾಟೆಗೆ ತಗೆದುಕೊಂಡರು. ಪೋಲಾದ ನೀರಿಗೆ ಆದಿನ ಕರ್ತವ್ಯಕ್ಕೆ ಇದ್ದ ಸಿಬ್ಬಂದಿಯಿಂದ ದಂಡ ತುಂಬಿಸಲು ಸೂಚಿಸಿದರು. ಅಲ್ಲದೆ ಸ್ಥಳದಲ್ಲೇ ಇವರಿಂದ 20,000 ಲೀ. ನೀರಿನ ಪ್ರಮಾಣದಷ್ಟು ಮೊತ್ತದ ಹಣವನ್ನು ದಂಡದ ರೂಪದಲ್ಲಿ ತುಂಬಿಸಿಕೊಂಡರು. ಜೈನ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ದೂರವಾಣಿಯ ಕರೆ ಮಾಡಿ ಸಮಸ್ಯೆ ಸರಿಪಡಿಸಿವಂತೆ ಹೇಳಿದರು. ನಂತರ ಕರವೇಯಿಂದ ಪ್ರತಿಭಟನೆ ಹಿಂಪಡೆಯಲಾಯಿತು.

ನಗರಸಭೆ ಅಧಿಕ್ಷ ಕ ಎಂ.ಎಚ್‌. ಅತ್ತಾರ ಈ ಸಂದರ್ಭದಲ್ಲಿ ಇದ್ದರು. ಈ ಪ್ರತಿಭಟನೆಯಲ್ಲಿ ಕೃಷ್ಣಾ ಖಾನಪ್ಪನವರ, ದೀಪಕ ಹಂಜಿ, ನಿಜಾಮ ನದಾಪ, ಶೆಟ್ಟೆಪ್ಪ ಗಾಡಿವಡ್ಡರ, ಮಹಾದೇವ ಮಕ್ಕಳಗೇರಿ, ಅಶೋಕ ಬಂಡಿವಡ್ಡರ, ಮುತ್ತೆಪ್ಪ ಘೋಡಗೇರಿ, ನಿಯಾಜ ಪಟೇಲ, ಹನೀಪಸಾಬ ಸನದಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ