ಬೀಡಿ: ಖಾನಾಪುರ ತಾಲೂಕು ಮಂಗೇನಕೊಪ್ಪ ಗ್ರಾಮದ ಬಳಿ ಸಣ್ಣ ನೀರಾವರಿ ಇಲಾಖೆಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಚೆಕ್ ಡ್ಯಾಂ ಮತ್ತು ಕಾಲುವೆಗಳು ಹಾಳಾಗಿವೆ. ಕಾಲುವೆಗಳ ಸುತ್ತ ಕಸ-ಕಡ್ಡಿ ಬೆಳೆದಿದ್ದು, ಕಾಲುವೆಗಳು ಮತ್ತು ತಡೆಗೋಡೆಗಳಲ್ಲಿ ಬಿರುಕು ಬಿಟ್ಟಿವೆ. ಕಾರಣ ಶೀಘ್ರ ದುರಸ್ತಿಗೊಳಿಸುವಂತೆ ತಾಪಂ ಸದಸ್ಯ ಶಿವಪ್ಪ ಚಲವಾದಿ ಸಂಬಂಧಪಟ್ಟವರನ್ನು ಆಗ್ರಹಿಸಿದ್ದಾರೆ.
ಕಾಲುವೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ್ದರಿಂದ ಅವುಗಳಲ್ಲಿ ನೀರು ಹರಿಯುತ್ತಿಲ್ಲ. ಹೀಗಾಗಿ ಕಾಲುವೆಗಳನ್ನು ಅವಲಂಬಿಸಿ ಬೆಳೆ ಬೆಳೆದ ರೈತರ ಜಮೀನುಗಳಿಗೆ ಸರಿಯಾಗಿ ನೀರು ಸಿಗುತ್ತಿಲ್ಲ. ಸರಕಾರದ ಲಕ್ಷ ಗಟ್ಟಲೇ ಹಣವನ್ನು ವ್ಯಯಿಸಿ ನಿರ್ಮಿಸಿದ ನೀರಾವರಿ ಯೋಜನೆಗಳು ಸರಿಯಾಗಿ ರೈತರಿಗೆ ಮುಟ್ಟಿಲ್ಲ. ಚೆಕ್ ಡ್ಯಾಂ ಮತ್ತು ತಡೆಗೋಡೆಗಳು ನಿರ್ವಹಣೆ ಕೊರತೆಯಿಂದ ನಲುಗಿವೆ. ಇದರಿಂದ ರೈತಾಪಿ ಸಮುದಾಯಕ್ಕೆ ತೊಂದರೆಯಾಗುತ್ತಿದ್ದು, ಕೂಡಲೇ ಇವುಗಳ ದುರಸ್ತಿಗೆ ಮುಂದಾಗಬೇಕು ಎಂದು ಅಧಿಕಾರಿಗಳನ್ನು ಅವರು ಕೋರಿದ್ದಾರೆ.
ಕಾಲುವೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ್ದರಿಂದ ಅವುಗಳಲ್ಲಿ ನೀರು ಹರಿಯುತ್ತಿಲ್ಲ. ಹೀಗಾಗಿ ಕಾಲುವೆಗಳನ್ನು ಅವಲಂಬಿಸಿ ಬೆಳೆ ಬೆಳೆದ ರೈತರ ಜಮೀನುಗಳಿಗೆ ಸರಿಯಾಗಿ ನೀರು ಸಿಗುತ್ತಿಲ್ಲ. ಸರಕಾರದ ಲಕ್ಷ ಗಟ್ಟಲೇ ಹಣವನ್ನು ವ್ಯಯಿಸಿ ನಿರ್ಮಿಸಿದ ನೀರಾವರಿ ಯೋಜನೆಗಳು ಸರಿಯಾಗಿ ರೈತರಿಗೆ ಮುಟ್ಟಿಲ್ಲ. ಚೆಕ್ ಡ್ಯಾಂ ಮತ್ತು ತಡೆಗೋಡೆಗಳು ನಿರ್ವಹಣೆ ಕೊರತೆಯಿಂದ ನಲುಗಿವೆ. ಇದರಿಂದ ರೈತಾಪಿ ಸಮುದಾಯಕ್ಕೆ ತೊಂದರೆಯಾಗುತ್ತಿದ್ದು, ಕೂಡಲೇ ಇವುಗಳ ದುರಸ್ತಿಗೆ ಮುಂದಾಗಬೇಕು ಎಂದು ಅಧಿಕಾರಿಗಳನ್ನು ಅವರು ಕೋರಿದ್ದಾರೆ.