ಆ್ಯಪ್ನಗರ

ಶಿವಸೇನೆ ಶಾಸಕರಿಗೆ ನಗರ ಪ್ರವೇಶ ನಿಷೇಧಕ್ಕೆ ಆಗ್ರಹ

ಬೆಳಗಾವಿ: ರಾಜಕೀಯ ಲಾಭಕ್ಕಾಗಿ ಕನ್ನಡ, ಮರಾಠಿ ಭಾಷಿಕರ ನಡುವೆ ...

Vijaya Karnataka 31 Dec 2019, 5:00 am
ಬೆಳಗಾವಿ: ರಾಜಕೀಯ ಲಾಭಕ್ಕಾಗಿ ಕನ್ನಡ, ಮರಾಠಿ ಭಾಷಿಕರ ನಡುವೆ ವೈಷಮ್ಯ ಸೃಷ್ಟಿಸುತ್ತಿರುವ ಶಿವಸೇನೆ ಶಾಸಕರು, ಕಾರ್ಯಕರ್ತರಿಗೆ ಬೆಳಗಾವಿ ನಗರ ಪ್ರವೇಶ ನಿಷೇಧಿಸಬೇಕು ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಪೊಲೀಸ್‌ ಆಯುಕ್ತರನ್ನು ಒತ್ತಾಯಿಸಿದರು.
Vijaya Karnataka Web 30PRAMOD4084652
ಬೆಳಗಾವಿ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿಕನ್ನಡ ಸಂಘಟನೆಗಳ ಸಭೆ ನಡೆಯಿತು.


ಕೆಲ ದಿನಗಳಿಂದ ಎರಡೂ ರಾಜ್ಯಗಳಲ್ಲಿನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿನಗರದ ಪೊಲೀಸ್‌ ಆಯುಕ್ತ ಕಚೇರಿ ಸಭಾಂಗಣದಲ್ಲಿಸೋಮವಾರ ಶಾಂತಿ ಸಭೆ ನಡೆಯಿತು. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಭಾಗದಲ್ಲಿಶಿವಸೇನೆ ಪ್ರಚೋದನಾಕಾರಿ ವರ್ತನೆ ತೋರುತ್ತಿದೆ. ಅದರ ನಾಯಕರು ಬೆಳಗಾವಿ ವಿಮಾನ ನಿಲ್ದಾಣದ ಮೂಲಕ ನಗರಕ್ಕೆ ಬರುತ್ತಿದ್ದಾರೆ. ಅದನ್ನು ತಡೆಯಬೇಕು. ನಗರ ಪ್ರದೇಶಗಳಲ್ಲಿಕನ್ನಡ ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಎಂಇಎಸ್‌ ಮುಖಂಡರಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶಕುಮಾರ, ''ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿವಿಚಾರಣೆ ಹಂತದಲ್ಲಿದೆ. ಹಾಗಿರುವಾಗ ಈ ವಿಷಯವನ್ನು ದೊಡ್ಡದಾಗಿ ಬಿಂಬಿಸಿ, ಗಲಾಟೆ, ಪ್ರತಿಭಟನೆ ನಡೆಸುವುದು ಸರಿಯಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಡಿ.31ರಂದು ಬೆಳಗ್ಗೆ 10ಕ್ಕೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮುಖಂಡರ ಜತೆಗೂ ಶಾಂತಿ ಸಭೆ ನಡೆಸಲಾಗುವುದು'', ಎಂದರು.

ನಾಡವಿರೋಧಿ ಕೃತ್ಯ ಸಹಿಸಲ್ಲ:
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವ ತಳವಾರ, ''ನಾವು ಶಾಂತಿ ಕದಡುವ ಕೆಲಸ ಮಾಡಿಲ್ಲ. ಎಂಇಎಸ್‌ ನಾಡವಿರೋಧಿ ಕೃತ್ಯ ಎಸಗಿದಾಗ ಸುಮ್ಮನೆ ಇರಲು ಸಾಧ್ಯವೇ ಇಲ್ಲ. ಪ್ರಚೋದನಕಾರಿ ಹೇಳಿಕೆ ಕೊಡುವವರನ್ನು ತಂದು ಸನ್ಮಾನ ಮಾಡಿದರೆ, ಬೆಳಗಾವಿ ಗ್ರಾಮೀಣ ಕ್ಷೇತ್ರ ಮರಾಠಿಗರದು ಎಂದು ಹೇಳಿದರೆ ಹೇಗೆ ಸುಮ್ಮನಿರುವುದು'', ಎಂದು ಪ್ರಶ್ನಿಸಿದರು.

ಡಿಸಿಪಿ ಸೀಮಾ ಲಾಟ್ಕರ್‌, ಯಶೋಧಾ ಒಂಟಗೋಡಿ, ಕರವೇ ಮುಖಂಡ ದೀಪಕ ಗುಡಗನಟ್ಟಿ, ಬಾಬು ಸಂಗೋಡಿ, ನಾಗರಾಜ ದೊಡ್ಡಮನಿ ಮತ್ತಿತರರು ಇದ್ದರು.

ಯಾರಾದರು ಕಾನೂನು ಉಲ್ಲಂಘಿಘಿಸಿ, ಸಾರ್ವಜನಿಕರಿಗೆ ಅಡ್ಡಿ ಪಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ ಎರಡೂ ಕಡೆಯ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ನಗರದಲ್ಲಿಶಾಂತಿ ಕಾಪಾಡಬೇಕು. ಯಾವುದೇ ಉದ್ವೇಗಕ್ಕೆ ಒಳಗಾಗಬಾರದು.
-ಬಿ.ಎಸ್‌. ಲೋಕೇಶಕುಮಾರ, ನಗರ ಪೊಲೀಸ್‌ ಆಯುಕ್ತ.

ಪಾಲಿಕೆ ಚುನಾವಣೆಗಾಗಿ ಗಲಭೆ:
ಸಭೆ ಆರಂಭದಲ್ಲಿಮಾತನಾಡಿದ ಎಸಿಪಿ ನಾರಾಯಣ ಭರಮನಿ, ''ಗಡಿ ವಿವಾದ ನ್ಯಾಯಾಲಯದಲ್ಲಿದೆ. ಕೆಲ ರಾಜಕೀಯ ಹಿತಾಸಕ್ತಿಗಳಿಂದ ಗಲಭೆಗಳು ಆಗುತ್ತಿವೆ. ಮಹಾನಗರ ಪಾಲಿಕೆಯ ಚುನಾವಣೆ ಬರುತ್ತಿದ್ದರಿಂದ ರಾಜಕೀಯ ಚಟುವಟಿಕೆಗಳು ಜಾಸ್ತಿ ಆಗಿವೆ. ಭಾಷಿಕರನ್ನು ಒಂದು ಮಾಡಲು ಇಂತಹ ಚಟುವಟಿಕೆಗಳನ್ನು ಮಾಡಿಸಲಾಗುತ್ತಿದೆ. ಹಾಗಾಗಿ ಇಂಥದಕ್ಕೆ ಕಿವಿಗೊಡಬಾರದು'', ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ