ಆ್ಯಪ್ನಗರ

ಹುಕ್ಕೇರಿಯಲ್ಲೇ ‘ಕರೆನ್ಸಿ ಚಸ್ಟ್‌’ ಮುಂದುವರಿಸಲು ಒತ್ತಾಯ

ಹುಕ್ಕೇರಿ : ಪಟ್ಟಣದ ಎಸ್‌ಬಿಐ ಬ್ಯಾಂಕ್‌ ಶಾಖೆಯಲ್ಲಿ ಕಾರ‍್ಯ ನಿರ್ವಹಿಸುತ್ತಿದ್ದ 'ಹಣ ...

Vijaya Karnataka 21 Jan 2019, 5:00 am
ಹುಕ್ಕೇರಿ : ಪಟ್ಟಣದ ಎಸ್‌ಬಿಐ ಬ್ಯಾಂಕ್‌ ಶಾಖೆಯಲ್ಲಿ ಕಾರ‍್ಯ ನಿರ್ವಹಿಸುತ್ತಿದ್ದ 'ಹಣ ಕ್ರೋಢಿಕರಣ ಘಟಕ'ವನ್ನು (ಕರೆನ್ಸಿ ಚಸ್ಟ್‌) ಚಿಕ್ಕೋಡಿಗೆ ಸ್ಥಳಾಂತರ ಮಾಡಿರುವುದಕ್ಕೆ ಸ್ಥಳೀಯ ಉದ್ಯಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Vijaya Karnataka Web BEL-20 HUKKERI 01


ಪಟ್ಟಣದ ಮುಖ್ಯ ರಸ್ತೆಯ ಎಸ್‌ಬಿಐ ಶಾಖೆಯಲ್ಲಿದ್ದ 'ಕರೆನ್ಸಿ ಚೆಸ್ಟ್‌ ' ಘಟಕಕ್ಕೆ ರಿಸರ್ವ್‌ ಬ್ಯಾಂಕ್‌ನಿಂದ ನೇರವಾಗಿ ಹಣ ಪೂರೈಕೆಯಾಗುತ್ತಿತ್ತು. ಇಲ್ಲಿಂದ ತಾಲೂಕಿನ ನಾನಾ ಕಡೆ ಹಾಗೂ ಪಟ್ಟಣದಲ್ಲಿರುವ ರಾಷ್ಟ್ರೀಕೃತ ಹಾಗೂ ಬಿಡಿಸಿಸಿ ಬ್ಯಾಂಕ್‌ ಸೇರಿದಂತೆ ಸಹಕಾರಿ ಬ್ಯಾಂಕುಗಳಿಗೆ ಬೇಕಾದಷ್ಟು ಹಣವನ್ನು ಒಯ್ಯಲಾಗುತ್ತಿತ್ತು. ಇದರಿಂದ ರೈತರು ಹಾಗೂ ಉದ್ಯಮಿಗಳಿಗೆ ಸಕಾಲದಲ್ಲಿ ಹಣ ಸಿಗುತ್ತಿತ್ತು. ಆದರೆ, ಕರೆನ್ಸಿ ಚೆಸ್ಟ್‌ ಅನ್ನು ಚಿಕ್ಕೋಡಿಗೆ ಸ್ಥಳಾಂತರಿಸಿರುವುದರಿಂದ ಒಮ್ಮೆಲೇ ಹೆಚ್ಚು ಮೊತ್ತದ ಹಣವನ್ನು ಬ್ಯಾಂಕ್‌ನಿಂದ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾದರೆ ಲಕ್ಷ ಕ್ಕೂ ಅಧಿಕ ಹಣ ಬೇಕಾದರೆ ಒಂದೆರಡು ದಿನಗಳ ಮೊದಲೇ ಬ್ಯಾಂಕ್‌ ಶಾಖೆಗೆ ತಿಳಿಸುವ ಪರಿಸ್ಥಿತಿ ಬರಲಿದೆ.

''ಚಿಕ್ಕ ಪುಟ್ಟ ವ್ಯಾಪಾರಸ್ಥರು ಸೇರಿದಂತೆ ರೈತರಿಗೆ ಹಣದ ತೊಂದರೆಯಾಗಬಾರದು ಹೀಗಾಗಿ ಕರೆನ್ಸಿ ಚಸ್ಟ್‌ ಅನ್ನು ಹುಕ್ಕೇರಿಯಲ್ಲಿಯೇ ಉಳಿಸಿಕೊಳ್ಳಬೇಕು'' ಎಂದು ಉದ್ಯಮಿ ರವಿ ಕರಾಳೆ ಒತ್ತಾಯಿಸಿದ್ದಾರೆ.

ಹೆಚ್ಚು ಸಹಕಾರಿ ಸಂಘಗಳನ್ನು ಹೊಂದಿರುವ ಹುಕ್ಕೇರಿಯಿಂದ ಕರೆನ್ಸಿ ಚಸ್ಟ್‌ ಬೇರೆ ಕಡೆ ಹೋದರೆ ಹಣದ ಅಭಾವ ಉಂಟಾಗುವು ಸಾಧ್ಯತೆ ಇದೆ. ಹೀಗಾಗಿ ಹುಕ್ಕೇರಿಯ ಎಸ್‌ಬಿಐ ಶಾಖೆಯಲ್ಲೇ ಕೆರೆನ್ಸಿ ಚೆಸ್ಟ್‌ ಉಳಿಸಿಕೊಳ್ಳಲು ಪ್ರಯತ್ನಿಸಲಾಗುವುದು.
- ರಮೇಶ ಕತ್ತಿ, ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ