ಆ್ಯಪ್ನಗರ

ಶಬರಿಮಲೆ ದೇಗುಲದಲ್ಲಿ ಮಹಿಳಾ ಪ್ರವೇಶ ಆದೇಶ ಕೈಬಿಡಲು ಆಗ್ರಹ

ಹುಕ್ಕೇರಿ: ಕೇರಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ ನೀತಿ ಆದೇಶ ಹೊರಡಿಸಿದ್ದನ್ನು ಖಂಡಿಸಿ ಶ್ರೀ ರಾಮ ಸೇನೆ ಕಾರ್ಯಕರ್ತರು ...

Vijaya Karnataka 6 Jan 2019, 5:00 am
ಹುಕ್ಕೇರಿ : ಕೇರಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ ನೀತಿ ಆದೇಶ ಹೊರಡಿಸಿದ್ದನ್ನು ಖಂಡಿಸಿ ಶ್ರೀ ರಾಮ ಸೇನೆ ಕಾರ್ಯಕರ್ತರು ಹಾಗೂ ಅಯ್ಯಪ್ಪ ಸ್ವಾಮಿ ಭಕ್ತರು ಶನಿವಾರ ತಹಸೀಲ್ದಾರ್‌ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.
Vijaya Karnataka Web BEL-05HUKKERI03


ಶಬರಿಮಲೆ ದೇವಸ್ಥಾನಕ್ಕೆ ತನ್ನದೇ ಆದ ಧಾರ್ಮಿಕ ತಳಹದಿಯ ವೈಜ್ಞಾನಿಕ ಕಟ್ಟಳೆಗಳಿವೆ. ಹಿಂದುಗಳ ನಂಬಿಕೆ, ಭಕ್ತಿಯ ಮೇಲೆ ಗದಾಪ್ರವಾಹ ಸರಿಯಲ್ಲ. ಪ್ರದಾನ ಮಂತ್ರಿಯವರು ತಕ್ಷ ಣವೇ ಮಧ್ಯ ಪ್ರವೇಶಿಸಿ ಹಿಂದುಗಳ ಭಾವನೆ ಗೌರವಿಸಬೇಕು ಎಂದು ಆಗ್ರಹಿಸಿದರು.

ಸುಪ್ರೀಂ ಕೋರ್ಟ್‌ ತೀರ್ಪಿಗೆ ಸುಗ್ರೀವಾಜ್ಞೆ ತರಬೇಕು. ಹಿಂದುಗಳ ಮೇಲೆ ದೌರ್ಜನ್ಯ ಮಾಡುತ್ತಿರುವ ಪೊಲೀಸರ ಕ್ರಮ ಖಂಡನೀಯ. ಹಲ್ಲೆ ನಡೆಸುವ, ಕೇಸು ಹಾಕುವ ಮೂಲಕ ಕೇರಳದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಕಾರಣ ಕೇರಳ ರಾಜ್ಯ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು. ಅಲ್ಲಿರುವ ಪರಂಪರಾಗತ ವ್ಯವಸ್ಥೆ ಯಥಾವತ್ತಾಗಿ ಪಾಲನೆಯಾಗಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಶ್ರೀರಾಮ ಸೇನೆ ಪ್ರಮುಖರಾದ ಶಿವರಾಜ ಅಂಬಾರಿ ಕಿರಣ ಶೆಟ್ಟಿ, ಶಿವರಾಜ ನಾಯಿಕ, ವಿವೇಕ ಪುರಾಣಿಕ, ಬಸವರಾಜ ಅಲಗರಾವುತ, ಸಂತೋಷ ಸುಣಗಾರ, ಶಿವರಾಜ ಪಾಟೀಲ, ಬಸಪ್ಪ ಖುಬಾನ್ನಗೋಳ, ಗುರುಸ್ವಾಮಿಗಳಾದ ಮಾರುತಿ ಕಲ್ಲವಡ್ಡರ, ಮಾರುತಿ ಭಜಂತ್ರಿ ಮೊದಲಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ