ಆ್ಯಪ್ನಗರ

ಸರಕಾರಿ ಶಾಲೆಗಳಿಗೆ ಕಂಪ್ಯೂಟರ್‌ ಸೌಲಭ್ಯ ಒದಗಿಸಿ

ನಿಪ್ಪಾಣಿ : ಎಲ್ಲ ಸರಕಾರಿ ಶಾಲೆಗಳಿಗೆ ಸರಕಾರ ಶೀಘ್ರವೇ ಗಣಕ ಯಂತ್ರದ ಸೌಲಭ್ಯ ಒದಗಿಸಬೇಕೆಂದು ತಾಲೂಕು ಕಸಾಪ ಅಧ್ಯಕ್ಷ ಹಜರತ್‌ ಅಲಿ ದೇಗಿನಾಳ ಹೇಳಿದರು...

Vijaya Karnataka 19 Jun 2018, 5:00 am
ನಿಪ್ಪಾಣಿ: ಎಲ್ಲ ಸರಕಾರಿ ಶಾಲೆಗಳಿಗೆ ಸರಕಾರ ಶೀಘ್ರವೇ ಗಣಕ ಯಂತ್ರದ ಸೌಲಭ್ಯ ಒದಗಿಸಬೇಕೆಂದು ತಾಲೂಕು ಕಸಾಪ ಅಧ್ಯಕ್ಷ ಹಜರತ್‌ ಅಲಿ ದೇಗಿನಾಳ ಹೇಳಿದರು.
Vijaya Karnataka Web BEL-18NPN1


ಸಮೀಪದ ಮಾಣಕಾಪುರ ಗ್ರಾಮದಲ್ಲಿ ಕಸಾಪ ಮತ್ತು ಗಡಿನಾಡು ಕನ್ನಡ ಬಳಗದ ವತಿಯಿಂದ ಆಯೋಜಿಸಿದ್ದ ಗಡಿಭಾಗದ ಕನ್ನಡ ಶಾಲೆಗಳಿಗೆ ಭೇಟಿ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಅನುಕೂಲವಾಗಲು ಮತ್ತು ಸರಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು ಗಣಕ ಯಂತ್ರ ಆಧಾರಿತ ಬೋಧನೆಯನ್ನು ಪರಿಚಯಿಸಬೇಕು. ಡಿಜಿಟಲ್‌ ಯುಗದಲ್ಲಿ ಬದುಕುತ್ತಿರುವ ಈಗಿನ ಮಕ್ಕಳಿಗೆ ಸಾಂಪ್ರದಾಯಿಕ ಬೋಧನೆ ಬೇಸರ ತರಿಸುತ್ತದೆ. ಈ ನಿಟ್ಟಿನಲ್ಲಿ ಸರಕಾರ ಚಿಂತಿಸಬೇಕಿದೆ ಎಂದರು.

ಹಿರಿಯ ಸಾಹಿತಿ ಪ್ರೊ.ಎಸ್‌.ವೈ.ಹಂಜಿ ಮಾತನಾಡಿ, ಮಾಣಕಾಪುರ ಶಾಲೆಯಲ್ಲಿ 1 ರಿಂದ 8ನೇ ತರಗತಿಯವರೆಗೆ 117 ಮಕ್ಕಳು ಓದುತ್ತಿದ್ದು, ಕೇವಲ ಎರಡು ಕೊಠಡಿಗಳು ಮಾತ್ರ ಇವೆ. ಮಕ್ಕಳು ಮಳೆ ಗಾಳಿಯಲ್ಲಿ ಹೊರಾಂಗಣದಲ್ಲಿ ಕುಳಿತು ಕಲಿಯಬೇಕಾದ ಕೆಟ್ಟ ಪರಿಸ್ಥಿತಿ ಇದೆ. ಆದ್ದರಿಂದ ಶಾಸಕರು ತಮ್ಮ ಅನುದಾನದಲ್ಲಿ ಆದಷ್ಟು ಬೇಗ ಕೊಠಡಿಗಳನ್ನು ಕಟ್ಟಿಸಿ ಕೊಡಬೇಕೆಂದರಲ್ಲದೇ ಮಾಣಕಾಪುರದಲ್ಲಿ ಕನ್ನಡ ಮಾಧ್ಯಮಿಕ ಶಾಲೆ ಆರಂಭಿಸುವ ನಿಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳಬೇಕೆಂದರು.

ನಿಪ್ಪಾಣಿ ಕಸಾಪ ವತಿಯಿಂದ ಗಣಕ ಯಂತ್ರವೊಂದನ್ನು ದೇಣಿಗೆಯಾಗಿ ನೀಡಲಾಯಿತು. ನಿಪ್ಪಾಣಿಯ ಕ್ಷೇತ್ರ ಶಿಕ್ಷ ಣಾಧಿಕಾರಿ ರಾಮನಗೌಡ ಕಂಪ್ಲಿ, ಬಿಆರ್‌ಸಿ ಪಾಶಾ ಮಕಾನದಾರ, ಪ್ರಶಾಂತ ರಾಮನಕಟ್ಟಿ, ಸುರೇಶ ಕಾನಪೇಟ, ಕನ್ನಡ ಬಳಗದ ಕಾರ್ಯದರ್ಶಿ ಕುಮಾರ ತಳವಾರ, ಬಾಹುಬಲಿ ನರವಾಡೆ, ರವೀಂದ್ರ ಚೌಗಲಾ, ಪದ್ಮರಾಜ ಚೌಗಲಾ, ಪ್ರದಾನ ಗುರು ಎಂ.ಬಿ. ಕೊರವಿ, ವೈಭವ ವಾಘಮಾರೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ