ಆ್ಯಪ್ನಗರ

ರಂಗಾಯಣಗಳ ನಿರ್ದೇಶಕರ ವಜಾ ಆದೇಶ ಹಿಂಪಡೆಯಲು ಆಗ್ರಹ

ಬೆಳಗಾವಿ: ರಾಜ್ಯ ಸರಕಾರ ರಂಗಾಯಣಗಳ ನಿರ್ದೇಶಕರುಗಳನ್ನು ವಜಾಗೊಳಿಸಿರುವುದು ನ್ಯಾಯ ಸಮ್ಮತವಾಗಿಲ್ಲ...

Vijaya Karnataka 22 Sep 2019, 5:00 am
ಬೆಳಗಾವಿ: ರಾಜ್ಯ ಸರಕಾರ ರಂಗಾಯಣಗಳ ನಿರ್ದೇಶಕರುಗಳನ್ನು ವಜಾಗೊಳಿಸಿರುವುದು ನ್ಯಾಯ ಸಮ್ಮತವಾಗಿಲ್ಲ. ಈ ಹಿನ್ನೆಲೆಯಲ್ಲಿಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಿ ವಜಾ ಆದೇಶ ಹಿಂಪಡೆಯಬೇಕೆಂದು ರಂಗಕರ್ಮಿ ಡಾ. ಡಿ.ಎಸ್‌. ಚೌಗಲೆ ಆಗ್ರಹಿಸಿದ್ದಾರೆ.
Vijaya Karnataka Web demand to revoke dismissal order of rangayana directors
ರಂಗಾಯಣಗಳ ನಿರ್ದೇಶಕರ ವಜಾ ಆದೇಶ ಹಿಂಪಡೆಯಲು ಆಗ್ರಹ


ಈ ಕುರಿತು ಪ್ರಕಟಣೆ ನೀಡಿರುವ ಅವರು, ರಂಗಾಯಣ ಸ್ವಾಯತ್ತ ಸಂಸ್ಥೆ. ಅದಕ್ಕೆ ಅದರದೇ ಆದ ಬೈಲಾ ಇದೆ. ಸರಕಾರ ರಂಗ ಸಮಾಜದ ಸದಸ್ಯರು, ನಿರ್ದೇಶಕರನ್ನು ನೇಮಿಸುವಾಗ ಅವರ ಪ್ರತಿಭೆಯನ್ನು ಪರಿಗಣನೆಗೆ ತಗೆದುಕೊಳ್ಳುತ್ತದೆ. ಇಂಥವರು ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿರುವುದಿಲ್ಲ. ಕೇವಲ ಸಾಂಸ್ಕೃತಿಕ ರಾಯಭಾರಿಯಾಗಿರುತ್ತಾರೆ. ಜನರ ದನಿಯಾಗಿ ರಂಗಾಭಿವ್ಯಕ್ತಿ ಮಾಡುತ್ತಾರೆ. ಇಂಥವರನ್ನು ಏಕಾಏಕಿಯಾಗಿ ವಜಾಗೊಳಿಸಿರುವುದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ