ಆ್ಯಪ್ನಗರ

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

ಬೈಲಹೊಂಗಲ: ಗಾಣಿಗ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಹಾಗೂ ಬೈಲಹೊಂಗಲ ...

Vijaya Karnataka 1 Sep 2019, 5:00 am
ಬೈಲಹೊಂಗಲ: ಗಾಣಿಗ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಹಾಗೂ ಬೈಲಹೊಂಗಲ ಪಟ್ಟಣದಲ್ಲಿಗಾಣಿಗ ಭವನಕ್ಕೆ ನಿವೇಶನ ಮತ್ತು ಕಟ್ಟಡ ಮಂಜೂರಿಗೆ ಆಗ್ರಹಿಸಿ ಗಾಣಿಗ ಸಮಾಜದ ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಉಪಮುಖ್ಯಮಂತ್ರಿ ಲಕ್ಷತ್ರ್ಮಣ ಸವದಿ ಅವರಿಗೆ ಪಟ್ಟಣದಲ್ಲಿಮನವಿ ಸಲ್ಲಿಸಿದರು.
Vijaya Karnataka Web demand to set up ganiga development corporation
ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ


10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗಾಣಿಗ ಸಮಾಜದವರು ಇಂದಿಗೂ ಹಳ್ಳಿಗಳಲ್ಲಿಎಣ್ಣೆ ಉತ್ಪಾದನೆಯನ್ನೇ ಜೀವನಾಂಶಕ್ಕೆ ಅವಲಂಬಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಸಮಾಜದ ಅಭಿವೃದ್ಧಿಗಾಗಿ ನಿಗಮ ಮಂಡಳಿ ಸ್ಥಾಪಿಸಬೇಕು. ಬೈಲಹೊಂಗಲದಲ್ಲಿಗಾಣಿಗ ಭವನ ನಿರ್ಮಿಸಿ ಸಮಾಜದ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿಒತ್ತಾಯಿಸಿದ್ದಾರೆ.

ಈ ವೇಳೆ ಸಂಘದ ಗೌರವ ಅಧ್ಯಕ್ಷ ಸಿದ್ಧರಾಮ ಪತ್ತೆನ್ನವರ, ಅಧ್ಯಕ್ಷ ಗಂಗಾಧರ ಗಿರಿಜನ್ನವರ, ಉಪಾಧ್ಯಕ್ಷ ವಿರುಪಾಕ್ಷಿ ಕಟ್ಟಿಮನಿ, ಬಾಬು ಪತ್ತೆಣ್ಣವರ, ಚಂದ್ರಶೇಖರ ನರಗುಂದ, ಮಹಾಂತೇಶ ರಗಟಿ, ಮಲ್ಲಿಕಾರ್ಜುನ ಗಾಣಗಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ