ಆ್ಯಪ್ನಗರ

ಅನರ್ಹ ಕುಟುಂಬಗಳ ತೆರವಿಗೆ ಆಗ್ರಹ

ಬಾವನಸೌಂದತ್ತಿ: 2005ರಲ್ಲಿಸಂಭವಿಸಿದ ಕೃಷ್ಣಾ ನದಿ ...

Vijaya Karnataka 3 Dec 2019, 5:00 am
ಬಾವನಸೌಂದತ್ತಿ: 2005ರಲ್ಲಿಸಂಭವಿಸಿದ ಕೃಷ್ಣಾ ನದಿ ಪ್ರವಾಹ ಸಂತ್ರಸ್ತರಿಗೆ ನಿರ್ಮಿಸಿದ ಮನೆಗಳಲ್ಲಿವಾಸ ಮಾಡಿರುವ ಅನರ್ಹ ಕುಟುಂಬಗಳನ್ನು ತೆರವುಗೊಳಿಸಿ ಅರ್ಹ ಫಲಾನುಭವಿಗಳಿಗೆ ನೀಡುವಂತೆ ಆಗ್ರಹಿಸಿ ಸಮೀಪದ ಭಿರಡಿ ಗ್ರಾಮದ ಪ್ರವಾಹ ಸಂತ್ರಸ್ತರು ಸೋಮವಾರ ಗ್ರಾಪಂ ಕಚೇರಿಗೆ ಬೀಗ ಜಡಿದು ಧರಣಿ ನಡೆಸಿ ಪ್ರತಿಭಟಿಸಿದರು.
Vijaya Karnataka Web demanding the eviction of ineligible families
ಅನರ್ಹ ಕುಟುಂಬಗಳ ತೆರವಿಗೆ ಆಗ್ರಹ


ಭಿರಡಿ ಗ್ರಾಮದಲ್ಲಿ2005ರಲ್ಲಿಕೃಷ್ಣಾ ನದಿ ಪ್ರವಾಹದಿಂದ ಸಂತ್ರಸ್ತರಾದ 132 ಕುಟುಂಬಗಳಿಗೆ ಗ್ರಾಮದ ರಿಸನಂ.21 ರಲ್ಲಿಮನೆಗಳನ್ನು ನಿರ್ಮಿಸಲಾಗಿತ್ತು. ಆದರೆ ಗ್ರಾಪಂನವರು ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸುವ ಮೊದಲೇ ಭಿರಡಿ ಮತ್ತು ಬೇರೆ ಗ್ರಾಮದ ಅನರ್ಹ ಕುಟುಂಬಗಳು ಅನಧಿಕೃತವಾಗಿ ಅಲ್ಲಿವಾಸ ಮಾಡುತ್ತಿವೆ. ಈಗ ಮತ್ತೆ ಗ್ರಾಮದಲ್ಲಿಪ್ರವಾಹ ಬಂದರೂ ನೈಜ ಸಂತ್ರಸ್ತರಿಗೆ ಗ್ರಾಮ ಪಂಚಾಯಿತಿಯವರು ಮನೆಗಳನ್ನು ಹಸ್ತಾಂತರಿಸಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಂಕರ ಗಡ್ಕರಿ, ಪಾಂಡು ಸಾವಂತ, ಅಶೋಕ ನಾವಿ, ಶಂಕರ ತೇಲಿ, ಸದಾಶಿವ ನಿಶಾಂದಾರ, ಹಸನ ಮುಲ್ಲಾ, ರಮಜಾನ ಮುಲ್ಲಾ, ನಿಂಗಪ್ಪ ದೇವಮುರೆ, ಲಕ್ಷತ್ರ್ಮಣ ತೇಲಿ, ಲಕ್ಷಿತ್ರ್ಮೕ ಬಸನಕೊಪ್ಪ, ಅಕ್ಷತಾ, ಅಕ್ಕಾತಾಯಿ ಹುಂಡೇಕರ, ಮಂಗಲ ಬುಸನಕೊಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

15ರೊಳಗೆ ಸಮಸ್ಯೆ ಇತ್ಯರ್ಥ ಭರವಸೆ:
ತಾಪಂ ಇಒ ಪ್ರಕಾಶ ವಡ್ಡರ ಸ್ಥಳಕ್ಕೆ ಭೇಟಿ ನೀಡಿ, ಡಿ.15ರೊಳಗೆ ತಹಸೀಲ್ದಾರ್‌ ಮತ್ತು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸುವುದಾಗಿ ನೆರೆ ಸಂತ್ರಸ್ತರಿಗೆ ಭರವಸೆ ನೀಡಿದರು. ನಂತರ ನೆರೆ ಸಂತ್ರಸ್ತರು ಧರಣಿ ಹಿಂಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ