ಆ್ಯಪ್ನಗರ

cಸೆ.4ರಂದು ಬೆಂಗಳೂರು ಚಲೋ ಕಪ್ಪು ಬಟ್ಟೆ ಕಟ್ಟಿ ಭೂಮಾಪನ ಸಿಬ್ಬಂದಿ ಕರ್ತವ್ಯ

ಬೈಲಹೊಂಗಲ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಭೂಮಾಪಕರು ನಡೆಸಲು ...

Vijaya Karnataka 21 Aug 2019, 5:00 am
ಬೈಲಹೊಂಗಲ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಭೂಮಾಪಕರು ನಡೆಸಲು ಉದ್ದೇಶಿಸಿರುವ 'ಬೆಂಗಳೂರು ಚಲೋ' ರಾಜ್ಯವ್ಯಾಪ್ತಿ ಹೋರಾಟಕ್ಕೆ ಮಂಗಳವಾರ ಪಟ್ಟಣದ ಭೂಮಾಪನ ಇಲಾಖೆ ಸಿಬ್ಬಂದಿ ಬೆಂಬಲ ಸೂಚಿಸಿ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸಿದರು.
Vijaya Karnataka Web BEL-20HTP25


ಪಟ್ಟಣದ ಮಿನಿವಿಧಾನಸೌಧದಲ್ಲಿರುವ ಕಚೇರಿಯಲ್ಲಿ ಸಹಾಯಕ ಭೂಮಾಪನ ಕಚೇರಿಯಲ್ಲಿ ಕಪ್ಪು ಬಟ್ಟೆ ಕಟ್ಟಿಕೊಂಡು ಕೆಲಸ ನಿರ್ವಹಿಸಿ ಗಮನ ಸೆಳೆದರು.

ಸರ್ವೇ ಸೂಪರವೈಜರ್‌ ಎ.ಡಿ. ಹೊಸಕೇರಿ, ಸಿಟಿ ಸರ್ವೇಯರ್‌ ಕೆ.ಜಿ. ಪಾಟೀಲ ಮಾತನಾಡಿ, ಮಾಸಿಕ 30 ಕಡತಗಳ ವಿಲೇವಾರಿ ನಿಗದಿ, ಬಡ್ತಿ, ಖಾಲಿ ಹುದ್ದೆ ಭರ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸೆ.4 ರಂದು ಬೆಂಗಳೂರು ಚಲೋ ಹೋರಾಟ ಕೈಗೆತ್ತಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ 12 ದಿನಗಳ ಕಾಲ ಕಪ್ಪು ಬಟ್ಟೆ ಕಟ್ಟಿಕೊಂಡು ಕೆಲಸ ನಿರ್ವಹಿಸುವ ಮೂಲಕ ಶಾಂತಿಯುತ ಹೋರಾಟ ನಡೆಸಲಾಗುವುದು ಎಂದರು.

ಈ ವೇಳೆ ಎಸ್‌.ಎಸ್‌. ಮೇಲಿನಮನಿ, ನಾಗನೌಡ ಪಾಟೀಲ, ಸಿದ್ದು ಗೊರವರ, ಪ್ರಕಾಶ ಬೇವಿನಮರದ, ಹಿರೇಮಠ, ಶಫೀ ಮಾಗಡಿ, ಶಿಲ್ಪಾ ತೇಲಿ, ಮಾಳಮ್ಮ ಬೆಲ್ಲದ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ