ಆ್ಯಪ್ನಗರ

ಶಿಕ್ಷಣ ಇಲಾಖೆ ನಿರ್ದೇಶಕರ ವಜಾಕ್ಕೆ ಒತ್ತಾಯ

ಸವದತ್ತಿ: ಸಂವಿಧಾನ ರಚನೆ ವಿಚಾರದಲ್ಲಿ ಸಾರ್ವಜನಿಕ ...

Vijaya Karnataka 15 Nov 2019, 5:00 am
ಸವದತ್ತಿ: ಸಂವಿಧಾನ ರಚನೆ ವಿಚಾರದಲ್ಲಿಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು ವಿವಾದಾತ್ಮಕ ಮಾತನಾಡಿದ್ದು ಈ ಹಿನ್ನೆಲೆಯಲ್ಲಿಅವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿ ಗುರುವಾರ ಸವದತ್ತಿ ತಾಲೂಕಿನ ವಿವಿಧ ದಲಿತ ಸಂಘಟನೆಗಳ ಹೋರಾಟ ಜಂಟಿ ಕ್ರಿಯಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
Vijaya Karnataka Web 14SDT1_53
ದಲಿತ ಸಂಘಟನೆಗಳ ಹೋರಾಟ ಜಂಟಿ ಕ್ರಿಯಾ ಸಮಿತಿ ಸದಸ್ಯರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.


ಡಾ.ಬಾಬಾಸಾಹೇಬ ಅಂಬೇಡ್ಕರ ಅವರನ್ನು ಸಂವಿಧಾನ ಶಿಲ್ಪಿ ಎಂದೆ ಕರೆಯಲಾಗುತ್ತದೆ. ಸಿ.ಎಂ.ಸಿ.ಎ ಎಂಬ ಸ್ವಯಂ ಸೇವಾ ಸಂಸ್ಥೆ ಅಂಬೇಡ್ಕರ್‌ ಒಬ್ಬರೇ ಸಂವಿಧಾನ ರಚಿಸಿಲ್ಲಎಂಬ ವಿವಾದಿತ ಕೈಪಿಡಿ ಸಿದ್ಧ ಪಡಿಸಿರುವುದು ಖಂಡನೀಯ. ಈ ಕೈಪಿಡಿಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳ ಮೂಲಕ ರಾಜ್ಯದ ಎಲ್ಲಶಾಲೆಗಳಿಗೆ ಹಂಚುವ ವ್ಯವಸ್ಥೆ ಮಾಡಿರುವುದು ವ್ಯವಸ್ಥಿತ ಸಂಚು ಎಂದು ಆರೋಪಿಸಿದರು.

ತಹಸೀಲ್ದಾರ ಶಂಕರ ಗೌಡಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಬಸವರಾಜ ತಳವಾರ, ವಿಲ್ಸನ್‌ ಸೊಪ್ಪಡ್ಲ, ವಿ.ಎಂ.ದೊಡಮನಿ, ಕೆ.ವೈ.ಮಾದರ, ಪಿ.ಎಸ್‌.ಹೊಸಟ್ಟಿ, ಎಲ್‌.ಎಸ್‌.ನಾಯಕ, ಕೆ.ಕೆ.ಜಂಬೂದ್ವೀಪ, ಪಿ.ಎಸ್‌.ಮಲ್ಲೂರ, ಪಿ.ಎಲ್‌.ತಳವಾರ ಹಾಗೂ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ