ಆ್ಯಪ್ನಗರ

ಗಾಂಜಾ ಮಾರುತ್ತಿದ್ದ ಆರು ಜನರ ಬಂಧನ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಗುಂಪಿನ ಮೇಲೆ ಶುಕ್ರವಾರ ದಾಳಿ ನಡೆಸಿದ ಬೆಳಗಾವಿ ನಗರ ಪೊಲೀಸರು ಆರು ಜನರನ್ನು ಬಂಧಿಸಿ 38,930 ರೂ. ಮೌಲ್ಯದ 2 ಕೆಜಿ ಗಾಂಜಾ ಸೇರಿದಂತೆ ಇತರ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

Vijaya Karnataka 20 Jul 2019, 5:00 am
ಬೆಳಗಾವಿ: ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಗುಂಪಿನ ಮೇಲೆ ಶುಕ್ರವಾರ ದಾಳಿ ನಡೆಸಿದ ಬೆಳಗಾವಿ ನಗರ ಪೊಲೀಸರು ಆರು ಜನರನ್ನು ಬಂಧಿಸಿ 38,930 ರೂ. ಮೌಲ್ಯದ 2 ಕೆಜಿ ಗಾಂಜಾ ಸೇರಿದಂತೆ ಇತರ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
Vijaya Karnataka Web BLG-1907-2-52-19GANJA


ನಗರದ ಧರ್ಮನಾಥ ಭವನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸುಭಾಷ್‌ ನಗರದ ಮೋದಿನ್‌ ರಫೀಕ್‌ ಅತ್ತಾರ (34), ಮಹ್ಮದ್‌ಯಾಸೀನ್‌ ಕುತ್ಬುದ್ದಿನ್‌ ಅತ್ತಾರ (23), ವೀರಭದ್ರ ನಗರದ ತಬ್ರೇಜ್‌ ಇಬ್ರಾಹಿಂ ಅಂಡೆವಾಲೆ (20), ಮಹ್ಮದಶಾಹೀದ್‌ ಅತಿಕ್‌ ಮುಲ್ಲಾ (19) ಹಾಗೂ ಅನಗೋಳ ಕುರುಬರ ಗಲ್ಲಿಯ ಚೇತನ ಮಾರುತಿ ಶಿಂಧೆ (19) ಎಂಬುವವರನ್ನು ಬಂಧಿಸಿದ್ದಾರೆ. ಇವರಿಂದ 30 ಸಾವಿರ ರೂ. ಮೌಲ್ಯದ 1486 ಗ್ರಾಂ ತೂಕದ ಗಾಂಜಾ, 1950 ರೂ. ನಗದು ಹಾಗೂ ವಿವಿಧ ಕಂಪನಿಯ 5 ಮೊಬೈಲ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಹಳೇ ತರಕಾರಿ ಮಾರ್ಕೇಟ್‌ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಘೀ ಗಲ್ಲಿಯ ಅನ್ವರ್‌ಹುಸೇನ ತಖಿ ಜವಾದ್‌ (57) ನನ್ನು ಸಿಸಿಐಬಿ ಪೊಲೀಸರು ಬಂಧಿಸಿ, ಆತನಿಂದ 5980 ರೂ. ಮೌಲ್ಯದ 598 ಗ್ರಾಂ ಗಾಂಜಾ ವಶ ಪಡಿಸಿಕೊಂಡಿದ್ದಾರೆ.

ನಗರ ಪೊಲೀಸ್‌ ಆಯುಕ್ತ ಬಿ.ಎಸ್‌.ಲೋಕೇಶಕುಮಾರ, ಡಿಸಿಪಿಗಳಾದ ಸೀಮಾ ಲಾಟ್ಕರ್‌, ಯಶೋಧಾ ವಂಟಗೂಡೆ ಮಾರ್ಗದರ್ಶನದಲ್ಲಿ ಸಿಇಎನ್‌ ಪೊಲೀಸ್‌ ಇನ್ಸ್‌ಪೆಕ್ಟರ್‌ ಯು.ಎಚ್‌.ಸಾತೇನಹಳ್ಳಿ, ಸಿಸಿಐಬಿ ಘಟಕ ಪೊಲೀಸ್‌ ಇನ್ಸಪೆಕ್ಟರ್‌ ಸಂಜೀವ ಕಾಂಬಳೆ ನೇತೃತ್ವದಲ್ಲಿ ಎಎಸ್‌ಐ ಬಿ.ಆರ್‌ ಮುತ್ನಾಳ, ಚೆನ್ನಪ್ಪ ಚನ್ನಪ್ಪನವರ, ಬಿ.ಎನ್‌. ಬಳಗನ್ನವರ, ಎಸ್‌.ಆರ್‌. ಮೇತ್ರಿ, ಅರುಣ ಕಾಂಬಳೆ, ಮಹೇಶ ವಡೆಯರ, ಎಸ್‌.ಎಸ್‌. ಪಾಟೀಲ, ಸೇರಿದಂತೆ ಸಿಬ್ಬಂದಿ ದಾಳಿ ನಡೆಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ