ಆ್ಯಪ್ನಗರ

ದೇವದಾಸಿಯರಿಗೆ ಇಂದಿಗೂ ಗೌರವಯುತ ಬದುಕಿಲ್ಲ

ಚಿಕ್ಕೋಡಿ: ಮೂಡನಂಬಿಕೆಯ ಒತ್ತಡಗಳಿಗೆ ಬಲಿಯಾಗುತ್ತಿರುವ ದೇವದಾಸಿಯರಿಗೆ ಇಂದಿಗೂ ಸಹ ಗೌರವಯುತ ಬದುಕು ಸಿಗುತ್ತಿಲ್ಲ ಎಂದು ಸಿವಿಲ್‌ ನ್ಯಾಯಾಧೀಶ ವಿಜಯಕುಮಾರ ...

Vijaya Karnataka 29 Jun 2019, 5:00 am
ಚಿಕ್ಕೋಡಿ : ಮೂಡನಂಬಿಕೆಯ ಒತ್ತಡಗಳಿಗೆ ಬಲಿಯಾಗುತ್ತಿರುವ ದೇವದಾಸಿಯರಿಗೆ ಇಂದಿಗೂ ಸಹ ಗೌರವಯುತ ಬದುಕು ಸಿಗುತ್ತಿಲ್ಲ ಎಂದು ಸಿವಿಲ್‌ ನ್ಯಾಯಾಧೀಶ ವಿಜಯಕುಮಾರ ಬಾಗಡೆ ವಿಷಾದ ವ್ಯಕ್ತಪಡಿಸಿದರು.
Vijaya Karnataka Web BEL-28CKD4


ಅವರು ಶುಕ್ರವಾರ ಇಲ್ಲಿನ ತಾಪಂ ಸಭಾಭವನದಲ್ಲಿ ಎಚ್‌ಆರ್‌ಎಲ್‌ಎನ್‌ ಹಾಗೂ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಪಂಚಾಯಿತಿ, ಮಹಿಳಾ ಅಭಿವೃದ್ಧಿ ಸೇವಾ ಸಂಸ್ಥೆ ಮತ್ತು ರಾಯಬಾಗದ ಅಮ್ಮಾ ಫೌಂಡೇಶನ್‌ ಸಹಯೋಗದಲ್ಲಿ ಹಮ್ಮಿಕೊಂಡ ದೇವದಾಸಿ ಮಹಿಳೆಯರ ಸಬಲೀಕರಣಕ್ಕಾಗಿ ಒಂದು ದಿನದ ಕಾನೂನು ಅರಿವು ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದರು.

ಸರಕಾರ ಸಮಾಜದ ಕೆಳವರ್ಗದ ಜನರಿಗೆ ಅನ್ಯಾಯವಾಗದಂತೆ ಕಾನೂನಿನ ಸಲಹೆ ನೀಡುತ್ತಿದೆ. ತಾಲೂಕಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ಸಲಹೆ ಪಡೆದು ಸಮಸ್ಯೆಗಳನ್ನು ಈಡೇರಿಸಿಕೊಳ್ಳಬಹುದು. ಉಚಿತ ಸೇವೆಗೆ 1ಲಕ್ಷ ರೂ. ಇದ್ದ ಆದಾಯ ಮಿತಿಯನ್ನು ಸರಕಾರವು 5 ಲಕ್ಷ ರೂ.ಗಳಿಗೆ ಏರಿಕೆ ಮಾಡಿದೆ ಎಂದು ತಿಳಿಸಿದರು.

ಕಾರ್ಯಾಗಾರಕ್ಕೆ ಚಾಲನೆ ನೀಡಿದ ಹಿರಿಯ ದಿವಾಣಿ ನ್ಯಾಯಾಧೀಶ ಎಸ್‌.ಎಲ್‌. ಚವ್ಹಾಣ ಮಾತನಾಡಿ, ಸರಕಾರವು ದೇವದಾಸಿ ಮಹಿಳೆಯರಿಗಾಗಿ ಕಾನೂನಾತ್ಮಕವಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದರು.

ನ್ಯಾಯವಾದಿ ಎಂ.ಬಿ. ಪಾಟೀಲ ಉಚಿತ ಕಾನೂನು ಸೇವೆ ಕುರಿತು ಉಪನ್ಯಾಸ ನೀಡಿದರು. ಬೆಂಗಳೂರಿನ ಅಲವಿನ್‌ ಡಿಸೋಜಾ, ಎಚ್‌ಆರ್‌ಎಲ್‌ಎನ್‌ನ ನ್ಯಾಯವಾದಿ ಮನೋರಂಜಿನಿದೇವಿ ಉಪನ್ಯಾಸ ನೀಡಿದರು. ಶೋಭಾ ಘಸ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷೆ ಮಂಜುಳಾ ಹರಿಜನ ವಂದಿಸಿದರು.

ಮನವಿ ಸಲ್ಲಿಕೆ :
ದೇವದಾಸಿ ಪುನರ್ವಸತಿ ಯೋಜನೆಯಡಿ ಸರಕಾರವು 10 ವರ್ಷಗಳ ಹಿಂದೆ ಉಳುಮೆ ಮಾಡಲು ನೀಡಿದ ಜಮೀನನ್ನು ಕಾನೂನಾತ್ಮಕವಾಗಿ ದೇವದಾಸಿ ಮಹಿಳೆಯರಿಗೆ ಸ್ವಂತಕ್ಕೆ ನೀಡಬೇಕೆಂದು ಸಂತ್ರಸ್ತರು ಹಿರಿಯ ದಿವಾನಿ ನ್ಯಾಯಾಧೀಶ ಎಸ್‌.ಎಲ್‌. ಚವಾಣ ಅವರಿಗೆ ಮನವಿ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ