ಬೆಳಗಾವಿ: ಇಲ್ಲಿನ ಐತಿಹಾಸಿಕ ರಾಜಹಂಸಗಡ ಪರಿಸರದಲ್ಲಿಪ್ರವಾಸೋದ್ಯಮ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿಅಂದಾಜು 50 ಕೋಟಿ ರೂ. ವೆಚ್ಚದಲ್ಲಿಕೇಬಲ್ ಕಾರ್, ಮ್ಯೂಜಿಯಂ, ಲೇಝರ್ ಶೋ ಮತ್ತಿತರ ಕಾಮಗಾರಿಗಳು ನಡೆಯಲಿವೆ.
ಈ ಕುರಿತ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿದ್ದು, ಲೋಕೋಪಯೋಗಿ ಇಲಾಖೆ, ಪ್ರವಾಸೋದ್ಯಮ ಅಧಿಕಾರಿಗಳು ಹಾಗೂ ಕೇಬಲ್ ಕಾರ್ ಸಂಗತಿಯಲ್ಲಿಪರಿಣತಿ ಹೊಂದಿದ ಪುಣೆಯಿಂದ ಆಗಮಿಸಿದ್ದ ತಜ್ಞರ ತಂಡ ರಾಜಹಂಸಗಡ ಪರಿಸರಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಇನ್ನಷ್ಟು ತಜ್ಞರು ಮತ್ತು ಸಂಬಂಧಿತ ಹಿರಿಯ ಅಧಿಕಾರಿಗಳ ತಂಡ ಮುಂದಿನ ತಿಂಗಳು ಇನ್ನೊಮ್ಮೆ ಭೇಟಿ ನೀಡಿ ಯೋಜನೆಗೆ ಅಂತಿಮ ಸ್ಪರ್ಶ ನೀಡಲಿದೆ.
ಇಡೀ ಯೋಜನೆ ದಕ್ಷಿಣ ವಿಧಾನಸಭೆ ವ್ಯಾಪ್ತಿಯಲ್ಲಿನಡೆಯಲಿದೆ. ''2012ರಲ್ಲೇ ಈ ಯೋಜನೆಗೆ ಪ್ರಸ್ತಾವನೆ ಕಳುಹಿಸಿದ್ದೆ. ಕಾರಣಾಂತರಗಳಿಂದ ಆಗಲಿಲ್ಲ. ಈಗ ಸರಕಾರದ ಜತೆಗೆ ಎಲ್ಲನಿಟ್ಟಿನಿಂದ ಸಹಕಾರ ಸಿಕ್ಕಿರುವುದರಿಂದ ಆದಷ್ಟು ಬೇಗ ಇದನ್ನು ಅನುಷ್ಠಾನಕ್ಕೆ ತಂದು ಬೆಳಗಾವಿ ಪ್ರವಾಸೋದ್ಯಮಕ್ಕೊಂದು ಕೊಡುಗೆ ನೀಡಲಾಗುತ್ತದೆ. ನೆರೆಹೊರೆ ಜಿಲ್ಲೆಗಳ ಜತೆಗೆ ಇದು ಗೋವಾ, ದಕ್ಷಿಣ ಮಹಾರಾಷ್ಟ್ರದ ಪ್ರವಾಸಿಗರನ್ನೂ ಆಕರ್ಷಿಸಲಿದೆ. ಉದ್ಯೋಗ ಸೃಷ್ಟಿ ಮತ್ತು ಇಲ್ಲಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಇದು ಅಗತ್ಯವಾಗಿರುವುದರಿಂದ ಬರಲಿರುವ ಬಜೆಟ್ನಲ್ಲೇ ಹಣಕಾಸು ಮಂಜೂರಾತಿ ಪಡೆಯಲಾಗುತ್ತದೆ'' ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.
ಯಳ್ಳೂರಿನ ಅರವಳ್ಳಿ ಡ್ಯಾಂನಿಂದ ರಾಜಹಂಸಗಡ ಕೋಟೆ ನಡುವಿನ 2 ಕಿಮೀ ಅಂತರದಲ್ಲಿಕೇಬಲ್ ಕಾರ್ ಸಂಚರಿಸಲಿದೆ. ಕೋಟೆ ಪರಿಸರದಲ್ಲಿನಿರ್ಮಾಣ ಮಾಡಲಾಗುವ ಐತಿಹಾಸಿಕ ಸಂಗತಿಗಳನ್ನು ನೋಡಿಕೊಂಡು ಪ್ರವಾಸಿಗಳು ಮತ್ತೆ ಕೇಬಲ್ ಕಾರು ಮೂಲಕ ಅರವಳ್ಳಿ ಡ್ಯಾಂ ಪರಿಸರಕ್ಕೆ ತಲುಪಬಹುದಾಗಿದೆ.
ಈ ಕುರಿತ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿದ್ದು, ಲೋಕೋಪಯೋಗಿ ಇಲಾಖೆ, ಪ್ರವಾಸೋದ್ಯಮ ಅಧಿಕಾರಿಗಳು ಹಾಗೂ ಕೇಬಲ್ ಕಾರ್ ಸಂಗತಿಯಲ್ಲಿಪರಿಣತಿ ಹೊಂದಿದ ಪುಣೆಯಿಂದ ಆಗಮಿಸಿದ್ದ ತಜ್ಞರ ತಂಡ ರಾಜಹಂಸಗಡ ಪರಿಸರಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಇನ್ನಷ್ಟು ತಜ್ಞರು ಮತ್ತು ಸಂಬಂಧಿತ ಹಿರಿಯ ಅಧಿಕಾರಿಗಳ ತಂಡ ಮುಂದಿನ ತಿಂಗಳು ಇನ್ನೊಮ್ಮೆ ಭೇಟಿ ನೀಡಿ ಯೋಜನೆಗೆ ಅಂತಿಮ ಸ್ಪರ್ಶ ನೀಡಲಿದೆ.
ಇಡೀ ಯೋಜನೆ ದಕ್ಷಿಣ ವಿಧಾನಸಭೆ ವ್ಯಾಪ್ತಿಯಲ್ಲಿನಡೆಯಲಿದೆ. ''2012ರಲ್ಲೇ ಈ ಯೋಜನೆಗೆ ಪ್ರಸ್ತಾವನೆ ಕಳುಹಿಸಿದ್ದೆ. ಕಾರಣಾಂತರಗಳಿಂದ ಆಗಲಿಲ್ಲ. ಈಗ ಸರಕಾರದ ಜತೆಗೆ ಎಲ್ಲನಿಟ್ಟಿನಿಂದ ಸಹಕಾರ ಸಿಕ್ಕಿರುವುದರಿಂದ ಆದಷ್ಟು ಬೇಗ ಇದನ್ನು ಅನುಷ್ಠಾನಕ್ಕೆ ತಂದು ಬೆಳಗಾವಿ ಪ್ರವಾಸೋದ್ಯಮಕ್ಕೊಂದು ಕೊಡುಗೆ ನೀಡಲಾಗುತ್ತದೆ. ನೆರೆಹೊರೆ ಜಿಲ್ಲೆಗಳ ಜತೆಗೆ ಇದು ಗೋವಾ, ದಕ್ಷಿಣ ಮಹಾರಾಷ್ಟ್ರದ ಪ್ರವಾಸಿಗರನ್ನೂ ಆಕರ್ಷಿಸಲಿದೆ. ಉದ್ಯೋಗ ಸೃಷ್ಟಿ ಮತ್ತು ಇಲ್ಲಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಇದು ಅಗತ್ಯವಾಗಿರುವುದರಿಂದ ಬರಲಿರುವ ಬಜೆಟ್ನಲ್ಲೇ ಹಣಕಾಸು ಮಂಜೂರಾತಿ ಪಡೆಯಲಾಗುತ್ತದೆ'' ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.
ಯಳ್ಳೂರಿನ ಅರವಳ್ಳಿ ಡ್ಯಾಂನಿಂದ ರಾಜಹಂಸಗಡ ಕೋಟೆ ನಡುವಿನ 2 ಕಿಮೀ ಅಂತರದಲ್ಲಿಕೇಬಲ್ ಕಾರ್ ಸಂಚರಿಸಲಿದೆ. ಕೋಟೆ ಪರಿಸರದಲ್ಲಿನಿರ್ಮಾಣ ಮಾಡಲಾಗುವ ಐತಿಹಾಸಿಕ ಸಂಗತಿಗಳನ್ನು ನೋಡಿಕೊಂಡು ಪ್ರವಾಸಿಗಳು ಮತ್ತೆ ಕೇಬಲ್ ಕಾರು ಮೂಲಕ ಅರವಳ್ಳಿ ಡ್ಯಾಂ ಪರಿಸರಕ್ಕೆ ತಲುಪಬಹುದಾಗಿದೆ.