ಆ್ಯಪ್ನಗರ

ವಸತಿ, ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಧರಣಿ

ಬೆಳಗಾವಿ: ಜೋಪಡಪಟ್ಟಿ ನಿವಾಸಿಗಳಿಗೆ ಪುನರ್‌ ವಸತಿ ಹಾಗೂ ಇತರ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿ ರಾಷ್ಟ್ರವಾದಿ ...

Vijaya Karnataka 23 Jul 2019, 5:00 am
ಬೆಳಗಾವಿ : ಜೋಪಡಪಟ್ಟಿ ನಿವಾಸಿಗಳಿಗೆ ಪುನರ್‌ ವಸತಿ ಹಾಗೂ ಇತರ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿ ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷ ದ ಕಾರ್ಯಕರ್ತರು ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
Vijaya Karnataka Web BLG-2207-2-52-22RAHUL1


20 ವರ್ಷಗಳಿಂದ ನಗರದ ವಿವಿಧ ಕೊಳಚೆ ಪ್ರದೇಶಗಲ್ಲಿ ಹಲವರು ವಾಸ ಮಾಡುತ್ತಿದ್ದು, ಸಣ್ಣ ಪುಟ್ಟ ಕೆಲಸ ಮಾಡಿ ದೈನಂದಿನ ಜೀವನ ನಡೆಸುತ್ತಿದ್ದಾರೆ. ವಸತಿ ಸೌಲಭ್ಯ ಕಲ್ಪಿಸುವಂತೆ 1999ರಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಹೋರಾಟದ ಫಲವಾಗಿ 2006ರಲ್ಲಿ ಮನೆ ಮಂಜೂರಾದರೂ ಅರ್ಹರಿಗೆ ಸಿಕ್ಕಿದ್ದು ಕಡಿಮೆ. ಆದ್ದರಿಂದ, ಅರ್ಹತೆ ಹೊಂದಿರುವ ಕೊಳಚೆ ನಿವಾಸಿಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಕಾರ್ಯಕರ್ತರು ಮನವಿ ಮೂಲಕ ಆಗ್ರಹಿಸಿದರು.

ಗಾಂಧಿ ನಗರ, ಆಜಾದ್‌ ನಗರ, ಸದಾಶಿವ ನಗರ, ಅಲಾರವಾಡ, ಬಸವನ ಕುಡಚಿ, ಅನಗೋಳ, ಉದ್ಯಮಬಾಗದ ಕೊಳಚೆ ಪ್ರದೇಶಗಳ ನಿವಾಸಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ