ಆ್ಯಪ್ನಗರ

ಕ್ಷೀಣಿಸಿದ ಮಳೆ; ಚುರುಕುಗೊಂಡ ಕೃಷಿ ಚಟುವಟಿಕೆಗಳು

ಖಾನಾಪುರ: ಶನಿವಾರ ತಾಲೂಕಿನಲ್ಲಿ ಮಳೆಯ ಆರ್ಭಟ ಮತ್ತಷ್ಟು ಕ್ಷೀಣಿಸಿದ್ದು ...

Vijaya Karnataka 14 Jul 2019, 5:00 am
ಖಾನಾಪುರ : ಶನಿವಾರ ತಾಲೂಕಿನಲ್ಲಿ ಮಳೆಯ ಆರ್ಭಟ ಮತ್ತಷ್ಟು ಕ್ಷೀಣಿಸಿದ್ದು, ಎರಡು ವಾರಗಳ ನಂತರ ತಾಲೂಕಿನ ಜನರಿಗೆ ಬಿಸಿಲಿನ ದರ್ಶನವಾಗಿದೆ. ಇತ್ತೀಚೆಗೆ ನಿರಂತರವಾಗಿ ಸುರಿದ ಮಳೆಯ ಕಾರಣ ಸ್ಥಗಿತಗೊಂಡಿದ್ದ ಕೃಷಿ ಚಟುವಟಿಕೆಗಳು ಶನಿವಾರದಿಂದ ಮತ್ತೆ ಚುರುಕುಗೊಂಡಿವೆ. ತಾಲೂಕಿನ ದೇವಾಚಿಹಟ್ಟಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದಿದ್ದು, ಯಾವುದೇ ಜೀವಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
Vijaya Karnataka Web BEL-13KHANAPUR3


ಸೇತುವೆಯ ತಡೆಗೋಡೆ ವೀಕ್ಷಣೆ:
ಪಟ್ಟಣದ ಹೊರವಲಯದ ಬೆಳಗಾವಿ - ಪಣಜಿ ರಾಷ್ಟ್ರೀಯ ಹೆದ್ದಾರಿ ಮೇಲಿನ ಮಲಪ್ರಭಾ ನದಿಯ ಸೇತುವೆಯ ತಡೆಗೋಡೆಗಳು ಸಂಪೂರ್ಣ ಹಾಳಾಗಿದ್ದು, ತಡೆಗೋಡೆಯ ಪರಿಸ್ಥಿತಿಯನ್ನು ಶನಿವಾರ ಜಿಪಂ ಸದಸ್ಯ ನಾರಾಯಣ ಕಾರ್ವೇಕರ ವೀಕ್ಷಿಸಿದರು. ಹೆದ್ದಾರಿಯ ಎರಡೂ ಬದಿಯಲ್ಲಿ ಸೇತುವೆಯ ರಕ್ಷ ಣಾ ಗೋಡೆಗೆ ಅಳವಡಿಸಿದ್ದ ಕಬ್ಬಿಣದ ಪೈಪುಗಳು ಕಿತ್ತುಹೋಗಿವೆ. ಈ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಮತ್ತು ಸಾರ್ವಜನಿಕರು ಸಂಚರಿಸುತ್ತಿದ್ದು, ಸೇತುವೆ ದಾಟುವಾಗ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಾಗುವ ಪರಿಸ್ಥಿತಿ ಎದುರಾಗಿದೆ. ಈ ವಿಷಯವನ್ನು ಜಿಪಂ ಸಿಇಒ ಅವರ ಗಮನಕ್ಕೆ ತಂದು ಸೇತುವೆ ದುರಸ್ತಿಗೆ ಪ್ರಯತ್ನಿಸುವುದಾಗಿ ಜಿಪಂ ಸದಸ್ಯರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ