ಆ್ಯಪ್ನಗರ

ಅಂಗನವಾಡಿ ಕೇಂದ್ರ ನಿರ್ಲಕ್ಷ್ಯಿಸಿದರೆ ಶಿಸ್ತು ಕ್ರಮ

ತೆಲಸಂಗ: ಅಂಗನವಾಡಿ ಕೇಂದ್ರಗಳಿಗೆ ಖಾಸಗಿ ಶಿಕ್ಷ ಣ ಸಂಸ್ಥೆಗಳಿಗಿಂತ ಹೆಚ್ಚು ಸವಲತ್ತುಗಳನ್ನು ಸರಕಾರ ಒದಗಿಸಿದ್ದು, ಅಥಣಿ ತಾಲೂಕಿನ ಯಾವುದೇ ಒಂದು ಅಂಗನವಾಡಿ ...

Vijaya Karnataka 13 Jun 2019, 5:00 am
ತೆಲಸಂಗ: ಅಂಗನವಾಡಿ ಕೇಂದ್ರಗಳಿಗೆ ಖಾಸಗಿ ಶಿಕ್ಷ ಣ ಸಂಸ್ಥೆಗಳಿಗಿಂತ ಹೆಚ್ಚು ಸವಲತ್ತುಗಳನ್ನು ಸರಕಾರ ಒದಗಿಸಿದ್ದು, ಅಥಣಿ ತಾಲೂಕಿನ ಯಾವುದೇ ಒಂದು ಅಂಗನವಾಡಿ ಕೇಂದ್ರ ನಿರ್ಲಕ್ಷ್ಯಕ್ಕೆ ಒಳಗಾದರೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಮೇಲ್ವಿಚಾರಕಿಯರ ಮೇಲೆ ಶಿಸ್ತು ಕ್ರಮ ತಪ್ಪಿದ್ದಲ್ಲ ಎಂದು ಅಥಣಿ ಸಿಡಿಪಿಒ ಉದಯಗೌಡ ಪಾಟೀಲ ಅಂಗನವಾಡಿ ಕಾರ್ಯಕರ್ತೆಯರಿಗೆ ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.
Vijaya Karnataka Web BEL-12TELSANG1


ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ನಮ್ಮ ದೇಶದ ಕಡು ಬಡುವರ ಭವಿಷ್ಯ ಬರೆಯುವ ಅವಕಾಶವನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಡಲಾಗಿದೆ. ಇಂತಹ ಪವಿತ್ರ ಕಾರ್ಯದಲ್ಲಿ ನಿರ್ಲಕ್ಷ ್ಯ ಸಲ್ಲದು ಎಂದು ಹೇಳಿದರು.

ಪಿಡಿಒ ಬೀರಪ್ಪ ಕಡಗಂಚಿ ಮಾತನಾಡಿ, ಪ್ರತಿಯೊಂದು ಅಂಗನವಾಡಿ ಮೂಲಕವೇ ಶೌಚಾಲಯ ಬಳಕೆಯ ಜಾಗೃತಿ ಕಾರ್ಯ ನಡೆಯಬೇಕಿದೆ. ಮಹಿಳೆಯರು ಹೆಚ್ಚು ಸಂಪರ್ಕಕಕ್ಕೆ ಬರುವುದು ಅಂಗನವಾಡಿ ಕಾರ್ಯಕರ್ತೆಯರಿಗೆ. ಶೌಚಾಲಯ ಬಳಕೆ ಹಾಗೂ ನಿರ್ಮಾಣ ಕುರಿತಂತೆ ಯಾವುದೇ ಸಹಕಾರ ಗ್ರಾಮ ಪಂಚಾಯಿತಿಯಿಂದ ಕೊಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು. ವಲಯ ಮೇಲ್ವಿಚಾರಕಿ ಎಸ್‌.ಎಸ್‌.ಶಾಸ್ತ್ರಿಮಠ, ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ