ಮೃತಪಟ್ಟ ಯುವತಿ ಕುಟುಂಬಕ್ಕೆ ಪರಿಹಾರ ವಿತರಣೆ
ಗೋಕಾಕ: ಘಟಪ್ರಭಾ ಬಲದಂಡೆ ಕಾಲುವೆಗೆ ಪ್ರವಾಹದಿಂದ ಹೆಚ್ಚು ...
Vijaya Karnataka 19 Aug 2019, 5:00 am
ಗೋಕಾಕ : ಘಟಪ್ರಭಾ ಬಲದಂಡೆ ಕಾಲುವೆಗೆ ಪ್ರವಾಹದಿಂದ ಹೆಚ್ಚು ನೀರು ಬಂದಿದ್ದರ ಪರಿಣಾಮ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟ ಕೌಜಲಗಿಯ ಆಯಿಷಾ ಮೋದಿನಸಾಬ ಅಯ್ಯರ(18) ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಧನದ ಚೆಕ್ ವಿತರಿಸಲಾಯಿತು.
ಭಾನುವಾರ ಇಲ್ಲಿನ ಎನ್ಎಸ್ಎಫ್ ಅತಿಥಿ ಗೃಹದ ಆವರಣದಲ್ಲಿ ಗೋಕಾಕ್ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರು ಕಂದಾಯ ಇಲಾಖೆಯ ಪರಿಹಾರ ಧನದ ಚೆಕ್ನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ, ಅರಭಾವಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಕೌಜಲಗಿ ಗ್ರಾಪಂ ಅಧ್ಯಕ್ಷ ಜಕೀರ ಜಮಾದಾರ, ರವಿ ಪರುಶೆಟ್ಟಿ, ತಾಪಂ ಮಾಜಿ ಉಪಾಧ್ಯಕ್ಷ ಸುಭಾಸ ಕೌಜಲಗಿ, ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಾನಂದ ಲೋಕನ್ನವರ, ಗ್ರಾಪಂ ಮಾಜಿ ಅಧ್ಯಕ್ಷ ನೀಲಪ್ಪ ಕೇವಟಿ, ಡಿ.ಜೆ. ಮುಲ್ತಾನಿ, ರಮ್ಜಾನ್ ಪೋದಿ, ನಾಡಕಛೇರಿಯ ಉಪತಹಶೀಲ್ದಾರ ಎಂ.ಐ. ಹಿರೇಮಠ, ಗ್ರಾಮ ಲೆಕ್ಕಾಧಿಕಾರಿ ದೇಶಪಾಂಡೆ, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.
ಅ.9 ರಂದು ಕೌಜಲಗಿಯ ಆಯಿಷಾ ಅಯ್ಯರ ತಮ್ಮ ತಾಯಿಯೊಂದಿಗೆ ಜಿಆರ್ಬಿಸಿ ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋದ ಸಂದರ್ಭದಲ್ಲಿ ಪ್ರವಾಹದಿಂದಾಗಿ ನೀರಿನ ಸೆಳವಿಗೆ ಸಿಲುಕಿ ಮೃತ ಪಟ್ಟಿದ್ದರು.
ಭಾನುವಾರ ಇಲ್ಲಿನ ಎನ್ಎಸ್ಎಫ್ ಅತಿಥಿ ಗೃಹದ ಆವರಣದಲ್ಲಿ ಗೋಕಾಕ್ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅವರು ಕಂದಾಯ ಇಲಾಖೆಯ ಪರಿಹಾರ ಧನದ ಚೆಕ್ನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ, ಅರಭಾವಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಕೌಜಲಗಿ ಗ್ರಾಪಂ ಅಧ್ಯಕ್ಷ ಜಕೀರ ಜಮಾದಾರ, ರವಿ ಪರುಶೆಟ್ಟಿ, ತಾಪಂ ಮಾಜಿ ಉಪಾಧ್ಯಕ್ಷ ಸುಭಾಸ ಕೌಜಲಗಿ, ಅರ್ಬನ್ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಾನಂದ ಲೋಕನ್ನವರ, ಗ್ರಾಪಂ ಮಾಜಿ ಅಧ್ಯಕ್ಷ ನೀಲಪ್ಪ ಕೇವಟಿ, ಡಿ.ಜೆ. ಮುಲ್ತಾನಿ, ರಮ್ಜಾನ್ ಪೋದಿ, ನಾಡಕಛೇರಿಯ ಉಪತಹಶೀಲ್ದಾರ ಎಂ.ಐ. ಹಿರೇಮಠ, ಗ್ರಾಮ ಲೆಕ್ಕಾಧಿಕಾರಿ ದೇಶಪಾಂಡೆ, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.
ಅ.9 ರಂದು ಕೌಜಲಗಿಯ ಆಯಿಷಾ ಅಯ್ಯರ ತಮ್ಮ ತಾಯಿಯೊಂದಿಗೆ ಜಿಆರ್ಬಿಸಿ ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋದ ಸಂದರ್ಭದಲ್ಲಿ ಪ್ರವಾಹದಿಂದಾಗಿ ನೀರಿನ ಸೆಳವಿಗೆ ಸಿಲುಕಿ ಮೃತ ಪಟ್ಟಿದ್ದರು.