ಆ್ಯಪ್ನಗರ

ರಾಜಕಾರಣಕ್ಕೆ ಬರೋದಕ್ಕೆ ಮುನ್ನ ಡಿಕೆಶಿ ಅಸಭ್ಯ ಚಿತ್ರ ತೋರಿಸ್ತಾ ಇದ್ದ: ಜಾರಕಿಹೊಳಿ

ತಮ್ಮ ವಿರುದ್ಧ ಕಳೆದ ಮಾರ್ಚ್ ನಲ್ಲಿ ಸಿಡಿ ಬಿಡುಗಡೆ ಮಾಡಿದ್ದೇ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಎಂದು ಬಿಜೆಪಿಯ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ರಾಜಕಾರಣಕ್ಕೆ ಬರುವ ಮುಂಚೆ ಶಿವಕುಮಾರ್ ಅವರು ಇಂಥ ಸಿಡಿಗಳನ್ನು ಪ್ರದರ್ಶನ ಮಾಡ್ತಾ ಇದ್ದರು. ರಾತ್ರಿ 12 ಗಂಟೆಯ ನಂತರ ಡಿಕೆಶಿಯವರ ಸಿಡಿ ಪ್ರದರ್ಶನ ನಡೆಯುತ್ತು ಎಂಬ ಮತ್ತೊಂದು ಗಂಭೀರ ಆರೋಪವನ್ನು ಅವರು ಮಾಡಿದ್ದಾರೆ.

Edited byಚೇತನ್ ಓ.ಆರ್. | Vijaya Karnataka Web 30 Jan 2023, 4:24 pm

ಹೈಲೈಟ್ಸ್‌:

  • ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ.
  • ರಾಜಕಾರಣಕ್ಕೆ ಬರುವ ಮುಂಚೆ ಡಿಕೆ ಶಿವಕುಮಾರ್ ಅವರು ಕನಕಪುರದಲ್ಲಿ ಸಿಡಿ ಪ್ರದರ್ಶನ ಮಾಡ್ತಾ ಇದ್ರು ಎಂದು ಆರೋಪ.
  • ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web DK Shivakumar used to exhibit vulgar videos to people alleges Ramesh Jarakiholi
ಬೆಳಗಾವಿ: ರಾಜ್ಯ ಕಾಂಗ್ರೆಸ್ ನ ಇಂದಿನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜಕೀಯಕ್ಕೆ ಬರೋದಕ್ಕೂ ಮೊದಲು ಅಸಭ್ಯ ಚಿತ್ರಗಳನ್ನು ಪ್ರದರ್ಶನ ಮಾಡ್ತಾ ಇದ್ದರು ಎಂಬ ಗುರುತರ ಆರೋಪವನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಡಿದ್ದಾರೆ.
ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ನನ್ನ ವಿರುದ್ಧ ಸಿಡಿ ಷಡ್ಯಂತ್ರ ನಡೆಸಿದ ಗ್ಯಾಂಗ್ ನ ಕ್ಯಾಪ್ಟನ್. ಇಂಥ ಸಿಡಿಗಳನ್ನು ಮಾಡಿ ಇತರ ರಾಜಕಾರಣಿಗಳಿಂದ ತನ್ನ ಕೆಲಸ ಮಾಡಿಸಿಕೊಳ್ಳುವುದು ಇವರ ಚಾಳಿ. ರಾಜಕಾರಣಕ್ಕೆ ಬರುವುದರ ಮೊದಲು ಇವರು ಇಂಥ ಸಿಡಿಗಳನ್ನೇ ಜನರಿಗೆ ತೋರಿಸಿ ಹಣ ಮಾಡುತ್ತಿದ್ದರು. ತಮ್ಮ ಆಪ್ತರಿಗೆ ರಾತ್ರಿ 12 ಗಂಟೆಯ ನಂತರ ಇಂಥ ಸಿಡಿಗಳನ್ನು ತೋರಿಸುತ್ತಿದ್ದ ಎಂದು ಹೇಳಿರುವ ಅವರು, ಇಂಥವರಿಗೆ ಅಧಿಕಾರಕ್ಕೆ ಕೊಟ್ಟರೆ ಏನಾಗುತ್ತದೆ ಎಂದು ನೀವೇ ಊಹಿಸಿ ಎಂದು ಕಾಂಗ್ರೆಸ್ಸಿಗೆ ಅವರು ಸವಾಲು ಹಾಕಿದ್ದಾರೆ.

ಸಿಡಿ ಮಾಡಿದ ನಂತರ ನನ್ನನ್ನು ಬ್ಲಾಕ್ ಮೇಲ್ ಮಾಡಲು ಪ್ರಯತ್ನಿಸಲಾಯಿತು. ನಾನು ಅವರ ಬ್ಲಾಕ್ ಮೇಲ್ ಗಳಿಗೆ ಬಗ್ಗದೇ ಇದ್ದಿದ್ದರಿಂದ ಆ ಸಿಡಿಯನ್ನು ಬಿಡುಗಡೆ ಮಾಡಲಾಯಿತು ಎಂದು ರಮೇಶ್ ಹೇಳಿದ್ದಾರೆ.

Ramesh Jarkiholi: ವಿಷಕನ್ಯೆಗಾಗಿ ಡಿಕೆ ಶಿವಕುಮಾರ್‌ ನನ್ನನ್ನು ಸಿಡಿ ಕೇಸ್‌ನಲ್ಲಿ ಸಿಲುಕಿಸಿದ: ರಮೇಶ್‌ ಜಾರಕಿಹೊಳಿ ಕಿಡಿ
'ಬ್ಲಾಕ್ ಮನಿ ವೈಟ್ ಮಾಡಲು ಸಕ್ಕರೆ ಕಾರ್ಖಾನೆ'

ಡಿಕೆ ಶಿವಕುಮಾರ್ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಜೊತೆಗೆ ಸೇರಿ ತಮ್ಮಲ್ಲಿರುವ ಬ್ಲಾಕ್ ಮನಿ ವೈಟ್ ಮಾಡಲು ಬೆಳಗಾವಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿದ್ದಾರೆ. ಅಲ್ಲಿ ರಿಕವರಿಯಲ್ಲಿ ಸಾಕಷ್ಟು ಅವ್ಯವಹಾರಗಳಾಗಿವೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ ಏನು ಅನ್ನುವದು ರಾಜ್ಯಕ್ಕೆ ಗೊತ್ತಿದೆ. ಕಳೆದ ನಾಲ್ಕು ವರ್ಷದಿಂದ ಇವರ ಮಾಲೀಕತ್ವದ ಕಾರ್ಖಾನೆಯ ರಿಕವರಿಯಲ್ಲಿ ಗೋಲ್ ಮಾಲ್ ಮಾಡಲಾಗಿದೆ. 8 ಲಕ್ಷ ಟನ್ ಕಬ್ಬು ಕ್ರಶಿಂಗ್ ಮಾಡಿ 12 ಲಕ್ಷ ಟನ್ ತೋರಿಸುತ್ತಾರೆ. ವರ್ಷಾನುಗಟ್ಟಲೇ ಸಾವಿರಾರು ಕೋಟಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದೇ ವೇಳೆ, ತಮ್ಮ ಮಾಲೀಕತ್ವದ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಎಂದು ಅವರು ಹೇಳಿದ್ದಾರೆ. ಈಗ, ಸೌಭಾಗ್ಯ ಲಕ್ಷ್ಮಿ ಫ್ಯಾಕ್ಟರಿಗೂ, ನನಗೂ ಸಂಬಂಧವಿಲ್ಲ. ಕಾರ್ಖಾನೆಯನ್ನು ನನ್ನ ಮಗ ನಡೆಸುತ್ತಿದ್ದಾನೆ. ಕಾರ್ಖಾನೆಯಲ್ಲಿ ಯಾವುದೇ ಅವ್ಯವಹಾರ ಮಾಡಿಲ್ಲ ಎಂದು ಹೇಳಿದ್ದಾರೆ.

ಸಿಡಿ ಪ್ರಕರಣದ ರೂವಾರಿ ಮಹಾನಾಯಕನಿಗೆ ತಕ್ಕ ಶಾಸ್ತಿ ಮಾಡುತ್ತೇನೆ: ರಮೇಶ್ ಜಾರಕಿಹೊಳಿ
ರಮೇಶ್ ಆಪ್ತ ನಾಗರಾಜ್ ಅವರ ಆರೋಪ

ಬೆಳಗಾವಿಯಲ್ಲಿ ರಮೇಶ್ ಅವರ ಆಪ್ತರಾದ ಮಾಜಿ ಶಾಸಕ ನಾಗರಾಜ್ ಮಾತನಾಡಿ, ಸಿಡಿ ಬಿಡುಗಡೆಗೂ ಮುನ್ನ ರಮೇಶ್ ಅವರನ್ನು ಬ್ಲಾಕ್ ಮೇಲ್ ಮಾಡಲು ಪ್ರಯತ್ನಿಸಲಾಗಿತ್ತು. ಇದು ರಮೇಶ್ ಜಾರಕಿಹೊಳಿಯವರಿಗೂ ಗೊತ್ತಾಗಿತ್ತು. ಆದರೆ, ಅವರು ತಪ್ಪು ಮಾಡದೇ ಇದ್ದಿದ್ದರಿಂದ ಸ್ಟೇ ತರಲು ಹೋಗಿರಲಿಲ್ಲ’’ ಎಂದು ಹೇಳಿದ್ದಾರೆ.

“ಸಿಡಿ ಪ್ರಕರಣದಲ್ಲಿ ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಕಟ್ಟಿಹೊಳಿ ಅವರಿದ್ದಾರೆ. ಸಿಡಿ ಇಟ್ಟುಕೊಂಡು ಅವರು ಹಲವರ ಬ್ಲಾಕ್ ಮೇಲ್ ಮಾಡುತ್ತಾರೆ. ರಮೇಶ್ ಜಾರಕಿಹೊಳಿಯವರ ಸಿಡಿ ಇರುವುದಾಗಿ ನನ್ನಲ್ಲಿ ಹೇಳಿದ್ದರು. ರಮೇಶ್ ಜಾರಕಿಹೊಳಿಯವರ ಸಿಡಿಯೊಂದು ನಮ್ಮ ಕಡೆ ಇದೆ. ರಮೇಶ್ ಅವರು ನೋಡಿಕೊಳ್ಳುತ್ತಿದ್ದ ನೀರಾವರಿ ಇಲಾಖೆಯ ಟೆಂಡರ್ ಗಳನ್ನು ನಮ್ಮ ಕಡೆಯವರಿಗೆ ಕೊಡಿಸಬೇಕು. ಇಲ್ಲವಾದರೆ ಸಿಡಿ ಬಹಿರಂಗಗೊಳಿಸುವುದಾಗಿ ಹೇಳಿದ್ದರು. ನಾನು ಈ ವಿಚಾರವನ್ನು ರಮೇಶ್ ಜಾರಕಿಹೊಳಿ ಅವರ ಮುಂದೆ ಇಟ್ಟಿದ್ದೆ. ಅವರು ನಾನೇನೂ ತಪ್ಪು ಮಾಡಿಲ್ಲ. ನನ್ನದ್ಯಾವುದು ಸಿಡಿ ಮಾಡಲು ಸಾಧ್ಯ ಎಂದು ಹೇಳಿದ್ದರು. ಅವರು ತಪ್ಪು ಮಾಡಿದಿದ್ದರೆ ಅವರು ಈಗಿನ ಎಷ್ಟೋ ರಾಜಕಾರಣಿಗಳು ಸಂಭಾವ್ಯ ಸಿಡಿಗಳಿಗೆ ಹೆದರಿ ನ್ಯಾಯಾಲಯದಿಂದ ಸ್ಟೇ ತಂದಿದ್ದಾರೆ. ಹಾಗೆಯೇ ರಮೇಶ್ ಅವರೂ ತರಬಹುದಿತ್ತು. ಆದರೆ, ಅವರು ತಪ್ಪು ಮಾಡಿಲ್ಲದಿದ್ದರಿಂದ ಅವರು ಹಾಗೆ ಮಾಡಲಿಲ್ಲ’’ ಎಂದು ಹೇಳಿದ್ದಾರೆ.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ