ಆ್ಯಪ್ನಗರ

ರಸ್ತೆ ಅತಿಕ್ರಮಣದ ಸರ್ವೆ ಮಾಡಿ

ಘಟಪ್ರಭಾ: ''ಘಟಪ್ರಭಾದ ರಸ್ತೆ ಅತಿಕ್ರಮಣದಿಂದ ಇಲ್ಲಿಸಂಚರಿಸಲು ಭಯವಾಗುತ್ತಿದೆ...

Vijaya Karnataka 4 Jan 2020, 5:00 am
ಘಟಪ್ರಭಾ: ''ಘಟಪ್ರಭಾದ ರಸ್ತೆ ಅತಿಕ್ರಮಣದಿಂದ ಇಲ್ಲಿಸಂಚರಿಸಲು ಭಯವಾಗುತ್ತಿದೆ. ಈ ಕುರಿತು ತಕ್ಷಣ ಸರ್ವೆ ಮಾಡಬೇಕು. ಇಲ್ಲದಿದ್ದರೆ ನೀವು ಪಟ್ಟಣ ಪಂಚಾಯಿತಿಯಿಂದ ಜಾಗ ಖಾಲಿ ಮಾಡಬೇಕು'' ಎಂದು ಶಾಸಕ ರಮೇಶ್‌ ಜಾರಕಿಹೊಳಿ ಪಪಂ ಮುಖ್ಯಾಧಿಕಾರಿಗೆ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web 03GPB-5_53
ಅಭಿನಂದನೆ ಸಮಾರಂಭದಲ್ಲಿಶಾಸಕ ರಮೇಶ ಜಾರಕಿಹೊಳಿ ಮಾತನಾಡಿದರು.


ಮಲ್ಲಾಪುರ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿಆಯೋಜಿಸಿದ್ದ ಅಭಿನಂದನೆ ಸಮಾರಂಭದಲ್ಲಿಅವರು ಮಾತನಾಡಿದರು.

''ಕ್ಷೇತ್ರದ ಅಭಿವೃದ್ಧಿಗೆ ಮತ್ತು ಅತಿಕ್ರಮಣ ತೆರವಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ನಾನು ಮಂತ್ರಿಯಾದ ಬಳಿಕ ಹೆಚ್ಚಿನ ಅನುದಾನ ತರುತ್ತೇನೆ. ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ನನ್ನನ್ನು ವಿರೋಧಿಸುವವರೂ ಮೆಚ್ಚುವಂತೆ ಮಾಡುತ್ತೇನೆ. ಉಪ ಚುನಾವಣೆಯಲ್ಲಿನನ್ನನ್ನು ಸೋಲಿಸಲು ಬಹಳಷ್ಟು ಜನ ಪ್ರಯತ್ನ ಪಟ್ಟಿದ್ದಾರೆ. ಆದರೆ, ಅವರಿಗೆ ಸಾಧ್ಯವಾಗಲಿಲ್ಲ. ಇಂದು ನನಗೆ ಹಾರ ಹಾಕಲು ತುಂಬಾ ಜನ ಬರುತ್ತಿದ್ದಾರೆ. ಹೀಗೆ ಮಾಲೆ ಹಾಕಲು ಬಂದವರೆಲ್ಲನನಗೆ ಮತ ನೀಡಿದವರು ಅಲ್ಲಎಂಬುದೂ ನನಗೆ ಗೊತ್ತಿದೆ. ಜತೆಯಲ್ಲೇ ಇದ್ದು ಚೂರಿ ಹಾಕುವ ಕೆಲಸ ಮಾಡಬಾರದು'' ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿಸುರೇಶ ಕಾಡದವರ, ಸುಭಾಸ ಹುಕ್ಕೇರಿ, ಗಂಗಾಧರ ಬಡಕುಂದ್ರಿ, ಡಿ.ಎಂ.ದಳವಾಯಿ, ರಾಮಣ್ಣ ಹುಕ್ಕೇರಿ, ಈರಣ್ಣ ಕಲಕುಟಗಿ, ಎಂ.ಬಿ.ಮುಚಳಂಬಿ, ಶಿವಪುತ್ರ ಕೊಗನೂರ, ಸುರೇಶ ಪೂಜೇರಿ, ಈಶ್ವರ ಮಟಗಾರ, ಮಲ್ಲುಕೋಳಿ, ಸಲೀಮ ಕಬ್ಬೂರ, ಕಾಡಪ್ಪ ಕರೋಶಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ