ಆ್ಯಪ್ನಗರ

ಶರಣರ ಬದುಕನ್ನು ಪವಾಡವಾಗಿ ಸ್ವೀಕರಿಸದಿರಿ

ಅಥಣಿ: ಶರಣರ ಬದುಕನ್ನು ಕೇವಲ ಪವಾಡವಾಗಿ ಸ್ವೀಕರಿಸದೆ ಅವರ ತತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪನ್ಯಾಸಕ ಶರಣ ವಿಚಾರ ವಾಹಿನಿ ಅಧ್ಯಕ್ಷ ...

Vijaya Karnataka 24 Mar 2019, 5:00 am
ಅಥಣಿ : ಶರಣರ ಬದುಕನ್ನು ಕೇವಲ ಪವಾಡವಾಗಿ ಸ್ವೀಕರಿಸದೆ ಅವರ ತತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಪನ್ಯಾಸಕ ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್‌. ಮಠಪತಿ ಹೇಳಿದರು.
Vijaya Karnataka Web BEL-23 ATHANI-01


ಅವರು ಸ್ಥಳೀಯ ಕೆ.ಎ. ಲೋಕಾಪುರ ಪದವಿ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಬೆಳಗಾವಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕೆ.ಎ. ಲೋಕಾಪುರ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡ ಲಿಂಗೈಕ್ಯ ಶರಣ, ಶರಣೆಯರಾದ ನೀಲಮ್ಮ, ಮಲಕಪ್ಪ ಅಲಿಬಾದಿ, ಹೊನ್ನಮ್ಮ ಉತ್ನಾಳ, ಚನ್ನಯ್ಯ ಬಸವಂತಯ್ಯ ಹಿರೇಮಠ, ಗಂಗಮ್ಮ ಹಟಪದ ಹಲಗಲಿ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು

ಶರಣರು ವಚನ ಸಾಹಿತ್ಯವನ್ನು ಯಾವುದೇ ಪ್ರಶಸ್ತಿ ಪುರಸ್ಕಾರಕ್ಕಾಗಿ ರಚಿಸದೆ ಸಮಾಜದ ಪರಿವರ್ತನೆಯ ದೃಷ್ಟಿಯಿಂದ ರಚಿಸಿದ್ದಾರೆ ಎಂದರು.

ಪರಿಷತ್‌ನ ಜಿಲ್ಲಾಧ್ಯಕ್ಷ ಡಾ. ವಿ.ಎಸ್‌. ಮಾಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ವಿಮೋಚನಾ ಸಂಘದ ಅಧ್ಯಕ್ಷ ಬಿ.ಎಲ್‌. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷ ತೆ ವಹಿಸಿದ್ದ ಡಾ. ರಾಮ ಕುಲಕರ್ಣಿ ಮಾತನಾಡಿದರು.

ಸಮಾರಂಭದಲ್ಲಿ ಸಾಹಿತಿಗಳಾದ ಎ.ಎಂ. ಅಲಿಬಾದಿ, ಪರಿಷತ್ತಿನ ಅಥಣಿ ತಾಲೂಕು ಅಧ್ಯಕ್ಷ ಅನೀಲ ಸುಣಧೋಳಿ, ಪ್ರಾ. ಆರ್‌.ಎಂ. ದೇವರಡ್ಡಿ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಬಾಳಾಸಾಹೇಬ ಲೋಕಾಪುರ, ಎಸ್‌.ಕೆ. ಹೊಳೆಪ್ಪನವರ, ವಿ.ಪಿ. ಜಾಲಿಹಾಳ, ಎನ್‌.ಬಿ. ಝರೆ, ಅನೀಲ ತಳಕೇರಿ, ವಿಶಾಲ ದೇಶಪಾಂಡೆ, ಸಂತೋಷ ಬಡಕಂಬಿ, ಎಂ.ಜಿ. ನಾಯಿಕ, ಬಿ.ಪಿ. ಗುಂಡಾ, ಪಿ.ಎಲ್‌. ನರಗಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪ್ರೊ. ಎನ್‌.ಬಿ. ಝರೆ ನಿರೂಪಿಸಿದರು. ವಿ.ಪಿ. ಜಾಲಿಹಾಳ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ