ಆ್ಯಪ್ನಗರ

ಪೊಳ್ಳು ಭಾಷಣಕಾರರನ್ನು ನಂಬಬೇಡಿ

ಮೂಡಲಗಿ : ಕ್ಷೇತ್ರದ ಅಭಿವೃದ್ಧಿ ಕಾರ್ಯ ...

Vijaya Karnataka 5 Jul 2019, 5:00 am
ಮೂಡಲಗಿ: ಕ್ಷೇತ್ರದ ಅಭಿವೃದ್ಧಿ ಕಾರ್ಯ ಮಾಡುತ್ತಿರುವವರನ್ನು ನಂಬಿ. ಜನರ ದಿಕ್ಕು ತಪ್ಪಿಸುವ ಪೊಳ್ಳು ಭಾಷಣಕಾರರನ್ನು ನಂಬಬೇಡಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
Vijaya Karnataka Web BEL-4MDL2


ಸಮೀಪದ ಧರ್ಮಟ್ಟಿ ಗ್ರಾಮದಲ್ಲಿ ಗುರುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮೂಡಲಗಿಯಿಂದ ಮಸಗುಪ್ಪಿವರೆಗೆ ರಸ್ತೆ ಸುಧಾರಣೆಗೆ 1.20 ಕೋಟಿ ರೂ.ಗಳ ಮಂಜೂರಾತಿಗೆ ಹಾಗೂ ಧರ್ಮಟ್ಟಿ ಗ್ರಾಮದ ಹಳ್ಳದ ಸೇತುವೆ ದುರಸ್ತಿ ಮತ್ತು ರಸ್ತೆ ಕಾಮಗಾರಿಗೆ 1 ಕೋಟಿ ರೂ.ಗಳ ಮಂಜೂರಾತಿಗಾಗಿ ಸಂಬಂಧಿಸಿದ ಇಲಾಖೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ 2017-18ನೇ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ನಿರ್ಮಾಣವಾದ 10 ಲಕ್ಷ ರೂ. ವೆಚ್ಚದ ಕನಕ ಭವನ, 12 ಲಕ್ಷ ರೂ. ವೆಚ್ಚದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡವನ್ನು ಶಾಸಕ ಬಾಲಚಂದ್ರ ಉದ್ಘಾಟಿಸಿದರು. ದಲಿತ ಸಂಘರ್ಷ ಸಮಿತಿಯ ನಾಮಫಲಕವನ್ನು ಅನಾವರಣ ಮಾಡಿದರು.

ವಾಸಂತಿ ತೇರದಾಳ, ಸುಭಾಸ ಢವಳೇಶ್ವರ, ಪ್ರೇಮಾ ಸನದಿ, ಬಿ.ಬಿ. ಪೂಜೇರಿ, ಪರಶುರಾಮ ಸನದಿ, ಸುವರ್ಣಾ ತೆಳಗಡೆ, ಸುರೇಶ ಪೂಜೇರಿ, ಲಕ್ಷ ್ಮಣ ತೆಳಗಡೆ, ಲಕ್ಕಪ್ಪ ತೆಳಗಡೆ, ಸಂತೋಷ ಸೋನವಾಲ್ಕರ, ಡಾ.ಶಿವಾನಂದ ವಾಗುಲೆ, ಲಕ್ಷ ್ಮಣ ಕೊರಕಪೂಜೇರಿ, ಲಗಮನ್ನಾ ಕುಟ್ರಿ, ಮಹಾದೇವ ಬಡ್ಡಿ, ನಿಂಗಪ್ಪ ಗೊಡಚಿ, ಬಸವರಾಜ ತುಂಬೂಚಿ, ಸಂಜು ಹೊಸಕೋಟಿ, ಶ್ರೀಕಾಂತ ಮುತಾಲಿಕದೇಸಾಯಿ, ಮಲ್ಲಿಕಾರ್ಜುನ ಕಬ್ಬೂರ, ಸುರೇಶ, ಲಕ್ಷ ್ಮಣ ಗಡಾದ, ಗ್ರಾಪಂ ಮತ್ತು ಪಿಕೆಪಿಎಸ್‌ ಸದಸ್ಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ