ಆ್ಯಪ್ನಗರ

ಟ್ರಾನ್ಸ್‌ಫಾರ್ಮರ್‌ಗಳಿಗೆ ಹಣ ಕೊಡುವ ಅಗತ್ಯವಿಲ್ಲ

ಅಥಣಿ: ಹೆಸ್ಕಾಂ ಅಧಿಕಾರಿಗಳ ಹೆಸರು ಹೇಳಿ ಕೆಲವು ಗ್ರಾಮಿಣ ಪ್ರದೇಶದಲ್ಲಿ ...

Vijaya Karnataka 24 Sep 2018, 5:00 am
ಅಥಣಿ: ಹೆಸ್ಕಾಂ ಅಧಿಕಾರಿಗಳ ಹೆಸರು ಹೇಳಿ ಕೆಲವು ಗ್ರಾಮಿಣ ಪ್ರದೇಶದಲ್ಲಿ ಮುಖಂಡರು ಮತ್ತು ಕೆಲವು ಏಜೆಂಟರು ರೈತಾಪಿ ಜನರಿಂದ ಹಣ ಸೂಲಿಗೆ ಮಾಡುತ್ತಿದ್ದಾರೆ. ರೈತರು ಯಾರಿಗೂ ಹಣ ಕೊಡುವ ಅಗತ್ಯವಿಲ್ಲ. ಟ್ರಾನ್ಸ್‌ಫಾರ್ಮರ್‌ ಸುಟ್ಟಿದ್ದರೆ ಮೂರು ದಿನಗಳಲ್ಲಿ ಹೊಸ ಟ್ರಾನ್ಸ್‌ಫಾರ್ಮರ್‌ ಉಚಿತವಾಗಿ ನಿಗಮದ ವಾಹನದಲ್ಲಿ ತಂದು ಅಳವಡಿಸಲಾಗುವುದು ಎಂದು ಹೆಸ್ಕಾಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖರ ಬಹುರೂಪಿ ಹೇಳಿದರು.
Vijaya Karnataka Web do not need to pay for new transformers
ಟ್ರಾನ್ಸ್‌ಫಾರ್ಮರ್‌ಗಳಿಗೆ ಹಣ ಕೊಡುವ ಅಗತ್ಯವಿಲ್ಲ


ಅವರು ಶನಿವಾರ ತಾಲೂಕು ಪಂಚಾಯಿತಿಯಲ್ಲಿ ನಡೆದ ಸದಸ್ಯರ ಸಾಮಾನ್ಯ ಸಭೆಯಲ್ಲಿ ತಮ್ಮ ಇಲಾಖೆ ಮಾಹಿತಿ ನೀಡಿದ ಅವರು, ತಾಪಂ ಸದಸ್ಯರು ಹೇಳುವಂತೆ ಹೆಸ್ಕಾಂ ಕಚೇರಿಯಲ್ಲಿ ಟ್ರಾನ್ಸ್‌ಫಾರ್ಮರ್‌ಗಳ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಯುವುದಿಲ್ಲ. ಮೊದಲಿನ ಭ್ರಷ್ಟಾಚಾರದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದರು. ಯಾವುದೇ ಅಧಿಕಾರಿಗಳು ಲಂಚ ಕೇಳಿದ ಬಗ್ಗೆ ದಾಖಲೆ ನೀಡಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿಯೂ ಅವರು ತಿಳಿಸಿದರು.

ತಾಲೂಕಿನಲ್ಲಿ ಬಹುತೇಕ ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಅರ್ಧಕ್ಕೆ ನಿಂತಿವೆ. ಅವುಗಳನ್ನು ಸಕಾಲಕ್ಕೆ ಪೂರ್ಣಗೊಳಿಸಬೇಕಾದ ಭೂಸೇನಾ ನಿಗಮದವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿವೆ. ಗುಂಡಿಗಳನ್ನು ಮುಚ್ಚಿಲ್ಲ, ಮುಳ್ಳು ಕಂಟಿಗಳು ಬೆಳೆದರೂ ಕಟಾವು ಮಾಡಿಲ್ಲ ಎಂದು ತಾಪಂ ಸದಸ್ಯ ಜಡೆಪ್ಪ ಕುಂಬಾರ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಇಲಾಖೆಯ ಅಧಿಕಾರಿಗಳು ನಾವು ಅಗತ್ಯವಿರುವ ಅನುದಾನಕ್ಕಾಗಿ ಕ್ರಿಯಾಯೋಜನೆ ಮಾಡಿ ಕಳಿಸಲಾಗಿದ್ದು ಅನುದಾನ ಬಿಡುಗಡೆಯಾಗಿಲ್ಲ ಎಂದರು.

ಅರಣ್ಯ ಇಲಾಖೆಯಿಂದ ನೆಡುತೋಪು ಕಾಮಗಾರಿ ವಿಳಂಬ ಹಾಗೂ ಬಸ್‌ ಅವ್ಯವಸ್ಥೆ ಬಗ್ಗೆ ಸದಸ್ಯ ಯಲ್ಲಪ್ಪ ಮಿರ್ಜಿ ಸಭೆಯ ಗಮನ ಸೆಳೆದರು. ಸಾರಿಗೆ ಅಧಿಕಾರಿ ಬಿ.ಆರ್‌ ಕಿರಣಗಿ ಉತ್ತರಿಸಿ ಹೊಸ ಬಸ್‌ಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು ಈಗಿರುವ ಬಸ್‌ಗಳನ್ನೇ ಹೊಂದಾಣಿಕೆ ಮಾಡಿ ಓಡಿಸಲಾಗುತ್ತಿದೆ ಎಂದರು.

ಒಟ್ಟಾರೆ ಅನೇಕ ಇಲಾಖೆಗಳ ಕುರಿತು ಬಿಸಿ ಬಿಸಿ ಚರ್ಚೆಗಳು ನಡೆದರೂ ಎಲ್ಲ ಇಲಾಖೆಗಳಲ್ಲಿ ಅನುದಾನದ ಕೊರತೆ ಕಂಡು ಬಂತು. ತಾಪಂ ಅಧಿಕಾರಿ ರವಿ ಬಂಗಾರೆಪ್ಪನವರ ಮಾತನಾಡಿ, ಬರುವ ಅ.2ರಂದು ಪ್ರತಿ ಗ್ರಾಪಂ ಮಟ್ಟದಲ್ಲಿ ಸ್ವಚ್ಛ ಭಾರತ ಯೋಜನೆಯಡಿ ಶೌಚಾಯಗಳ ಬಳಕೆ ಕುರಿತು ಜನಜಾಗೃತಿ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದರು.

ಸಭೆಯ ಅಧ್ಯಕ್ಷ ತೆಯನ್ನು ತಾಪಂ ಅಧ್ಯಕ್ಷೆ ಶಕುಂತಲಾ ರುದ್ರಗೌಡರ ವಹಿಸಿದ್ದರು. ಉಪಾಧ್ಯಕ್ಷೆ ಸುರೇಖಾ ಅವರವಾಡ ಮತ್ತು ತಾಪಂ ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ