ಆ್ಯಪ್ನಗರ

ಅಬ್ಬಾ, ಎಷ್ಟೆಲ್ಲಓದುಗರು!

ಬೆಳಗಾವಿ: ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ನಗರ ...

Vijaya Karnataka 6 Oct 2019, 5:00 am
ಬೆಳಗಾವಿ: ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ನಗರ ಕೇಂದ್ರ ಗ್ರಂಥಾಲಯದಲ್ಲಿದ್ದ ಓದುಗರನ್ನು ಕಂಡು ಆಶ್ಚರ್ಯಚಕಿತರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ 'ಅಬ್ಬಾ ! ಎಷ್ಟೊಂದು ಓದುಗರು' ಎಂದು ಉದ್ಘಾರ ತೆಗೆದು ಖುಷಿ ವ್ಯಕ್ತಪಡಿಸಿದರು.
Vijaya Karnataka Web 5RAJU-4064856


ಖಾಸಗಿ ಕಾರ್ಯಕ್ರಮದಲ್ಲಿಪಾಲ್ಗೊಳ್ಳಲು ಶುಕ್ರವಾರ ನಗರಕ್ಕೆ ಆಗಮಿಸಿದ್ದ ಡಾ. ಕಂಬಾರರು, ಬಿಡುವಿನ ಸಮಯದಲ್ಲಿಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್‌ಕುಮಾರ ಹೊಸಮನಿ ಜತೆ ಗ್ರಂಥಾಲಯಕ್ಕೆ ಭೇಟಿ ನೀಡಿದರು. ಗ್ರಂಥಾಲಯದ ಎಲ್ಲಕಡೆಗೆ ಸುತ್ತಿದರು. ಕಂಬಾರರನ್ನು ಕಾಣುತ್ತಲೇ ಓದುಗರು ಎದ್ದು ನಿಂತು ಗೌರವ ಸೂಚಿಸಿದರು. ಮೊಬೈಲ್‌ ಹಿಡಿದು ಸಾಮಾಜಿಕ ಜಾಲತಾಣಗಳ ಹಿಂದೆ ಬಿದ್ದಿರುವ ಯುವ ಸಮೂಹ ಗ್ರಂಥ ಹಿಡಿಯುವುದರಲ್ಲೂಮುಂದಿರುವುದನ್ನು ನೋಡಿ ಸಮಾಧಾನ ಪಟ್ಟರು. ಕೆಲಹೊತ್ತು ಅವರೊಂದಿಗೆ ಇದ್ದು ಪ್ರೇರಣೆ ನೀಡಿದರು.

ಓದುಗರು ಕಂಬಾರರಿಗೆ ಹಸ್ತಲಾಘವ ಮಾಡಿ ಸೆಲ್ಫಿ ತೆಗೆದುಕೊಂಡರು. ಸಿಬ್ಬಂದಿ, ಓದುಗ, ವಿದ್ಯಾರ್ಥಿಗಳು ಈ ಸುಂದರ ಕ್ಷಣಕ್ಕೆ ಸಾಕ್ಷಿಯಾದರು.

ನನ್ನ ವಿದ್ಯಾರ್ಥಿ ದೆಸೆಯಲ್ಲಿನಾನೂ ಇದೇ ಗ್ರಂಥಾಲಯದ ಓದುಗನಾಗಿದ್ದೆ. ಆಗ ಇದು ಮಾರುತಿ ಗಲ್ಲಿಯಲ್ಲಿತ್ತು.
- ಡಾ. ಚಂದ್ರಶೇಖರ ಕಂಬಾರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ