ಆ್ಯಪ್ನಗರ

ಕುಡಿಯುವ ನೀರು ಸರಬರಾಜು ಸ್ಥಗಿತ: ಗ್ರಾಪಂ ಸಿಬ್ಬಂದಿ ತರಾಟೆಗೆ

ತೆಲಸಂಗ: ಗ್ರಾಮದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರು ಸರಬರಾಜು ಆಗದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಭಾನುವಾರ ಗ್ರಾಪಂ ಸಿಬ್ಬಂದಿಯನ್ನು ...

Vijaya Karnataka 11 Jun 2018, 5:00 am
ತೆಲಸಂಗ: ಗ್ರಾಮದಲ್ಲಿ ಕಳೆದ 15 ದಿನಗಳಿಂದ ಕುಡಿಯುವ ನೀರು ಸರಬರಾಜು ಆಗದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಭಾನುವಾರ ಗ್ರಾಪಂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
Vijaya Karnataka Web BEL-10TELSANG2


ಕೆರೆಯಲ್ಲಿ ನೀರು ಸಾಕಷ್ಟಿದೆ. ಡೋಣಿಯಲ್ಲಿನ ಬೋರ್‌ವೆಲ್‌ಗಳಿಗೂ ಸಾಕಷ್ಟು ನೀರಿದೆ. ಆದರೆ ಸರಿಯಾದ ನಿರ್ವಹಣೆ ಇಲ್ಲ. ಇದರಿಂದ ನೀರಿಗಾಗಿ ಪರಿತಪಿಸಬೇಕಾಗಿದೆ. ಸಾಕಷ್ಟು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಇಷ್ಟೊಂದು ನಿರ್ಲಕ್ಷ ್ಯ ಸಲ್ಲದು. ಮೇಲಾಧಿಕಾರಿಗಳು ಯಾವುದಕ್ಕೂ ಸೂಕ್ತ ಕ್ರಮ ಕೈಗೊಂಡು ಪರಿಹಾರ ದೊರಕಿಸಿಕೊಡಬೆಂಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಪಂಚಾಯಿತಿಯಿಂದ ಖರೀದಿಸಲಾಗಿದ್ದ ಪಂಪ್‌ಸೆಟ್‌ಗಳು ಎಲ್ಲಿ ಮಾಯವಾದವು ಎಂದು ಗ್ರಾಮದ ವಿಠ್ಠಲ ದಶವಂತ, ಬಾಳಯ್ಯಾ ಮಠಪತಿ ಮತ್ತಿತರರು ಪ್ರಶ್ನಿಸಿದರು. ಪಂಚಾಯತಿ ವತಿಯಿಂದ ಖರೀದಿಸಲಾ ಪಂಪಸೆಟ್‌ಗಳೆಷ್ಟು, ಸದ್ಯ ಉಳಿದುಕೊಂಡಿದ್ದೆಷ್ಟು ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ ಅವರು, ನೀರಿನ ತೊಂದರೆಗೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಗ್ರಾಪಂ ಸಿಬ್ಬಂದಿ ಶಿವು ಬನಗೊಂಡ ಸ್ಪಷ್ಟನೆ ನೀಡಿ, ಹೊಳೆಯಲ್ಲಿ ನೀರಿಲ್ಲ. ಕೆರೆಯಲ್ಲಿನ ಮೋಟಾರ್‌ ಸುಟ್ಟು ಹೋಗಿದೆ. ರಿಪೇರಿಗೆ ಕಳಿಸಲಾಗಿದ್ದು ದುರಸ್ತಿಯಾಗಿ ಬಂದ ತಕ್ಷ ಣ ನೀರು ಬಿಡಲಾಗುವುದು ಎಂದು ತಿಳಿಸಿದರು. ಇದಕ್ಕೆ ಮತ್ತುಷ್ಟು ಕೆರಳಿದ ಪ್ರತಿಭಟನಾಕಾರರು ಡೋಣಿಯಲ್ಲಿನ ಬೋರ್ವೆಲ್‌ ಹಾಗೂ ಪಂಪ್‌ಗಳನ್ನೇಕೆ ದುರಸ್ತಿಯಲ್ಲಿ ಇಟ್ಟಿಲ್ಲ ಎಂದು ಪ್ರಶ್ನಿಸುತ್ತಲೇ ಸಿಬ್ಬಂದಿ ತಬ್ಬಿಬ್ಬಾದರು. ಕೂಡಲೆ ನೀರಿನ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಉಗ್ರಹೋರಾಟ ಮಾಡಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ