ಆ್ಯಪ್ನಗರ

ಖಿಳೇಗಾವಿ ಬಸವೇಶ್ವರ ದೇವಸ್ಥಾನದ ಮುಖ್ಯದ್ವಾರ ಕಾಮಗಾರಿಗೆ ಚಾಲನೆ

ಅಥಣಿ: ಅಥಣಿ ಅಧ್ಯಾತ್ಮಿಕ ಕೇಂದ್ರವಾಗಿದ್ದು, ಶಿವಯೋಗಿಗಳ ಪಾವನ ಕ್ಷೇತ್ರದಲ್ಲಿ ಅನೇಕ ಪುಣ್ಯ ಕ್ಷೇತ್ರಗಳಿವೆ...

Vijaya Karnataka 14 Jul 2019, 5:00 am
ಅಥಣಿ : ಅಥಣಿ ಅಧ್ಯಾತ್ಮಿಕ ಕೇಂದ್ರವಾಗಿದ್ದು, ಶಿವಯೋಗಿಗಳ ಪಾವನ ಕ್ಷೇತ್ರದಲ್ಲಿ ಅನೇಕ ಪುಣ್ಯ ಕ್ಷೇತ್ರಗಳಿವೆ. ಇದರಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಲಕ್ಷಾಂತರ ಭಕ್ತ ಸಮೂಹವನ್ನು ಸೆಳೆಯುವ ಖಿಳೇಗಾವಿ ಬಸವೇಶ್ವರ ದೇವಸ್ಥಾನವು ಒಂದು ಜಾಗೃತ ಸ್ಥಳವಾಗಿದೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.
Vijaya Karnataka Web BEL-13 ATHANI-01


ಅವರು, ಪಟ್ಟಣದ ಜ್ಯೋತಿಬಾ ಪುಲೆ ವೃತ್ತದಲ್ಲಿ ಖಿಳೇಗಾಂವಿ ಬಸವೇಶ್ವರ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಮುಖ್ಯದ್ವಾರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಅಧ್ಯಕ್ಷ ತೆ ವಹಿಸಿದ್ದ ಯುವ ಉದ್ಯಮಿ ಸಂತೋಷ ಸಾವಡಕರ ಮಾತನಾಡಿ, ಶ್ರಾವಣ ಮಾಸದಲ್ಲಿ ವಿವಿಧ ಭಾಗಗಳಿಂದ ಭಕ್ತರು ಖಿಳೇಗಾವಿಗೆ ಬರುತ್ತಾರೆ. ಹೀಗೆ ಬರುವ ಭಕ್ತರು ಜ್ಯೋತಿಬಾ ಪುಲೆ ವೃತ್ತದಲ್ಲಿ ಗೊಂದಲಕ್ಕೊಳಗಾಗುತ್ತಿದ್ದಾರೆ. ಹೀಗಾಗಿ ಅಥಣಿ ಹೊರವಲಯದಲ್ಲಿ ಅನಂತಪುರ ಮತ್ತು ಖಿಳೇಗಾವಿ ಕೂಡು ರಸ್ತೆಯಲ್ಲಿ ಈ ದ್ವಾರ ನಿರ್ಮಿಸಲು ಉದ್ದೇಶಿಸಲಾಗಿದೆ. ಕೆಲ ಉದ್ದಿಮೆದಾರರು ಮತ್ತು ದಾನಿಗಳ ಸಹಕಾರದಿಂದ ಅಂದಾಜು 8 ಲಕ್ಷ ರೂ. ವೆಚ್ಚದಲ್ಲಿ ವಿಶೇಷ ದ್ವಾರ ನಿರ್ಮಿಸುವ ಸಂಕಲ್ಪ ಮಾಡಲಾಗಿದೆ. ಶ್ರಾವಣ ತಿಂಗಳು ಬರುವುದರ ಒಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಈ ವೇಳೆ ಶಿವು ಆಸಂಗಿ, ಶಿವಾನಂದ ನಾಯಿಕ, ನರಸು ಬಡಕಂಬಿ, ಸಂತೋಷ ಲಠ್ಠೆ, ಆನಂದ ಟೋಣಪಿ, ಶೇಖರ ಕನಕರೆಡ್ಡಿ, ವಿಜಯ ಉಮರಾಣಿ, ಮುರುಘೇಶ ವಾಂಗಿ ಸೇರಿದಂತೆ ಮರುಳಶಂಕರ ಖಾಸಗಿ ವಾಹನ ಚಾಲಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ