ಆ್ಯಪ್ನಗರ

ಮೂರೂವರೆ ಗಂಟೆ ನಂತರ ಚಾಲಕನ ರಕ್ಷಣೆ

ಬೆಳಗಾವಿ: ತಾಲೂಕಿನ ಹಿರೇಬಾಗೇವಾಡಿ ಸಮೀಪದ ಮೊದಗಾ ರಸ್ತೆಯಲ್ಲಿ ಟಿಪ್ಪರ್‌ ಪಲ್ಟಿಯಾಗಿ ಅದರೊಳಗೆ ಸಿಲುಕಿಬಿದ್ದಿದ್ದ ...

Vijaya Karnataka 26 Mar 2019, 5:00 am
ಬೆಳಗಾವಿ : ತಾಲೂಕಿನ ಹಿರೇಬಾಗೇವಾಡಿ ಸಮೀಪದ ಮೊದಗಾ ರಸ್ತೆಯಲ್ಲಿ ಟಿಪ್ಪರ್‌ ಪಲ್ಟಿಯಾಗಿ ಅದರೊಳಗೆ ಸಿಲುಕಿಬಿದ್ದಿದ್ದ ಚಾಲಕನನ್ನು ಹಿರೇಬಾಗೇವಾಡಿ ಠಾಣೆ ಪೊಲೀಸರು ಮೂರೂವರೆ ಗಂಟೆ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಸವದತ್ತಿ ತಾಲೂಕು ಸತ್ತಿಗೇರಿ ಗ್ರಾಮದ ಬಸವರಾಜ ಗುಳೆಪ್ಪ ಸತ್ತಿಗೇರಿ(22) ಗಾಯಗೊಂಡಿರುವ ಟಿಪ್ಪರ್‌ ಚಾಲಕ.
Vijaya Karnataka Web driver saved after the efforts of three hours
ಮೂರೂವರೆ ಗಂಟೆ ನಂತರ ಚಾಲಕನ ರಕ್ಷಣೆ


ಸೋಮವಾರ ಮಧ್ಯಾಹ್ನ ಹಿರೇಬಾಗೇವಾಡಿಯಿಂದ ಮೊದಗಾ ಕಡೆಗೆ ಹೊರಟಿದ್ದ ಟಿಪ್ಪರ್‌ ಬಸಾಪುರ ಬಳಿ ಇಳಿಜಾರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಪಲ್ಟಿಯಾದ ವಾಹನದ ಅಡಿಯಲ್ಲಿ ಚಾಲಕ ಬಸವರಾಜ ಸತ್ತಿಗೇರಿ ಸಿಲುಕಿ ಹಾಕಿಕೊಂಡಿದ್ದರು. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಹಿರೇಬಾಗೇವಾಡಿ ಠಾಣೆ ಪೊಲೀಸರು ಬೆಳಗಾವಿಯ ಗ್ಯಾಸ್‌ ಕಟರ್‌ ಯುವಕರನ್ನು ಕರೆಸಿ ಮೂರೂವರೆ ಗಂಟೆಗಳ ಕಾರ್ಯಾಚರಣೆ ನಂತರ ಚಾಲಕ ಬಸವರಾಜನನ್ನು ರಕ್ಷಣೆ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

''ಸದ್ಯ ಹಿರೇಬಾಗೇವಾಡಿ ಠಾಣೆಯ ತುರ್ತು ರಕ್ಷಣಾ ತಂಡ ಧಾರವಾಡದಲ್ಲಿ ಕಟ್ಟಡ ಕುಸಿದ ಸ್ಥಳದಲ್ಲಿ ಕಾರ್ಯಾಚರಣೆಯಲ್ಲಿ ಇರುವುದರಿಂದ ಖಾಸಗಿ ವ್ಯಕ್ತಿಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಬೆಳಗಾವಿಯ ಮಹೇಶ ಕಡೆಮನಿ ತಂಡ ಚಾಲಕನ ರಕ್ಷಣೆಯಲ್ಲಿ ಉತ್ತಮ ಕೆಲಸ ಮಾಡಿತು'', ಎಂದು ಹಿರೇಬಾಗೇವಾಡಿ ಠಾಣೆ ಇನ್‌ಸ್ಪೆಕ್ಟರ್‌ ಎನ್‌.ಎನ್‌.ಅಂಬಿಗೇರಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ