ಆ್ಯಪ್ನಗರ

ಹೆಂಡತಿಗಾಗಿ ರಸ್ತೆಯಲ್ಲಿ ಕುಳಿತ ಕುಡುಕ ಗಂಡ!

ತೆಲಸಂಗ (ಬೆಳಗಾವಿ): ಮದ್ಯ ಸೇವಿಸಿದ ...

Vijaya Karnataka 8 Jun 2019, 5:00 am
ತೆಲಸಂಗ (ಬೆಳಗಾವಿ): ಮದ್ಯ ಸೇವಿಸಿದ ವ್ಯಕ್ತಿಯೊಬ್ಬ ತನ್ನೊಂದಿಗೆ ಪತ್ನಿಯನ್ನು ಕಳುಹಿಸಿಕೊಡುವಂತೆ ಮಾವನನ್ನು ಒತ್ತಾಯಿಸಿ ಶುಕ್ರವಾರ ಗ್ರಾಮದ ಅಂಬೇಡ್ಕರ್‌ ವೃತ್ತದಲ್ಲಿ ಗಂಟೆಗೂ ಅಧಿಕ ಕಾಲ ರಸ್ತೆತಡೆ ನಡೆಸಿ ಪ್ರತಿಭಟಿಸಿದ್ದಾನೆ.
Vijaya Karnataka Web BEL-7TELSANG1


ರಾಯಬಾಗ ತಾಲೂಕು ಮುಗಳಖೋಡ ಗ್ರಾಮದ ಹಣಮಂತ ಭಜಂತ್ರಿ ಪ್ರತಿಭಟನೆ ನಡೆಸಿದ ವ್ಯಕ್ತಿ. ಈತ ತೆಲಸಂಗದ ಮಹಾದೇವ ಭಜಂತ್ರಿ ಎಂಬುವರ ಪುತ್ರಿಯನ್ನು ಮದುವೆಯಾಗಿದ್ದಾನೆ. ಮದ್ಯ ಸೇವಿಸಿದ ನಶೆಯಲ್ಲಿದ್ದ ಈತ ಶುಕ್ರವಾರ ವಿಜಯಪುರ-ಅಥಣಿ ಮಾರ್ಗದ ಬಸ್‌ಗಳು ಗ್ರಾಮದ ಮೂಲಕ ಹೋಗುವಾಗ ರಸ್ತೆಯಲ್ಲಿ ಅಡ್ಡಲಾಗಿ ಕುಳಿತು ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದ. ಸಾರ್ವಜನಿಕರು ಬಸ್ಸಿಗೆ ದಾರಿ ಬಿಡುವಂತೆ ವಿನಂತಿಸಿದರೂ ಮೊಂಡುತನ ಪ್ರದರ್ಶಿಸುತ್ತಲೇ ಇದ್ದ. ವಾಹನಗಳು ಬಂದಾಗಲೆಲ್ಲ ಜನ ಆತನನ್ನು ರಸ್ತೆಯಿಂದ ಎತ್ತಿಕೊಂಡು ಪಕ್ಕಕ್ಕೆ ಕೂಡಿಸುತ್ತಿದ್ದರು. ನಂತರ ಆತ ಮತ್ತೆ ಹೋಗಿ ರಸ್ತೆಯಲ್ಲಿ ತನ್ನ ಬೈಕ್‌ ನಿಲ್ಲಿಸಿ ಅಡ್ಡಲಾಗಿ ಮಲಗುತ್ತಿದ್ದ.

''ನಾನು ಈ ಊರಿನ ಅಳಿಯ. ನನಗೆ ಹೆಣ್ಣು ಕೊಟ್ಟಿದ್ದೀರಿ. ನನ್ನ ಪತ್ನಿಯನ್ನು ನನ್ನ ಜತೆಗೆ ಕಳುಹಿಸಿಕೊಡಿ. ಇಲ್ಲವಾದರೆ ನಿಮ್ಮೂರಿನಲ್ಲಿಯೇ ನಾನು ಸತ್ತು ಹೋಗುತ್ತೇನೆ. ನನ್ನನ್ನು ಯಾರೂ ತಡೆಯಬೇಡಿ'' ಎಂದು ನಶೆಯಲ್ಲಿ ತೂರಾಡಿಕೊಂಡು ಬಂದು ರಸ್ತೆಗೆ ಅಡ್ಡಲಾಗಿ ಮಲಗುತ್ತಿದ್ದ. ಜನ ತಿಳಿ ಹೇಳಿದರೂ ಕೇಳದ ಈತ ಸಾಕಷ್ಟು ಸಮಯ ಸತಾಯಿಸಿದ. ಕೊನೆಗೆ ಜನ ''ನಿನ್ನ ಮಾವನ ಮನೆಯ ಮುಂದೆ ಹೋಗಿ ಕುಳಿತುಕೊ. ಅದು ಬಿಟ್ಟು ರಸ್ತೆಯಲ್ಲಿ ಕೂರಬೇಡ. ಇಲ್ಲಿಂದ ಹೋಗದಿದ್ದರೆ ಧರ್ಮದೇಟು ಬೀಳುತ್ತವೆ'' ಎಂದು ಎಚ್ಚರಿಸಿದ ನಂತರ ಆತ ತನ್ನ ಸಂಬಂಧಿಕರೊಂದಿಗೆ ಅಲ್ಲಿಂದ ಕಾಲ್ಕಿತ್ತ.

16 ವರ್ಷಗಳ ಹಿಂದೆ ನನ್ನ ಮಗಳನ್ನು ಹಣಮಂತನೊಂದಿಗೆ ವಿವಾಹ ಮಾಡಿಸಲಾಗಿತ್ತು. ಆಗಿನಿಂದಲೂ ಆತ ನಿತ್ಯ ಮದ್ಯ ಸೇವಿಸಿ ಪತ್ನಿಗೆ ಹಿಂಸೆ ನೀಡುತ್ತಿದ್ದ. ಆತನ ಕಾಟ ಸಾಕಾಗಿ ನನ್ನ ಮಗಳು ಮಕ್ಕಳೊಂದಿಗೆ ಕಣ್ಣೀರು ಹಾಕುತ್ತಿದ್ದಾಳೆ. ಮಗಳ ಕಷ್ಟ ನೋಡದೆ ಕರೆದುಕೊಂಡು ಬಂದಿದ್ದೇನೆ. ಈಗ ಇಲ್ಲಿಗೂ ಬಂದು ಕುಡಿದು ಗಲಾಟೆ ಮಾಡುತ್ತಿದ್ದಾನೆ.
- ಮಹಾದೇವ ಭಜಂತ್ರಿ, ಮಾವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ