ಆ್ಯಪ್ನಗರ

ಕಾಂಗ್ರೆಸ್‌ನಿಂದ ಈಸ್ಟ್‌ ಇಂಡಿಯಾ ಕಂಪನಿ ವ್ಯವಸ್ಥೆ ಅನುಕರಣೆ

ಬೆಳಗಾವಿ: ದೇಶದಲ್ಲಿಮಹಾತ್ಮ ಗಾಂಧೀಜಿ ಕಾಲದ ಕಾಂಗ್ರೆಸ್‌ ಈಗಿಲ್ಲ ...

Vijaya Karnataka 7 Sep 2019, 5:00 am
ಬೆಳಗಾವಿ: ದೇಶದಲ್ಲಿಮಹಾತ್ಮ ಗಾಂಧೀಜಿ ಕಾಲದ ಕಾಂಗ್ರೆಸ್‌ ಈಗಿಲ್ಲ. ಇವತ್ತಿನ ಇಟಾಲಿಯನ್‌ ಕಾಂಗ್ರೆಸ್‌ ಮತ್ತೊಂದು ಈಸ್ಟ್‌ ಇಂಡಿಯಾ ಕಂಪನಿಯ ವ್ಯವಸ್ಥೆ ತರಲು ಹೊರಟಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಕಿಡಿಕಾರಿದ್ದಾರೆ.
Vijaya Karnataka Web 6 LBS 1_53


ನಗರದಲ್ಲಿಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ''ಗಾಂಧೀಜಿಯವರು ಕಾಂಗ್ರೆಸ್‌ ವಿಸರ್ಜನೆ ಮಾಡುವಂತೆ ಆಗಲೇ ಹೇಳಿದ್ದರು. ಆದರೆ, ವಿಸರ್ಜನೆ ಮಾಡದೇ ಇಟಾಲಿಯನ್‌ ಕಾಂಗ್ರೆಸ್‌ ದೇಶದಲ್ಲಿದೆ'', ಎಂದು ಟೀಕಿಸಿದರು. ''ದೇಶದ ಇತಿಹಾಸದಲ್ಲಿಮೊದಲ ಬಾರಿಗೆ ಕೇಂದ್ರದ ಮಾಜಿ ಗೃಹ ಮಂತ್ರಿ ಪಿ.ಚಿದಂಬರಂ ಬಂಧನವಾಗಿದೆ. ಜತೆಗೆ ರಾಜ್ಯದ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್‌ ಅವರನ್ನು ಬಂಧಿಸಿ ಸಂವಿಧಾನಬದ್ಧ ಇ.ಡಿ. ಸಂಸ್ಥೆ ತನಿಖೆ ನಡೆಸುತ್ತಿದೆ. ತನಿಖೆಗೆ ಸಹಕಾರ ನೀಡದಿದ್ದರೆ ಅಧಿಕಾರಿಗಳು ಕೆಲಸ ಮಾಡಲು ಹೇಗೆ ಸಾಧ್ಯ?'', ಎಂದು ಪ್ರಶ್ನಿಸಿದರು.

''ಡಿ.ಕೆ. ಶಿವಕುಮಾರ್‌ ಬಂಧನ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಭಾವಚಿತ್ರ ಸುಡುತ್ತಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್‌ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ. ಈ ಹಿಂದೆ ನನ್ನ ಹಾಗೂ ಕೇಂದ್ರ ಸಚಿವರಾಗಿದ್ದ ಜಿ.ಎಂ. ಸಿದ್ಧೇಶ್ವರ್‌ ಅವರ ಮನೆ ಮೇಲೂ ಐಟಿ ದಾಳಿ ನಡೆದಿತ್ತು. ಸಂಶಯ ಬಂದವರ ಮೇಲೆ ಸಂವಿಧಾನಬದ್ಧ ಸಂಸ್ಥೆಗಳಿಗೆ ದಾಳಿ ನಡೆಸುವ ಅಧಿಕಾರವಿದೆ. ಅದೇ ರೀತಿ ಡಿಕೆಶಿ ವಿಚಾರಣೆ ನಡೆಯುತ್ತಿದೆ. ಅಧಿಕಾರಿಗಳಿಗೆ ಸಹಕಾರ ನೀಡಬೇಕು'', ಎಂದು ಅಂಗಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿಶಾಸಕ ಅನಿಲ್‌ ಬೆನಕೆ, ಬಿಜೆಪಿ ಮುಖಂಡರಾದ ಎಂ.ಬಿ. ಝಿರಲಿ, ರಾಜೇಂದ್ರ ಹರಕುಣಿ, ಬಸವರಾಜ ರೊಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ