ಆ್ಯಪ್ನಗರ

ಕೆವಿಜಿ ಬ್ಯಾಂಕ್‌ನಿಂದ ಆರ್ಥಿಕ ಅರಿವು ಕಾರ್ಯಕ್ರಮ

ಅಡಹಳ್ಳಿ: ಕೃಷಿಯನ್ನೇ ಅವಲಂಭಿಸಿ ಜೀವನ ಸಾಗಿಸುತ್ತಿರುವ ರೈತರು ಹಾಗೂ ಸ್ವ ಉದ್ಯೋಗ ಕೈಗೊಂಡ ಗ್ರಾಹಕರು ಬ್ಯಾಂಕ್‌ನ ಆಧುನಿಕ ತಂತ್ರಜ್ಞಾನವನ್ನು ಸದುಪಯೋಗ ...

Vijaya Karnataka 7 Jun 2019, 5:00 am
ಅಡಹಳ್ಳಿ : ಕೃಷಿಯನ್ನೇ ಅವಲಂಭಿಸಿ ಜೀವನ ಸಾಗಿಸುತ್ತಿರುವ ರೈತರು ಹಾಗೂ ಸ್ವ ಉದ್ಯೋಗ ಕೈಗೊಂಡ ಗ್ರಾಹಕರು ಬ್ಯಾಂಕ್‌ನ ಆಧುನಿಕ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೆವಿಜಿ ಬ್ಯಾಂಕ್‌ ವ್ಯವಸ್ಥಾಪಕ ಸಿ.ಎಸ್‌. ನರಗುಂದ ಹೇಳಿದರು.
Vijaya Karnataka Web BEL-6 ADAHALLI 2


ಅವರು ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ ಗುರುವಾರ ಜರುಗಿದ 'ಆರ್ಥಿಕ ಅರಿವು' ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ಬ್ಯಾಂಕ್‌ ವತಿಯಿಂದ ರೈತರಿಗೆ ಆಧುನಿಕ ಕೃಷಿ ಕೈಗೊಳ್ಳಲು ಹೆಚ್ಚಿನ ಸಾಲ ಸೌಲಭ್ಯಕ್ಕೆ ನೆರವು ನೀಡಲಾಗುವುದು. ಹನಿ ನೀರಾವರಿ ಸೇರಿದಂತೆ ಸುಧಾರಿತ ಬೇಸಾಯ ಹಾಗೂ ವ್ಯಾಪಾರಿಗಳಿಗೆ ವಾಹನ ಸಾಲ ಸೇರಿದಂತೆ ಎಲ್ಲ ರೀತಿಯ ಸಾಲ ಸೌಲಭ್ಯ ನೀಡಲಾಗುವುದು. ಗ್ರಾಹಕರು ಹೆಚ್ಚಾಗಿ ನಗದು ವಹಿವಾಟು ನಡೆಸದೇ ಡಿಜಿಟಲ್‌ ಬ್ಯಾಂಕಿಂಗ್‌ ಮೂಲಕ ಹಣ ಸಂದಾಯ ಮಾಡಬೇಕೆಂದು ತಿಳಿಸಿದ ಅವರು ಅವುಗಳಿಂದ ಆಗುವ ಪ್ರಯೋಜನಗಳ ಕುರಿತು ವಿವರಿಸಿದರು.

ಹಿರಿಯ ಸಹಕಾರಿ ನಿರ್ದೇಶಕ ಅಡಿವೆಪ್ಪಾ ಕೆಂಚಣ್ಣವರ ಮಾತನಾಡಿದರು. ಈ ವೇಳೆ ಉಪ ವ್ಯವಸ್ಥಾಪಕ ಪ್ರವೀಣಕುಮಾರ, ಪಿ. ಸತೀಶ, ಸಂತೋಷ ಬೆಳ್ಳಂಕಿ, ಶ್ರೀಕಾಂತ ಸಂಕ, ಗ್ರಾಹಕರಾದ ದಾನಯ್ಯ ಮಠಪತಿ, ಮಲ್ಲಪ್ಪಾ ಖೋಬ್ರಿ, ಅಸ್ಲಾಂ ಮುಲ್ಲಾ, ಮಲ್ಲಿಕಾ ಕೋಹಳ್ಳಿ, ಸುಜಾತಾ ಸಿರಿಗೀರಿ, ವಿಠ್ಠಲ ಬೆಳಗಲಿ ಇತರರು ಇದ್ದರು. ಉದಯ ಡಂಬಳಕರ ಸ್ವಾಗತಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ