ಆ್ಯಪ್ನಗರ

ಕಬ್ಬು ಸಾಗಾಟಕ್ಕೆ ಅಡ್ಡಿಯಾಗುತ್ತಿರುವ ವಿದ್ಯುತ್‌ ತಂತಿಗಳು

ಸಂತೋಷ ಗಿರಿ ಬಾವನಸೌಂದತ್ತಿ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವುದನ್ನು ಪ್ರಾರಂಭಿಸಿದ್ದು, ತಾಲೂಕಿನ ಗ್ರಾಮದ ರೈತರು ...

Vijaya Karnataka 24 Nov 2019, 5:00 am
ಸಂತೋಷ ಗಿರಿ ಬಾವನಸೌಂದತ್ತಿ
Vijaya Karnataka Web 23 BSDT 01_53
ಬಾವನಸೌಂದತ್ತಿ ಗ್ರಾಮದಲ್ಲಿವಿದ್ಯುತ್‌ತಂತಿ ಕೆಳಗೆ ಆಗಿದ್ದರಿಂದ ತುಂಬಿದ ಕಬ್ಬಿನ ಟ್ಯಾಕ್ಟರ್‌ ಸಾಗಿಸಲು ತಂತಿಗಳನ್ನು ಕಟ್ಟಿಗೆಯಿಂದ ಮೇಲಕ್ಕೆತ್ತಿರುವುದು.

ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವುದನ್ನು ಪ್ರಾರಂಭಿಸಿದ್ದು, ತಾಲೂಕಿನ ಗ್ರಾಮದ ರೈತರು ಸುತ್ತಮುತ್ತಲಿನ ಕಾರ್ಖಾನೆಗಳಿಗೆ ಕಬ್ಬನ್ನು ಸಾಗಿಸುವಲ್ಲಿನಿರತರಾಗಿದ್ದಾರೆ. ಆದರೆ,ಬಾವನಸೌಂದತ್ತಿ ಗ್ರಾಮದ ರೈತರು ಮಾತ್ರ ಹೆಸ್ಕಾಂ ಬೇಜಾಬ್ದಾರಿಯಿಂದ ತೊಂದರೆ ಅನುಭವಿಸುವಂತಾಗಿದೆ.

ಬಾವನಸೌಂದತ್ತಿ ಗ್ರಾಮದ ರೇಣುಕಾ ವೃತ್ತದಿಂದ ಕಾಟೆ ತೋಟದ ರಸ್ತೆ ಎತ್ತರವಾಗಿದ್ದರಿಂದ, ವಿದ್ಯುತ್‌ ತಂತಿಗಳು ಕೆಳ ಮಟ್ಟದಲ್ಲಿಹಾದು ಹೋಗಿದ್ದು ಕಬ್ಬಿನ ಟ್ರ್ಯಾಕ್ಟರ್‌ ಸಾಗಲು ತೀವ್ರ ತೊಂದರೆಯಾಗುತ್ತಿದೆ. ಪ್ರತಿ ಸಲ ಈ ರಸ್ತೆ ಮೂಲಕ ಹಾದು ಹೋಗುವಾಗ ಕಬ್ಬಿನ್‌ ಟ್ರ್ಯಾಕ್ಟರ್‌ ನಿಲ್ಲಿಸಿ, ಕಟ್ಟಿಗೆಗಳ ಮೂಲಕ ತಂತಿಗಳನ್ನು ಮೇಲೆ ಹಿಡಿದು ಸಾಗಿಸಬೇಕಾಗದ ಅನಿವಾರ್ಯತೆ ಉಂಟಾಗಿದೆ. ಇದುಅಪಾಯದ ಕೆಲಸವಾಗಿದ್ದು, ಟ್ರ್ಯಾಕ್ಟರ್‌ ಚಾಲಕರು ಭಯದಿಂದಲೇ ಈ ಕೆಲಸ ಮಾಡಿ ತಮ್ಮ ಟ್ರ್ಯಾಕ್ಟರ್‌ ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ.

ಗ್ರಾಮದ ಕೆಲ ರೈತರು ಮತ್ತು ಟ್ರ್ಯಾಕ್ಟರ್‌ ಮಾಲೀಕರು, ಚಾಲಕರು ಹೆಸ್ಕಾಂನಿಂದ ಎಲ್‌ಸಿ ಪಡೆದು (ವಿದ್ಯುತ್‌ ಕಡಿತಗೊಳಿಸಿ) ಕಬ್ಬಿನ ವಾಹನಗಳನ್ನು ಸಾಗಿಸುವಲ್ಲಿನಿರತರಾಗಿದ್ದಾರೆ. ಇದು ಕಬ್ಬು ಸಾಗಿಸುವವರಿಗೆ ಅಡಚಣೆಯಾಗಿದ್ದು, ರೈತರು, ಟ್ರ್ಯಾಕ್ಟರ್‌ ಚಾಲಕರು ಹೆಸ್ಕಾಂಗೆ ಹಿಡಿಶಾಪ ಹಾಕುತ್ತಿದ್ದಾರೆ.

ಇಷ್ಟಾದರೂ ಹೆಸ್ಕಾಂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದ ಕಾರಣ ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಹೆಸ್ಕಾಂ ಕಬ್ಬಿನ ಟ್ಯಾಕ್ಟರ್‌ ಸಾಗಲು ಅನುಕೂಲ ಮಾಡಿಕೊಡಬೇಕೆಂಬುದು ಗ್ರಾಮದ ರೈತರ ಒತ್ತಾಯವಾಗಿದೆ.

ನಾನು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದರಿಂದ ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಎರಡು ದಿನದಲ್ಲಿಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
- ನಾಗರಾಜ ಯಳಕರ, ಹೆಸ್ಕಾಂ ಅಧಿಕಾರಿ, ರಾಯಬಾಗ

ಸುಮಾರು 2 ವರ್ಷಗಳಿಂದ ಹೆಸ್ಕಾಂ ಇಲಾಖೆಯವರಿಗೆ ಮನವಿ ನೀಡುತ್ತಿದ್ದರೂ, ಇತ್ತಯಾರೂ ಗಮನ ಹರಿಸುತ್ತಿಲ್ಲ. ಪದೇ ಪದೇ ಎಲ್‌ಸಿ ಕೇಳಿದರೂ ಕೊಡುವುದಿಲ್ಲ. ಹಾಗೇ ಕಬ್ಬು ತುಂಬಿ ಟ್ಯಾಕ್ಟರ್‌ ಸಾಗಿಸಿದರೆ ಕಬ್ಬು ಸುಟ್ಟು ಹೋಗುವ ಸಂಭವವಿರುತ್ತದೆ. ರಾತ್ರಿಯೂ ಕಬ್ಬು ತುಂಬಿದ ಟ್ಯಾಕ್ಟರ್‌ ಹೋಗುವುದರಿಂದ ಹೆಚ್ಚಿನ ಅನಾಹುತ ಆಗುವ ಸಂಭವವುಂಟು.
- ಅಜಿತ್‌ ಕಾಮಗೌಡ, ಸ್ಥಳೀಯ ರೈತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ